Skip to main content

Thursday 19 May 2022

Home

ಅಂತರ್ಜಾಲದ ಕನ್ನಡ ಪುಟಗಳು ಅಂತರ್ಜಾಲದ ಕನ್ನಡ ಜಗತ್ತು

   

Main menu

  • ಮುಖಪುಟ
  • ನಿಮ್ಮ ಫೀಡ್ ಸೇರಿಸಿ
  • ಸಂಪರ್ಕ

ಬ್ಲಾಗ್ಸ್

ಮಳೆಗಾಲ.....ಬೇಂದ್ರೆ

 ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲದ ಮೊದಲಲ್ಲಿ ಭರ್ರನೆ ಬೀಸಿ ಬರುವ ಮಳೆಯು ಅವರಿಗೆ ʻಭೈರವನ ರೂಪ ತಾಳಿ ಕುಣಿಯುತ್ತಿರುವಂತೆʼ ಕಾಣುತ್ತದೆ. ಮಳೆಯಲ್ಲಿ ತೊಯ್ಯುತ್ತಿರುವ ಕಲ್ಲುಬಂಡೆಗಳು ಅವರಿಗೆ ʻಅಭ್ಯಂಜನಗಯ್ಯುತ್ತಿರುವ ಸ್ಥಾವರಲಿಂಗಗಳಂತೆʼ ಕಾಣುವುವು. ಇಂತಹ ಕಾಣ್ಕೆ ವರಕವಿಗೆ ಮಾತ್ರ ಸಾಧ್ಯ. ಅದಕ್ಕೇ ಹೇಳುತ್ತಾರಲ್ಲವೆ,  ʻ ನಾನೃಷಿಃ ಕುರುತೇ ಕಾವ್ಯಂ ʼ ಎಂದು. 

ʻಮಳೆಗಾಲʼ ಎನ್ನುವ ಬೇಂದ್ರೆಯವರ ಕವನವು ನೋಡಲು ಅತ್ಯಂತ ಸರಳವಾದ ಕವನ. ಆದರೆ ಈ ಮುಖವಾಡದ ಒಳಗೆ ಅಡಗಿದೆ, ವಿಶ್ವದ ʻಋತʼ ಅರ್ಥಾತ್‌ ʻಶಾಶ್ವತ ಸತ್ಯʼ, ನಿಸರ್ಗವನ್ನು ನಡೆಯಿಸುತ್ತಿರುವ ಚೈತನ್ಯದ ಸಾಮರಸ್ಯ ಪ್ರಕ್ರಿಯೆ.

...
Source: ಸಲ್ಲಾಪ
Read More
‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.

ಆಧುನಿಕತೆ ಪದವೇ‘ಅಧುನಾ’ ಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾ’ ಪದದ ಅರ್ಥ ‘ಈ ಕ್ಷಣದ’, ಅಂದರೆ  `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು...

Source: ಸಲ್ಲಾಪ
Read More
ಕನಸಿನ ಕೆನಿ.....................................ದ. ರಾ. ಬೇಂದ್ರೆ

ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:

“ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”

ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.

 

ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆ’ ಹಾಗೂ ‘ಗರಿ’ ಎನ್ನುವ ಕವನಗಳು.  ‘ಕನಸಿನ ಕೆನಿ’ ಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು...
Source: ಸಲ್ಲಾಪ
Read More
‘ಮಾತ್ರೆ ದೇವೋ ಭವ’..................ಆರತಿ ಘಟಿಕಾರರ ವಿನೋದ ಲೇಖನಗಳ ಸಂಕಲನ

