Tuesday 19 February 2019
ವಿಜಯಪುರ: ಬರೋಬ್ಬರಿ ಒಂಭತ್ತನೇ ತಿಂಗಳು. ಇಲ್ಲಿಯವರೆಗೂ ನಗರದ ಅಭಿವೃದ್ಧಿ, ಸಮಸ್ಯೆಗಳ ಕುರಿತಂತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್–ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಹಿರಿಯ ಸದಸ್ಯರು ಸಹ ಸಾಮಾನ್ಯ ಸಭೆ ನಿಗದಿ ಪಡಿಸಲು ಮುಂದಾಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಕಟು ಟೀಕೆ ವ್ಯಕ್ತವಾಗಿದೆ.
ತಾಳಿಕೋಟೆ: ಈದ್ ಉಲ್ ಫಿತ್ರ್ ಆಚರಿಸುವ ಮುಸಲ್ಮಾನರು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ ಭರ್ಜರಿ ಭೋಜನ ಹಾಕಿಸುವುದು ಸಾಮಾನ್ಯ. ಆದರೆ, ಹಬ್ಬದ ದಿನ ರಸ್ತೆಯಲ್ಲಿ ಸಂಚರಿಸುವವರಿಗೆಲ್ಲ ತಾಲ್ಲೂಕಿನ ಮೂಕಿಹಾಳ ದರ್ಗಾದ ವತಿಯಿಂದ ಶೀರ್ಕುರ್ಮಾ (ಸಿಹಿ ಖಾದ್ಯ) ವಿತರಿಸಲಾಯಿತು.
ಬೆಳಿಗ್ಗೆ ಪ್ರಾರ್ಥನೆ ಮುಗಿಸಿದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎಚ್.ಪಟೇಲ್ ನೇತೃತ್ವದ ತಂಡ ರಸ್ತೆ ಪಕ್ಕದಲ್ಲಿಯೇ ದೊಡ್ಡ ಬೋಗೋಣಿಯಲ್ಲಿ ಶೀರ್ಕುರ್ಮಾ ತಯಾರಿಸಿತು.
ದೇವರ ಹಿಪ್ಪರಗಿ: ಇಲ್ಲಿನ ಐತಿಹಾಸಿಕ ಹಿನ್ನೆಲೆಯ ರಾವುತರಾಯನ ರೂಪಾಂಲಕಾರ ಪೂರ್ಣಗೊಂಡಿದ್ದು, ಬಂಡಿಯಾತ್ರೆಯ ಮೂಲಕ ಅಸಂಖ್ಯಾತ ಭಕ್ತರ ಉದ್ಘೋಷಗಳೊಂದಿಗೆ ಪುರಪ್ರವೇಶವಾಯಿತು.
ಬೈಂದೂರು: ಉತ್ತರ ಕನ್ನಡ ಹಾಗೂ ಉಡುಪಿ ಗಡಿ ತಾಲ್ಲೂಕು ಬೈಂದೂರು. ವಾರಾಹಿ ನದಿ ತನಕ ಹರಡಿಕೊಂಡಿದ್ದು ಅತ್ಯಂತ ಅಧಿಕ ಭೂ ವಿಸ್ತಾರ ಹೊಂದಿರುವ ವಿಧಾನಸಭಾ ಕ್ಷೇತ್ರ. ತಿಂಗಳುಗಳ ಹಿಂದಷ್ಟೆ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. 26 ಗ್ರಾಮಗಳು ಮತ್ತು ಕುಂದಾಪುರ ತಾಲ್ಲೂಕಿಗೆ ಸೇರಿದ 39 ಗ್ರಾಮಗಳು ಸೇರಿ 65 ಗ್ರಾಮ ಹೊಸ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತವೆ. 43 ಗ್ರಾಮ ಪಂಚಾಯಿತಿ ಸೇರಿವೆ.
ದಾವಣಗೆರೆ: ರೈತರಿಗೆ ಅನ್ಯಾಯ ಆಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್.ಶಂಕರ್ ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಡು ಒತ್ತುವರಿ ಆಗುವುದನ್ನು ತಡೆಯುವುದು ಹಾಗೂ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿದ್ದಾಪುರ: ಗ್ರಾಮೀಣ ಭಾಗದ ಜನರ ಜೀವನಕ್ಕೆ ಯಾವುದೇ ಸಮಸ್ಯೆ ಬಾರದೇ ಇರಲು ಹಳ್ಳಿಗಳ ಸಂಪರ್ಕ ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಹಳ್ಳಿ-ಪೇಟೆಗಳ ನಡುವಿನ ಸಂಪರ್ಕ ಕೊಂಡಿ ಕಳಚಿದರೆ ಹಳ್ಳಿ ನಿವಾಸಿಗಳ ಗೋಳನ್ನು ದೇವರಿಗೆ ಹೇಳಬೇಕು.
ಕುಂದಾಪುರ: ಇಲ್ಲಿನ ಪ್ರಸಿದ್ದ ಕುಂದೇಶ್ವರ ದೇವಸ್ಥಾನದ ಹಿಂದಿನ ಆಡಳಿತ ಧರ್ಮದರ್ಶಿ, ಶೃಂಗೇರಿ ಶ್ರೀ ಶಾರದ ಮಠದ ಪ್ರಾಂತೀಯ ಧರ್ಮಾಧಿಕಾರಿ, ವಿಶ್ರಾಂತ ಉಪನ್ಯಾಸಕ, ಸಾಹಿತಿ ಹಾಗೂ ಹಿರಿಯ ವಿದ್ವಾಂಸ ಡಾ.ಎಚ್.ವಿ.ನರಸಿಂಹಮೂರ್ತಿ (72) ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸಾಲಿಗ್ರಾಮ (ಬ್ರಹ್ಮಾವರ): ಸಾಲಿ ಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಕಡ ತೆಂಕಹೋಳಿ ನಿವಾಸಿ ಕಾಳಿಂಗ ಹೊಳ್ಳ ತಮ್ಮ ಮನೆ ಸಮೀಪದ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ನಡೆಸಿ ಇದೀಗ ತನ್ನ ಕನಸು ನನಸಾಗಿಸಿಕೊಂಡಿದ್ದಾರೆ.
ತುಮಕೂರು: ದೇಶದಲ್ಲಿಯೇ ಉತ್ಕೃಷ್ಟ ಹಲಸಿನ ನಾಡುಗಳನ್ನು ಪಟ್ಟಿ ಮಾಡಿದರೆ ತುಮಕೂರು ಜಿಲ್ಲೆ ಪ್ರಮುಖ ಸ್ಥಾನ ಪಡೆಯುತ್ತದೆ. ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಸಿಎಚ್ಇಎಸ್) ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ತಳಿಯ ಹಲಸನ್ನು ಪಟ್ಟಿ ಮಾಡಿದೆ.
ತುಮಕೂರು: ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್ ), ಸುರಕ್ಷಿತ ವಿದ್ಯುತ್ ಸರಬರಾಜು (ಎಲ್ಟಿಡಿ) ಪೆಟ್ಟಿಗೆಗಳು, ಮೀಟರ್ ಬಾಕ್ಸ್ಗಳು ಅನಾಹುತಕ್ಕೆ ಬಾಯ್ತೆರೆದಿವೆ.
ತುಮಕೂರು: ನಮ್ಮೊಳಗಿನ ಎಲ್ಲ ತರಹದ ತಾರತಮ್ಯಗಳನ್ನು ನಿವಾರಿಸಿ ಸುಂದರ ಬದುಕು ಕಟ್ಟಿಕೊಳ್ಳಲು ತತ್ವಪದಗಳು ಮದ್ದಾಗಬಲ್ಲದು ಎಂದು ವಿಮರ್ಶಕ ಡಾ.ನಟರಾಜ ಬೂದಾಳು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕ ಒಕ್ಕೂಟದಿಂದ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‘ತತ್ವಪದಗಳ ಮಹತ್ವ’ ಕುರಿತು ಮಾತನಾಡಿದರು.
ಶಿವಮೊಗ್ಗ: ತುಂಗಾ ನದಿಯ ದಡದಲ್ಲಿ ವಾಯುವಿಹಾರಕ್ಕಾಗಿ ನಿರ್ಮಿಸಿರುವ ಪಾದಚಾರಿ ರಸ್ತೆಯು ರಾತ್ರಿ ಸಮಯದಲ್ಲಿ ಕಿಡಿಗೇಡಿಗಳ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದ್ದು, ಜನರು ಭಯ ಪಡುವಂತಾಗಿದೆ.
ನವದೆಹಲಿ: ಡೇಟಿಂಗ್ ಆ್ಯಪ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ನೂರಾರು ಗಂಡಸರನ್ನು ಮೋಸ ಮಾಡಿದ ಜೋಡಿಯೊಂದನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಶಿವಮೊಗ್ಗ: ಭಗವದ್ಗೀತೆ, ಬೈಬಲ್, ಕುರಾನ್ ಬೇರೆಯಲ್ಲ. ಇವೆಲ್ಲವೂ ಜ್ಞಾನದ ಮಾರ್ಗಗಳು ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ, ಬಸವ ಸಮಿತಿ ಹಾಗೂ ಸದ್ಭಾವನಾ ವೇದಿಕೆ ಶಿವಮೊಗ್ಗದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸದ್ಭಾವನಾ ವೇದಿಕೆಯ ಉದ್ಘಾಟನೆ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ: ಜನರಲ್ಲಿ ಕೋಮುವಾದ ಹರಡುವುದು ಸುಲಭ. ಆದರೆ ಇದಕ್ಕೆ ವಿರುದ್ಧವಾಗಿ ಜಾತ್ಯತೀತತೆಯ ಪ್ರಜ್ಞೆ ಬೆಳೆಸುವುದು ಕಷ್ಟ ಎಂದು ಪ್ರಗತಿಪರ ಚಿಂತಕ ದಿನೇಶ್ ಅಮೀನ್ಮಟ್ಟು ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ‘ಚುನಾವಣೆ: ಒಳ, ಹೊರಗೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಗರ: ಪಹಣಿಪತ್ರದಲ್ಲಿನ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ್ ಹೇಳಿದರು.
ಭಾನುವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಪಹಣಿಯಲ್ಲಿನ ದೋಷಗಳನ್ನು ಸರಿಪಡಿಸಲು ಅಗತ್ಯವಿದ್ದರೆ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸಲು ಇಲ್ಲಿನ ಅಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ ಎಂದು ಹೇಳಿದರು.
ಮೈಸೂರು: ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ನೀಡುವ ಗಿಡಮೂಲಿಕೆ ಔಷಧ ಪದ್ಧತಿಯ ವಿಧಾನವನ್ನು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಸಂರಕ್ಷಿಸಿದೆ.