ಆರತಿ ಘಟಿಕಾರರು ಕನ್ನಡದ ಜಾನೇಮಾನೇ ವಿನೋದ ಸಾಹಿತಿಗಳು. ಅವರ ವಿನೋದ ಲೇಖನಗಳು ಈಗಾಗಲೇ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ನಗಿಸಿವೆ, ಸಂತೋಷಗೊಳಿಸುವೆ. ‘ಭಾವತೋರಣ’ ಎನ್ನುವ ಅವರ ಬ್ಲಾ˘ಗ್ ದಲ್ಲಿ (bhaavatorana.bloggspot.com), ಅವರ ಹಾಸ್ಯಲೇಖನಗಳನ್ನು ಓದಬಹುದು. ‘ಮಾತ್ರೆ ದೇವೋ ಭವ’ ಎನ್ನುವುದು ಅವರ ಹಾಸ್ಯಲೇಖನಗಳ ಸಂಕಲನ. ಇದು ಅವರ ಪ್ರಥಮ ಪ್ರಕಟಿತ ಕೃತಿಯೂ ಹೌದು. 

ಹಾಸ್ಯ ಹೇಗಿರಬೇಕು? ಹಾಸ್ಯಬ್ರಹ್ಮ ಬಿರುದಾಂಕಿತ ರಾ.ಶಿ.ಯವರು ಒಮ್ಮೆ ಹೇಳಿದಂತೆ ಹಾಸ್ಯವುsubtle ಪದದಲ್ಲಿಯ b ಇದ್ದಂತೆ ಇರಬೇಕು. ಹಾಸ್ಯವು ಮುಗುಳುನಗೆಯನ್ನು ಉಕ್ಕಿಸಬೇಕೇ ಹೊರತು, ಅಟ್ಟಹಾಸವನ್ನಲ್ಲ. ಆರತಿಯವರ ಲೇಖನಗಳನ್ನು ಓದುತ್ತ ಹೋದಂತ, ಓದುಗನ ಮುಖದ ಮೇಲಿನ...

Source: ಸಲ್ಲಾಪ
Read More
ಹೆಸರಿನಲ್ಲೇನಿದೆ ಮಹಾ.....ಸುಧಾ ಸರನೋಬತ್

ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ ಭಾಷೆಯನ್ನು ಕಟ್ಟುವುದರ ಜೊತೆಗೇ, ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು. ಹಾಸ್ಯಬ್ರಹ್ಮ ‘ರಾ.ಶಿ.’ಯವರು ‘ಕೊರವಂಜಿ’ ಮಾಸಪತ್ರಿಕೆಯನ್ನು ಪ್ರಾರಂಭಿಸುವದರ ಮೂಲಕ ಅನೇಕ ವೈನೋದಿಕರಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟರು. ಕೊರವಂಜಿಯ ಮಹಾನಿರ್ಯಾಣದ ನಂತರ, ‘ಅಪರಂಜಿ’ ಪ್ರಾರಂಭವಾಯಿತು. ಜೊತೆಗೇ ಕನ್ನಡದಲ್ಲಿ ಇನ್ನೂ ಅನೇಕ ನಿಯತಕಾಲಿಕಗಳು ಉದಯಿಸಿದವು.ಇದರಿಂದಾಗಿ, ನವೋದಯದ ನಂತರದ ಹಾಸ್ಯಲೇಖಕರಿಗೆ ಇನ್ನಷ್ಟು ಅವಕಾಶಗಳು ದೊರೆತವು. ಶ್ರೀಮತಿ ಸುಧಾ ಸರನೋಬತ್ ಅವರು ಈ ಎಲ್ಲ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕನ್ನಡಿಗರಿಗೆ ಹಾಸ್ಯದೌತಣವನ್ನು ನೀಡುತ್ತ ಪರಿಚಿತರೇ ಆಗಿದ್ದಾರೆ.

ಸುಧಾಜೀಯವರು ರಚಿಸಿದ ‘ಹೆಸರಿನಲ್ಲೇನಿದೆ ಮಹಾ….’ ಕೃತಿಯಲ್ಲಿ...

Source: ಸಲ್ಲಾಪ
Read More
`ಕೂರ್ಗ ರೆಜಿಮೆಂಟ್’: ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು

ಆಧುನಿಕ ಕನ್ನಡದಲ್ಲಿ ಸೈನಿಕಸಾಹಿತ್ಯವು ಬಂದದ್ದು ತೀರ ಕಡಿಮೆ. ಸೈನಿಕಸಾಹಿತ್ಯ ಎನ್ನುವ ಪ್ರಕಾರದಲ್ಲಿ ರಚನಾಕ್ರಮವನ್ನು ಅನುಸರಿಸಿ ನಾವು ಮೂರು ವಿಭಾಗಗಳನ್ನು ಮಾಡಬಹುದು:

 

(೧) ಯುದ್ಧರಂಗದ ಸಾಹಿತ್ಯ.

(೨) ಸೈನಿಕರ ಬದುಕಿನ ಬಗೆಗೆ ಬರೆದ ಸಾಹಿತ್ಯ,

(೩) ಸೈನಿಕರು ಬರೆದ ಸಾಹಿತ್ಯ

 

ಯುದ್ಧರಂಗದ ಸಾಹಿತ್ಯದ ಬಗೆಗೆ ಹೇಳುವುದಾದರೆ, ಕನ್ನಡದಲ್ಲಿ ಈ ಪ್ರಕಾರದ ಸ್ವತಂತ್ರ ಕೃತಿಗಳು ಅತಿ ಕಡಿಮೆ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಇಂಗ್ಲಿಶ್...

Source: ಸಲ್ಲಾಪ
Read More
ಉಮೇಶ ದೇಸಾಯಿಯವರ ‘ಅನುಪಮಾ ಆಖ್ಯಾನ’

ಶ್ರೀ ಉಮೇಶ ದೇಸಾಯಿಯವರ `ಅನುಪಮಾ ಆಖ್ಯಾನ’ವು ಶ್ರಾವ್ಯಕೃತಿಯಾಗಿ ಡಿಜಿಟಲ್ ರೂಪದಲ್ಲಿ ಹೊರಬಂದಿದೆ. ಈ ಪ್ರಯೋಗಶೀಲ ಸಾಹಿತ್ಯಕರ್ಮಿಯ ಹೊಚ್ಚ ಹೊಸ ಪ್ರಯೋಗವಿದು. ಇದಕ್ಕೂ ಮೊದಲು ಅವರು ಗಝಲ್‘ಗಳನ್ನು, ಕಥೆಗಳನ್ನು ಬರೆದಿದ್ದರು. ಅಷ್ಟಕ್ಕೇ ತೃಪ್ತರಾಗದ ದೇಸಾಯರು ‘ಮೈತ್ರಿ ಪ್ರಕಾಶನ’ ಎನ್ನುವ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ತನ್ಮೂಲಕ ಹೊಸ ಲೇಖಕರ ರಚನೆಗಳನ್ನು ಸಂಕಲಿಸಿ ಹೊರತರುವ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದರು. ಬ್ಯಾಂಕ್ ಉದ್ಯೋಗಿಯಾಗಿ ನೌಕರಿ ಮಾಡುತ್ತಲೇ, ಸಾಹಿತ್ಯಕೃತಿಗಳನ್ನು ಬರೆಯುವುದು, ಬರೆಯಿಸುವುದು, ಪ್ರಕಾಶಿಸುವುದು ಇವುಗಳಲ್ಲಿ ನಿರತರಾದ, ಎಡವಯಸ್ಸಿನ ಈ ಸಾಹಸಜೀವಿಯನ್ನು ನಾನು ಬೆರಗಿನಿಂದ ನೋಡುತ್ತೇನೆ. ಪ್ರತಿಯೋರ್ವ ಸಾಹಿತಿಯ ಒಳಗೆ ಒಂದು ಪ್ರೇರಕ ಶಕ್ತಿ ಕೆಲಸ ಮಾಡುತ್ತಿರುತ್ತದೆ. ಉಮೇಶ...