ಗಿಡಮೂಲಿಕೆಗಳಿಂದ ಔಷಧ ತಯಾರಿಸುವ ಹಾಗೂ ನೀಡುವ ಪದ್ಧತಿ ಹಕ್ಕಿಪಿಕ್ಕಿ ಸಮುದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಆದರೆ, ಈ ವಿಚಾರವನ್ನು ಸಮುದಾಯದವರು ಇತರರಿಗೆ ಹೇಳುವುದಿಲ್ಲ. ಹೀಗಾಗಿ, ಸಂಸ್ಥೆಯು ಅವರ ಮನವೊಲಿಸಿ ಪಾರಂಪರಿಕ ಜ್ಞಾನವನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಮೈಸೂರು: ತಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ನಿಂದ ಸ್ಪರ್ಧಿಸಿ ಗೆದ್ದಿರುವ ಎಂ.ಅಶ್ವಿನ್ ಕುಮಾರ್ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜತೆಗೆ ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಕಲ್ಪಿಸುವ ಗುರಿ ಇಟ್ಟುಕೊಂಡಿದ್ದಾರೆ. ಸತತ 15 ವರ್ಷಗಳಿಂದ ಏಕವ್ಯಕ್ತಿಯ ಹಿಡಿತದಲ್ಲಿದ್ದ ತಿ.ನರಸೀಪುರದಲ್ಲಿ ಬದಲಾವಣೆ ತರಲು ಮುಂದಾಗಿರುವ ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ.
ಹೊಸ ಜವಾಬ್ದಾರಿ ಹೇಗೆ ನಿಭಾಯಿಸುವಿರಿ?
ಎಚ್.ಡಿ.ಕೋಟೆ: ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಕೊಲ್ಲಿಯಿಂದ ಕಾಡಂಚಿನ ಗ್ರಾಮಗಳಾದ ಕಾಳಯ್ಯನಹಳ್ಳ ಮತ್ತು ಜಾಗನಕೋಟೆಗೆ ತೆರಳುವ ರಸ್ತೆ ಒಂದೆಡೆ ಕೊರಕಲು ಬಿದ್ದು ಸಂಪೂರ್ಣ ಹಾಳಾಗಿದ್ದರೆ, ಮತ್ತೊಂದೆಡೆ ಕೆಸರು ಗದ್ದೆಯಂತಾಗಿದೆ. ಮಳೆಗಾಲದಲ್ಲಿ ಈ ಭಾಗದ ಜನರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗುತ್ತದೆ.
ಮೈಸೂರು: ಜೂನ್ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಅರಮನೆಗಳ ನಗರಿಯಲ್ಲಿ ತಾಲೀಮು ಮತ್ತಷ್ಟು ಬಿರುಸುಗೊಂಡಿದೆ.
ಜಿಲ್ಲಾಡಳಿತವು ನಗರದ ರೇಸ್ ಕೋರ್ಸ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಸುಮಾರು 10 ಸಾವಿರ ಯೋಗ ಉತ್ಸಾಹಿಗಳು ಭಾಗವಹಿಸಿದ್ದರು.
ಯೋಗ ತರಬೇತಿ ಕೇಂದ್ರಗಳ ಯೋಗಪಟುಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.
ಬೆಂಗಳೂರು, ಜೂನ್ 17: ಮುಂಗಾರು ಮಳೆ ಮಾರುತಗಳು ಸದ್ಯ ತನ್ನ ದಿಕ್ಕನ್ನು ಕೊಂಕಣ ಭಾಗಕ್ಕೆ ತಿರುಗಿಸಿದೆ. ಕರ್ನಾಟಕ ಕರಾವಳಿ, ಗೋವಾ, ಉತ್ತರ ತಮಿಳುನಾಡು, ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಭಾನುವಾರ(ಜೂಣ್ 17) ಕ್ಕೆ ನೀಡಿರುವ ಮುನ್ಸೂಚನೆಯಂತೆ ಮುಂಗಾರು ಮಾರುತಗಳು ಮುಂಬೈ
ನವದೆಹಲಿ, ಜೂ 16: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜಧಾನಿಯ ಆಂಧ್ರಭವನದಲ್ಲಿ ಮೂರು ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಭೇಟಿ ಮಾಡಿ, ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾನುವಾರ
ಬೆಂಗಳೂರು, ಜೂನ್ 16: ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ 25,600 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ ಆದರೆ ರಾಜ್ಯದ ಹಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೂಕ್ತ ಸಂಖ್ಯೆಯಲ್ಲಿ ಶಿಕ್ಷಕರೇ ಇಲ್ಲ ಹಾಗಾಗಿ ಅರ್ಹ ಶಿಕ್ಷಣ ತರಬೇತಿ ಪಡೆದವರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲು ಶಿಕ್ಷಣ
ಮುಂಗಾರು ಅಧಿಕೃತವಾಗಿ ಕಾಲಿಡುವುದಕ್ಕೂ ಮುನ್ನ ಚಂಡಮಾರುತ ದೇಶದ ಅನೇಕ ಭಾಗಗಳಲ್ಲಿ ಭರ್ಜರಿ ಮಳೆಸುರಿಸಿದೆ. ಇನ್ನು ಮುಂಗಾರಿನ ಮಾರುತಗಳು ಹೊತ್ತು ತಂದ ಮಳೆ ಎಲ್ಲೆಡೆ ಧಾರಾಕಾರವಾಗಿ ಸುರಿದಿದೆ. ಕರಾವಳಿ, ಮಲೆನಾಡಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಗಾರು ಕಾಲಿಟ್ಟ ಹದಿನೈದು ದಿನದಲ್ಲಿಯೇ ಭೂಮಿಯ ಒಡಲಿನಿಂದ ಜಲದ ಕಣ್ಣು ತೆರೆದುಕೊಂಡಿದೆ. ಇಲ್ಲಿಯವರೆಗೂ ಚೆನ್ನಾಗಿ ಮಳೆಯಾಗಿದೆ. ಅಂತರ್ಜಲವೂ ಸ್ವಲ್ಪ ಏರಿಕೆಯಾಗಿದೆ. ಇನ್ನು
ಬೆಂಗಳೂರು, ಜೂನ್ 16: ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ತಂದೆ ಅಶೋಕ ವಾಘ್ಮೋರೆ ಇಂದು ತಮ್ಮನ್ನು ಪ್ರಶ್ನಿಸಲು ಬಂಧ ಮಾಧ್ಯಮದವರನ್ನು ಧೈನ್ಯದಿಂದ ಬೇಡಿಕೊಂಡರು. 'ನಿಮ್ಮ ಕೈ ಮುಗಿಯುತ್ತೇನೆ ಮಗನ ಬಗ್ಗೆ ಏನೂ ಕೇಳಬೇಡಿ, ನಾನು ಈಗಾಗಲೇ ಬಹಳ ನೊಂದಿದ್ದೇನೆ, ನೀವು ಪ್ರಶ್ನೆ ಕೇಳಿ ಇನ್ನೂ ನೋಯಿಸಬೇಡಿ' ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದು ಬೇಡಿಕೊಂಡರು.
ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರದಿಂದ ಆರಂಭವಾದ, ಬಿಜೆಪಿ ವಿರೋಧ ಪಕ್ಷಗಳ 'ಸಂಘಟಿತ' ಹೋರಾಟ, ಇತರ ಎಲ್ಲಾ ರಾಜ್ಯಗಳಲ್ಲಿ ಹಬ್ಬುತ್ತಿದ್ದು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೆಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಈ ಬಿಜೆಪಿ ವಿರೋಧಿಗಳ 'ಮಹಾಘಟಬಂಧನ' ಎಷ್ಟು ದಿನಗಳ ಕಾಲ? ಆಯಾ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟುಗಳನ್ನು ಹಂಚಿಕೊಳ್ಳಬೇಕು? ಎಂಬುದರಿಂದ ಹಿಡಿದುಕೊಂಡು, ಒಂದುವೇಳೆ ಬಿಜೆಪಿಯನ್ನೂ ಮೀರಿಸಿ ಹೆಚ್ಚು ಸೀಟುಗಳನ್ನು ಗಳಿಸಿದರೆ, ಮುಂದಿನ
ಬೆಂಗಳೂರು, ಜೂನ್ 16: ಫ್ಲೈಯಿಂಗ್ ಆಫೀಸರ್ ಎಂ.ಆರ್.ಮೇಘನಾ ಶಾನಬೋಗ್ ಭಾರತೀಯ ವಾಯು ದಳದ ಸೂಜಿಗಲ್ಲಿನ ಹುಡುಗಿಯಾಗಿ ಹೊರ ಹೊಮ್ಮಿದ್ದು, ದೇಶದ ಆರನೇ ಮಹಿಳಾ ಯುದ್ಧ ವಿಮಾನದ ಪೈಲಟ್ ಆಗಿ ನೇಮಕಗೊಂಡಿದ್ದಾಳೆ. ಅಂದ ಹಾಗೆ ಮೇಘನಾ ದಕ್ಷಿಣ ಭಾರತದ ಪ್ರಥಮ ಯುದ್ಧ ವಿಮಾನ ಪೈಲೆಟ್ ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ. ದುಂಡಿಗಲ್ನ ವಾಯುದಳ ಅಕಾಡೆಮಿ (ಎಎಫ್ಎ)ಯಲ್ಲಿ ಶನಿವಾರ ಜಂಟಿ ಪದವಿ
ಅಪ್ಪ ಅಂದ್ರೆ ಹಾಗೇ. ಆಕಾಶಕ್ಕೂ ಮಿಗಿಲಾದವನು. ಅನುಭವದ ಖನಿ, ಸಾಂತ್ವನದ ಗಣಿ. ಬಡತನ, ಬೇಸರ, ಕೊರಗು, ಅವಮಾನ ಎಲ್ಲವನ್ನೂ ತನ್ನ ಜೋಳಿಗೆಯೊಳಗೇ ಬಚ್ಚಿಟ್ಟು ಮಕ್ಕಳ ಮುಂದೆ ಮನಸಾರೆ ನಕ್ಕವನು. ಆತ ಫಲಾಪೇಕ್ಷೆಯಿಲ್ಲದೆ ಮೊಗೆ ಮೊಗೆದು ಕೊಟ್ಟ ಪ್ರೀತಿಯನ್ನು ಲೆಕ್ಕವಿಟ್ಟವರ್ಯಾರು? ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ( ಈ ಬಾರಿ ಜೂನ್ 17) ವನ್ನು ಜಗತ್ತಿನಾದ್ಯಂತ ಅಪ್ಪಂದಿರ ದಿನವನ್ನಾಗಿ
ಬೆಂಗಳೂರು, ಜೂನ್ 16: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಕರ್ನಾಟಕದ ವಿಚಾರವಾದಿಗಳು, ಕೆಲವು ಸ್ವಾಮೀಜಿಗಳು ಸೇರಿದಂತೆ ಸಚಿವರನ್ನೂ ಕೊಲ್ಲಲು ಯೋಜನೆ ರೂಪಿಸಿದ್ದರು ಎಂಬ ಅಂಶ ಎಸ್ಐಟಿ ತನಿಖೆಯಿಂದ ಬಹಿರಂಗವಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೊರಾಟದ ಮುಂಚೂಣಿಯಲ್ಲಿದ ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಹಾಗೂ ಗಣಿ ಮತ್ತು ಭು ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರನ್ನು ಕೊಲ್ಲಲು
ವಾಷಿಂಗ್ಟನ್, ಜೂನ್ 16: ಪೇಶಾವರ ಎಂದೊಡನೆ ಯಾರಿಗಾದರೂ ನೆನಪಾಗುವುದು, ಕ್ಷಣಕಾಲ ಕರುಳು ಕಿವುಚುವುದು ಆ ಘಟನೆ. 2014 ರ ಡಿಸೆಂಬರ್ 16! ವಿದ್ಯೆ ಕಲಿಯುವದಕ್ಕೆ ಶಾಲೆಗೆ ತೆರಳಿದ್ದ ಏನೂ ಅರಿಯದ ಮುಗ್ಧ ಮಕ್ಕಳು ಮನೆಗೆ ಹಿಂದಿರುಗಿದ್ದು ಹೆಣವಾಗಿ! ಪೇಶಾವರದ ಸೈನಿಕ ಶಾಲೆಯ 132 ಮಕ್ಕಳನ್ನು ನಿಷ್ಕಾರಣವಾಗಿ ಕೊಂದ ಆ ಪಾಪಿ ಉಗ್ರನೇ ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ
ಬೆಂಗಳೂರು, ಜೂನ್ 16: ಸಚಿವೆ ಜಯಮಾಲಾ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯರ ಅಸಮಾಧಾನ ನಿಲ್ಲುತ್ತಿಲ್ಲ. ಜಯಮಾಲಾರನ್ನು ಮೇಲ್ಮನೆಯ ಸಭಾನಾಯಕಿ ಮಾಡುವ ನಿರ್ಣಯಕ್ಕೆ ಪರಿಷತ್ನ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಷತ್ನ ಹಿರಿಯ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನೂ ಹಲವರು ಜಯಮಾಲಾರನ್ನು ಮೇಲ್ಮನೆಯ ಸಭಾ ನಾಯಕಿ ಮಾಡುವ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿದ್ದು, ಜಯಮಾಲಾ ವಿರುದ್ಧ
ಬೆಂಗಳೂರು, ಜೂನ್ 16: "ಶ್ರೀರಾಮಸೇನೆಗೂ ಪರಶುರಾಮ್ ಗೂ ಯಾವುದೇ ಸಂಬಂಧವಿಲ್ಲ. ಆತ ಎಸ್ ಇಟಿ ಬಳಿ ಏನು ಹೇಳಿದ್ದಾನೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. "ನನ್ನೊಂದಿಗೆ ಸಾಕಷ್ಟು ಜನ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ, ನನ್ನೊಂದಿಗಿನ ಚಿತ್ರವಿದೆ ಎಂದ ಮಾತ್ರಕ್ಕೆ ಅವರಿಗೂ ಶ್ರೀರಾಮಸೇನೆಗೂ, ನನಗೂ ಸಂಬಮಧವಿದೆ ಎನ್ನುವುದಕ್ಕಾಗುವುದಿಲ್ಲ" ಎಂದು ಸಹ ಅವರು
ಗುವಾಹಟಿ, ಜೂನ್ 16: ಮಗಳ ಮೇಲೆ ಅತ್ಯಾಚಾರ ಎಸೆದ ಆರೋಪ ಎದುರಿಸುತ್ತಿರುವ ತಂದೆ, ತನ್ನ ಪತ್ನಿಯನ್ನು ನ್ಯಾಯಾಲಯದ ಆವರಣದಲ್ಲಿಯೇ ಕತ್ತು ಸೀಳಿ ಕೊಲೆ ಮಾಡಿದ ಭೀಕರ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ದಿಬ್ರುಗಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದೊಳಗೆ ಶುಕ್ರವಾರ ಈ ಘಟನೆ ನಡೆದಿದ್ದು, ಆರೋಪಿ ಪೂರ್ಣ ನಹಾರ್ ಡೆಕಾನನ್ನು ಕೂಡಲೇ ಸೆರೆಹಿಡಿದ ಸಾರ್ವಜನಿಕರು ಆತನನ್ನು
ಶ್ರೀನಗರ, ಜೂನ್ 16: "ಇನ್ನು 32 ಗಂಟೆಗಳಲ್ಲಿ ನನ್ನ ಹುತಾತ್ಮ ಮಗನ ಸಾವಿನ ಪ್ರತೀಕಾರ ತೀರಿಸಿ" ಎಂದು ಭಾವುಕರಾಗಿ, ಅಷ್ಟೇ ಆಕ್ರೋಶಭರಿತರಾಗಿ ಮನವಿ ಮಾಡಿದ್ದಾರೆ ಹುತಾತ್ಮ ಯೋಧ ಔರಂಗಜೇಬ್ ತಂದೆ ಹನೀಫ್. ತಮ್ಮ ಮಗನನ್ನು ಸಾವಿಗೆ ಕಾರಣವಾಗಿದ್ದು ಪಾಕಿಸ್ತಾನ. ಆತನನ್ನು ಕೊಂದ ಭಯೋತ್ಪಾದಕರ ವಿರುದ್ಧ ಕೂಡಲೇ ಪ್ರತೀಕಾರ ತೀರಿಸಿಕೊಳ್ಳಬೇಕು. ಇದು ನಿಮಗೆಲ್ಲರಿಗೂ ನನ್ನ ಮನವಿ. ನನ್ನ ಮಗನನ್ನು