Source: ಸಲ್ಲಾಪ
Read More
ಕರಣಂ ಇವರ ಕಾದಂಬರಿ ‘ಗ್ರಸ್ತ’...................... ಸುದರ್ಶನ ಗುರುರಾಜರಾವ ಇವರ ಒಂದು ವಿಶ್ಲೇಷಣೆ

ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲೇಖನದಲ್ಲಿ ಸುದರ್ಶನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ಅವರವೇ ಆಗಿವೆ. ‘ಸಲ್ಲಾಪ’ blogದ ಒಡೆಯರಿಗೆ ಇದರೊಡನೆ ಯಾವುದೇ ಸಂಬಂಧವಿಲ್ಲ. ------ಸುನಾಥ ..................... ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು...

Source: ಸಲ್ಲಾಪ
Read More
ಅಸ್ಪಷ್ಟ ತಲ್ಲಣಗಳು.......ಟಿ.ಎಸ್.ಶ್ರವಣಕುಮಾರಿ

‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಕಥೆಗಳಾಗಿವೆ. ಶ್ರವಣಕುಮಾರಿಯವರ ಈ ಕಥಾಸಂಕಲನವನ್ನು ಪ್ರಕಟಿಸುವ ಮೂಲಕ ‘ಮೈತ್ರಿ ಪ್ರಕಾಶನ’ವು ಕನ್ನಡ ಓದುಗರಿಗೆ ಒಂದು ಉಪಕಾರವನ್ನು ಮಾಡಿದೆ. ಆದುದರಿಂದ ಈ ಕಥಾಸಂಕಲನದ ಪ್ರಕಾಶಕರಾದ ‘ಮೈತ್ರಿ ಪ್ರಕಾಶನ’ದ ಒಡತಿ ಶ್ರೀಮತಿ ಅಂಜಲಿ ದೇಸಾಯಿಯವರಿಗೆ ನನ್ನ ಧನ್ಯವಾದಗಳು. ಶ್ರವಣಕುಮಾರಿಯವರ ಕಥೆಗಳನ್ನು ಬಿಡಿಬಿಡಿಯಾಗಿ ಓದಿದಾಗ ಈ ಕಥೆಗಳನ್ನು ಪೋಣಿಸುವ ಸೂತ್ರ ಒಂದಿದೆ ಎಂದು ಹೊಳೆಯಲಿಕ್ಕಿಲ್ಲ. ಇಲ್ಲಿಯ ಕಥಾಶೈಲಿಯ ಅನನ್ಯತೆ, ಕಥಾರಚನೆಯ ಹೊಸತನ ಹಾಗು ಕಥಾನಕಗಳ motif ಇವು, ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಮಾತ್ರ ವೇದ್ಯವಾಗುತ್ತವೆ...

Source: ಸಲ್ಲಾಪ
Read More
ನಿರ್ಬುದ್ಧ.......ಬೇಂದ್ರೆಯವರ ಕವನ
ನಾಗರಿಕತೆಯ ಇತಿಹಾಸವು ಹಿಂಸೆ ಹಾಗು ವೈರದಿಂದ ಕೂಡಿದ್ದಾಗಿದೆ. ಅಂಧಕಾರದಲ್ಲಿಮುಳುಗಿದ ಇಂತಹ ಸಮಾಜವನ್ನು ಬದಲಾಯಿಸಲು ಅನೇಕ ಮಹಾತ್ಮರು ಪ್ರಯತ್ನಪಟ್ಟಿದ್ದಾರೆ. ಅವರಲ್ಲಿ ಬುದ್ಧನೇ ಬಹುಶಃ ಪ್ರಥಮನು.  ಬೇಂದ್ರೆಯವರು ಬರೆದ ‘ಬುದ್ಧ’ ಎನ್ನುವ ಕವನವು ೧೯೫೧ನೆಯ ಇಸವಿಯಲ್ಲಿ ಪ್ರಕಟವಾದ ‘ಗಂಗಾವತರಣ’ ಕವನಸಂಕಲನದಲ್ಲಿ ಸೇರಿದೆ.

`ಬುದ್ಧ, ಬುದ್ಧ­­­­­-- ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’

‘ಬುದ್ಧ’ ಕವನದ ಮೊದಲಿನ ಎರಡು ಸಾಲುಗಳು ಇವು.

‘ಬುದ್ಧ’ ಎನ್ನುವ ಕವನವನ್ನು ಬರೆದ ಬೇಂದ್ರೆಯವರೇ ‘ನಿರ್ಬುದ್ಧ’ ಎನ್ನುವ ಕವನವನ್ನೂ ಬರೆದಿದ್ದಾರೆ.

‘‘ನಿರ್ಬುದ್ಧ’ ಕವನವು ೧೯೬೪ನೆಯ ಇಸವಿಯಲ್ಲಿ ಪ್ರಕಟವಾದ ‘ನಾಕು ತಂತಿ’ ಸಂಕಲನದಲ್ಲಿ ಪ್ರಕಟವಾಗಿದೆ.

ಈ ಹದಿಮೂರು ವರ್ಷಗಳಲ್ಲಿ ಬೇಂದ್ರೆಯವರ...
Source: ಸಲ್ಲಾಪ
Read More
ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.
ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ, ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು. ಈ ಎಲ್ಲ ಸಾಹಿತ್ಯಘಟ್ಟಗಳಲ್ಲಿ ಅನೇಕ ಉತ್ತಮವಾದ ಕೃತಿಗಳನ್ನು ನಮ್ಮ ಸಾಹಿತಿಗಳು ರಚಿಸಿದ್ದಾರೆ. ಇವರ ಬಗೆಗೆ ನಮಗೆ ಅಭಿಮಾನವಿದೆ. ಆದರೆ ಈ ಎಲ್ಲ ಪ್ರಕಾರಗಳಲ್ಲಿ ಆಧುನಿಕ ಎನ್ನುವ ಸಾಹಿತ್ಯವೆಂದು ಪರಿಗಣಿಸಬಹುದಾದ ರಚನೆಗಳು ಬೆರಳೆಣಿಕೆಯಷ್ಟೇ ಇರುವುದು ಕನ್ನಡ ಸಾಹಿತ್ಯದ ದೊಡ್ಡ ಕೊರತೆಯಾಗಿದೆ.

ಈ ಮಾತನ್ನು ಅನೇಕರು ವಿರೋಧಿಸಬಹುದು. ‘ನವೋದಯದವರನ್ನು ಬಿಡಿ, ನವ್ಯ ಸಾಹಿತಿಗಳು ಆಧುನಿಕರಲ್ಲವೆ’ ಎನ್ನುವ ತರ್ಕವನ್ನು ಮುಂದೆ ಮಾಡಬಹುದು. ಗೆಳೆಯರೆ, ಕನ್ನಡದ ನವ್ಯ ಸಾಹಿತಿಗಳು (----ಅಡಿಗರ ಹೊರತಾಗಿ; ಅಡಿಗರು ನವ್ಯಕಾವ್ಯದ ಶ್ರೇಷ್ಠ ಕವಿಗಳು--) ಕೇವಲ ಹೊಸದೊಂದು...
Source: ಸಲ್ಲಾಪ
Read More
ಟೊಂಕದ ಮ್ಯಾಲ ಕೈ ಇಟಗೊಂಡು............ದ.ರಾ. ಬೇಂದ್ರೆ
೧ ಟೊಂಕದಮ್ಯಾಲ ಕೈ ಇಟಗೊಂಡು

ಬಿಂಕದಾಕಿ ಯಾರ ಈಕಿ?

ಒಂಕೀತೋಳ ತೋರಸತಾಳ

ಸುಂಕದಕಟ್ಟ್ಯವಗ.