ನವದೆಹಲಿ, ಜೂನ್ 16: ಗಾಜಿನ ವಿಜ್ಞಾನದಲ್ಲಿ 300 ಕ್ಕೂ ಹೆಚ್ಚು ಪ್ರಕಾರದ ಆಪ್ಟಿಕಲ್ ಗ್ಲಾಸ್ ಗಳನ್ನು ಪರಿಶೋಧಿಸಿದ ಜರ್ಮನಿಯ ಖ್ಯಾತ ವಿಜ್ಞಾನಿ ಮಾರ್ಗಾ ಫೌಲ್ ಸ್ಟಿಶ್ ಅವರ 103 ಜನ್ಮ ದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ನಲ್ಲಿ ಗೌರವ ಸಲ್ಲಿಸಿದೆ. ಮಾರ್ಗಾ ಅವರು ಜೂನ್ 16 1915 ರಲ್ಲಿ ಅವರ ಜನನ, ಜಗತ್ತಿಗೆ ಗಾಜನ್ನು ಸರಬರಾಜು
ಶ್ರೀನಗರ, ಜೂನ್ 16: ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ ಶನಿವಾರ ಬಂಧಿಸಿದೆ. ಗಡಿಯಲ್ಲಿ ಭಾರತದ ಒಳಗೆ ನುಸುಳಲು ಉಗ್ರರಿಗೆ ಈ ಪಾಕಿಸ್ತಾನಿ ನಾಗರಿಕರು ನೆರವು ನೀಡುತ್ತಿದ್ದರು ಎಂಬ ಶಂಕೆಯ ಮೇಲೆ ಬಂಧಿಸಲಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಪುತ್ರನ ಸಾವಿಗೆ 32 ಗಂಟೆಯಲ್ಲಿ ಪ್ರತೀಕಾರ: ಹುತಾತ್ಮ ಯೋಧನ ತಂದೆಯ
ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ ಆಡಳಿತ ವ್ಯವಸ್ಥೆಯಲ್ಲಿ “ನೇರ ನೇಮಕಾತಿ” ಎಂಬ ಬದಲಾವಣೆಗೆ ರಂಗ ಸಜ್ಜಾಗಿದೆ.
ಅದುವೇ “ಐ.ಎ.ಎಸ್...
ಇವೆಲ್ಲದರ ಕಿತ್ತಾಟದಲ್ಲಿ ಕನರ್ಾಟಕವಾದರೂ ಗೆದ್ದಿತಾ ಎಂದು ಕೇಳಿದರೆ ಅದನ್ನೂ ಇಲ್ಲವೆಂದೇ ಹೇಳಬೇಕು. ಕಳೆದ 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಆಡಳಿತ ಸ್ಥಿರವಾಗಿತ್ತು ಎನ್ನವುದನ್ನು ಬಿಟ್ಟರೆ ಅದು ಕನರ್ಾಟಕಕ್ಕೆ ಗಳಿಸಿಕೊಟ್ಟಿದ್ದು ಅತ್ಯಲ್ಪ. ಈಗಾಗಲೇ ಸಾಲದ ಹೊರೆ ಹೊತ್ತಿರುವ ರಾಜ್ಯ ರೈತರ ಸಾಲ ಮನ್ನಾ ಅಲ್ಲದೇ ಇನ್ನೊಂದಿಷ್ಟು ಜನಪ್ರಿಯ ಘೋಷಣೆಗಳ ಭಾರಕ್ಕೆ ನಲುಗಿ ಕುಸಿದೇ ಹೋಗುತ್ತದೆ. ಮುಂದಿನ 5 ವರ್ಷಗಳ ಕಾಲ ತಮ್ಮ ತಮ್ಮ ಅಧಿಕಾರವನ್ನು ಭದ್ರವಾಗಿ ಹಿಡಿದುಕೊಳ್ಳುವಲ್ಲೇ ಹೆಣಗಾಡುವ ಮಂತ್ರಿ, ಮುಖ್ಯಮಂತ್ರಿಗಳು ಸಮರ್ಥವಾದ ರಾಜ್ಯ ರೂಪಿಸುವಲ್ಲಿ ಆಸ್ಥೆ ತೋರಬಲ್ಲರೆಂದು ನಂಬುವುದೇ ಅಸಾಧ್ಯದ ಸಂಗತಿ.
...
ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ...
ಕಾಶ್ಮೀರ ಈ ರೀತಿಯ ಶಾಂತ ಸ್ಥಿತಿಗೆ ಮರಳುವುದನ್ನು ಅರಿತೊಡನೆ ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಚಡಪಡಿಕೆಗೆ ಒಳಗಾಗುತ್ತಾರೆ. ಈ ಬಾರಿಯೂ ಹಾಗೆಯೇ ಆಯ್ತು. ಹೇಗಾದರೂ ಮಾಡಿ ಸೈನಿಕರನ್ನು ಭಡಕಾಯಿಸಿ ಕದನವಿರಾಮವನ್ನು ಅವರೇ ಮುರಿಯುವಂತೆ ಮಾಡಬೇಕೆಂಬ ಪ್ರಯತ್ನ ಪ್ರತ್ಯೇಕತಾವಾದಿಗಳಲ್ಲಿ ಖಂಡಿತವಾಗಿಯೂ ಇತ್ತು. ಆದರೆ ಈ ಬಾರಿ ಭಾರತೀಯ ಸೇನೆ ತೋರಿದ ಸಂಭ್ರಮ ಬಲು ಅಪರೂಪದ್ದು.
ಈ ಲೇಖನ ಓದುವ ವೇಳೆಗಾಗಲೇ ರಂಜಾನ್ ಮಾಸ ಮುಗಿದು ಹಬ್ಬವೂ ಕಳೆದುಬಿಟ್ಟಿರುತ್ತದೆ. ಅದರೊಟ್ಟಿಗೆ ಕೇಂದ್ರ ಸರ್ಕರ ಏಕಪಕ್ಷೀಯವಾಗಿ ಘೋಷಿಸಿದ್ದ ಕದನವಿರಾಮವೂ ಅಂತ್ಯಗೊಳ್ಳುತ್ತದೆ. 2017 ರಲ್ಲಿ ಭಾರತೀಯ ಸೇನೆ ಆರಂಭಿಸಿದ್ದ ಆಪರೇಶನ್ ಆಲ್ ಔಟ್ ಒಂದು ಮಹತ್ವಪೂರ್ಣ ಘಟ್ಟವನ್ನು ರಂಜಾನ್ನ ವೇಳೆಗೆ ಮುಟ್ಟಿತ್ತು. ಈ ವೇಳೆಗೆ ಕದನ...
ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ ||
ಜನರು ಯಾವುದನ್ನು ಯಜ್ಞವೆನ್ನುತ್ತಾರೋ ಅದು ನಿಜವಾಗಿಯೂ ಬ್ರಹ್ಮಚರ್ಯವೇ ಆಗಿದೆ. ಯಜ್ಞವೆಂದರೆ ಕೇವಲ ಅಗ್ನಿಯನ್ನು ಉರಿಸುತ್ತಾ ಹೋಮ, ಹವನಗಳನ್ನು ಮಾತ್ರ ಮಾಡುವುದೆಂದು ಅರ್ಥವಲ್ಲ. ಎಲ್ಲಾ ಶ್ರೇಷ್ಠತಮ ಕರ್ಮಗಳೂ ಯಜ್ಞವೆಂದು ಶತಪತ ಬ್ರಾಹ್ಮಣದಲ್ಲಿ ಹೇಳಿದೆ. ಶ್ರೇಷ್ಠತಮ ಕರ್ಮಗಳು ಬ್ರಹ್ಮನನ್ನು ಅರಿಯಲು ಸಾಧನಗಳಾಗಿವೆ. ಯಾವುದನ್ನು ಉಪಾಸನೆ ಎನ್ನುತ್ತೇವೋ ಅದೂ ಬ್ರಹ್ಮಚರ್ಯವೇ ಆಗಿದೆ. ಏಕೆಂದರೆ...
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನದ ಪ್ರಭಾವವಿರುವ ಬಹುತೇಕ ಕ್ಷೇತ್ರಗಳಲ್ಲಿ ಈಗ ವೈರ್ಲೆಸ್ನದೇ ಭರಾಟೆ. ಅಂತರಜಾಲ ಸಂಪರ್ಕ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ನಿಸ್ತಂತು...
ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ದಾತರ ದರ್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ
ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !
ಚೆಕ್ಕಿ ಏನ್ ಮಾಡ್ದಿ ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಟ್ತು ?
ಬೂದಿ ಕೊಟ್ತು !
ಬೂದಿ ಏನ್ ಮಾಡ್ದಿ ?
ತಿಪ್ಪಿಗಾಕಿದೆ !
ತಿಪ್ಪಿ ಏನ್ ಕೊಟ್ತು ?
ಗೊಬ್ಬರ ಕೊಟ್ತು !
ಗೊಬ್ಬರ ಏನ್...
ಇಂದು ಬ್ರಹ್ಮಚಾರಿ ಎಂಬುದಕ್ಕೆ ಮದುವೆಯಾಗದಿರುವವರು ಎಂಬ ಅರ್ಥ ಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿ ಕಾರಣವಾಗಿದೆ. 'ನಮ್ ತಾತಾನೂ ಬ್ರಹ್ಮಚಾರಿ, ನಮ್ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ' ಎಂಬಂತಹ ಹಾಸ್ಯಚಟಾಕಿಗಳನ್ನೂ ಕೇಳಿದ್ದೇವೆ. ಆದರೆ ಬ್ರಹ್ಮಚರ್ಯದ ಮಹಿಮೆ ತಿಳಿದವರು ಈ ರೀತಿಯಾಗಿ ಲಘುವಾಗಿ ಮಾತನಾಡಲಾರರು. ಸನಾತನ ಧರ್ಮದಲ್ಲಿ ಮಾನವನ ಜೀವಿತದ ಅವಧಿಯನ್ನು ನಾಲ್ಕು ಭಾಗಗಳಾಗಿ...
ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದೇಹದಲಿ ನೆಲೆಸಿರುವ ಅಣುರೂಪಿ ಚೇತನ |
ದನಕರುಗಳನಂಕಿಸುವ ದಂಡಗಳ ತೆರದಿ
ಇಂತಪ್ಪ ಚೇತನರ ಒಡೆಯನಾರೋ ಮೂಢ ||
ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾ ಸಭಾದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಮಹಾತ್ಮಾ ಗಾಂಧೀಜಿಯವರು 1934 ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಇಂದಿರಾರವರು ತುತರ್ು ಪರಿಸ್ಥಿತಿಯನ್ನು ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರು ಹೋದ ಇದೇ ಜಯ ಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂ ಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾ ವರ್ಗದ ಸಮಾರೋಪಕ್ಕೆ ಬರುವೆನೆಂದು ಹೇಳಿದ್ದು ಹದಿನೈದು ದಿನಗಳ ಕಾಲವಾದರೂ ದೇಶದ ತಲೆ ಕೆಡಿಸಿತ್ತು. ಕಾಂಗ್ರೆಸ್ಸಿನ ಕಟ್ಟಾಳುವಾಗಿ 5-6 ದಶಕಗಳ...
ಮನಸು ಗಾಂಧಿ ಬಝಾರು!
ಅದೆಷ್ಟು ಮನಕಲಕುವಂತಿದೆ ಬರವಣಿಗೆ.
ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಗತಿಶೀಲ ಮನಸ್ಸುಗಳು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡಲು ಮುಂದಾದಾಗ ಅವರಿಗೆ ಉಗ್ರ ಹಿಂದುತ್ವವಾದಿಗಳು ಎಸೆಯುವ ಲೇವಡಿಯ ಹಾಗು...
ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ
ನಶಿಸಲೀ ನಿನ್ನೆಲ್ಲವೇನಾದೊಡೇನು?
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ
ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ
ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ ಕುಸಿದು ಹೋಗಲಿ, ಆ ಗಗನ ಕಳಚಿ ಬೀಳಲಿ. ನಿನ್ನದೆಲ್ಲವೂ ನಾಶವಾಗಿ ಹೋಗಲಿ....
"ತೌಡು ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬತ್ತ "
- ಇದೊಂದು ಹವ್ಯಕ ಭಾಷೆಲಿ ಪ್ರಚಲಿತವಾಗಿಪ್ಪ ನುಡಿಗಟ್ಟು ,ಇದು ತುಳು ಮತ್ತೆ ಕನ್ನಡ ಭಾಷೆಲಿಯೂ ಬಳಕೆಲಿ ಇದ್ದು.
ಮೊದಲಿನ ಕಾಲಲ್ಲಿ ಒಬ್ಬ ರಾಜ ಇತ್ತಿದ ಅಡ.ಅವನ ಊರಿಲಿ ತುಂಬಾ ಬರಗಾಲ ಬಂತು.ಅಂಬಗ ಅವ ಎಲ್ಲೊರಿಂಗೂ ಒಂದೊಂದು ಸೇರು ತೌಡು ಕೊಟ್ಟ ಅಡ.ಅಕ್ಕಿಯ ಹೆರಣ ಚೋಲಿಯ ಹೊಡಿಗೆ ತೌಡು ಹೇಳುತ್ತವು.ದನಗೊಕ್ಕೆ ಇದರ ಹಿಂಡಿ ಒಟ್ಟಿಂಗೆ ಕೊಡುತ್ತವು.ನಂತರ ಆ ರಾಜ ಒಂದು ಸೇರು ತೌಡಿನ ಬದಲು ಒಂದು ಸೇರು ಅಕ್ಕಿಯ ಹಿಂದೆ ಕೊಡಕ್ಕು ಹೇಳಿ ಕಾನೂನು ಮಾಡಿದ ಅಡ.ಈ ರಾಜನ ದುರಾಡಳಿತಕ್ಕೆ ಜನ ರೋಸಿ ಹೋಗಿ ಬೇರೊಬ್ಬ ರಾಜ ಬಪ್ಪಲೆ ಕಾಯ್ತಾ ಇರ್ತವು.ಒಂದು ದಿನ ಇನ್ನೊಬ್ಬ ರಾಜ ಬಂದು ಇವನ ಸೋಲಿಸಿ ಆ ಊರಿನ ರಾಜ ಆದ ಅಡ....
ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ವಿವರಗಳೊಂದಿಗೆ ದೇಶದ ರೀತಿ-ನೀತಿಗಳನ್ನು ವ್ಯಕ್ತಪಡಿಸುವ ಒಂದು ಪವಿತ್ರ ಪುಸ್ತಕ. ಇತಿಹಾಸ ಅಧ್ಯಯನ ಮಾಡುವವರು ವಿವಿಧ ದೇಶಗಳ ಸಂವಿಧಾನಗಳ...
ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ!
ರಸ್ತೆಯಲ್ಲಿ ಎತ್ತು ನಡೆದು ಹೋಗುವಾಗ ಹಸಿದ ನಾಯಿಯೊಂದು ಅದನ್ನು ಹಿಂಬಾಲಿಸುತ್ತದೆಯಂತೆ. ನೇತಾಡುತ್ತಿರುವ ಎತ್ತಿನ ವೃಷಣಗಳನ್ನು ಕಂಡು ಅದು ಎತ್ತಿನದೇ ಮಾಂಸವೆಂದು ಭಾವಿಸುತ್ತದೆಯಂತೆ. ಈಗಲೋ ಆಗಲೋ ಅದು ಬಿದ್ದು ಹೋಗಬಹುದೆಂದು ಕಾಯುತ್ತಲೇ ಇರುತ್ತದೆಯಂತೆ. ಕೊನೆಗೂ ಆ ವೃಷಣಗಳು ಬೀಳದೇ ಹಿಂಬಾಲಿಸುತ್ತಿರುವ ನಾಯಿ...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.