೨

ಯಣ್ಣಾ, ಮಾವಾ ಅಂತ ರಮಿಸಿ

ಬಣ್ಣದಮಾತು ಆಡಿಕೋತ

ಕಣ್ಣಾಗಮಣ್ಣ ತೂರುವಾಕಿ

ಸಣ್ಣನ್ನ  ನಡದಾಕಿ.

೩

ಕಮ್ಮಗನಾಲಿಗಿ ಚಾಚತಾಳ

ಸುಮ್ಮಸುಮ್ಮಗ ನಾಚತಾಳ

ದಮ್ಮಡಿಕೂಡ ಕೊಡದ ಹಾಂಗs

ಬಿಮ್ಮಗಹೊಂಟಾಕಿ.

೪

ಮೆಂತೆದಸಿವುಡು ಕಟ್ಟಿಕೊಂಡು

ಸಂತಿಪ್ಯಾಟಿ ಮಾಡಲಿಕ್ಕೆ

ಅಂತೂಇಂತು ಎಲ್ಲರಕಿಂತ

ಮುಂಚಿಗಿ ಬಂದಾಕಿ.

……………………………………………………………….

ಈ ಕವನವನ್ನು ನಾನು ಮೊದಲು ಓದಿದ್ದು ‘ಅರಳು ಮರಳು’ ಕವನಸಂಕಲನದಲ್ಲಿ. ಆ ಸಮಯದಲ್ಲಿ ನಾನು ಬೇಂದ್ರೆಯವರ ಸೂಕ್ಷ್ಮ ನಿರೀಕ್ಷಕ ದೃಷ್ಟಿಯನ್ನು ಗಮನಿಸಿ...
Source: ಸಲ್ಲಾಪ
Read More
ಲೇಖನಿಯ ಪಿಡುಗು
 ‘ವಿಶ್ವವಾಣಿ’ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹೊಸದೊಂದು ಆಂಗ್ಲ ಪದವನ್ನು ಸೃಷ್ಟಿಸಿದ್ದಾರೆ. ಇದು `Pendemic’ ಎನ್ನುವ ಪದ. ೧೫-೩-೨೦ರ‘ವಿಶ್ವವಾಣಿ’ ದಿನಪತ್ರಿಕೆಯಲ್ಲಿ ಈ ಹೊಸ ಪದವು ಹುಟ್ಟಿಕೊಂಡಿದೆ. Pendemic ಪದದ ಅರ್ಥವೇನು? Pen ಅಂದರೆ ಲೇಖನಿ; demic ಎನ್ನುವುದು endemic ಪದದ ಹ್ರಸ್ವ ರೂಪ; ಕನ್ನಡದಲ್ಲಿ ಇದಕ್ಕೆ ಪಿಡುಗು ಎನ್ನುತ್ತಾರೆ. ಆದುದರಿಂದPendemic ಪದಕ್ಕೆ ಲೇಖನಿಯ ಪಿಡುಗು ಅಥವಾ ಲೇಖನಿಯ ಹಾವಳಿ ಎನ್ನುವ ಅರ್ಥವಿರಬಹುದೆ!?

ಅಥವಾ Pendemic ಪದದ ಮೂಲಕ ವಿಶ್ವೇಶ್ವರ ಭಟ್ಟರು ಆತ್ಮಶೋಧನೆಯನ್ನೇನಾದರೂ ಮಾಡಿಕೊಳ್ಳುತ್ತಿದ್ದಾರೆಯೆ? ಛೆ! ಛೆ! ಇರಲಾರದು; ಏಕೆಂದರೆ ಈ ಲೇಖನವನ್ನು ಕರೋನಾ ಪಿಡುಗಿನ ಸಂದರ್ಭದಲ್ಲಿ ಬರೆಯಲಾಗಿದೆ ಹಾಗೂ ಜಾಗತಿಕ ಆರೋಗ್ಯ ಸಂಘಟನೆಯು ಕರೋನಾ ಪಿಡುಗನ್ನು Pandemic...
Source: ಸಲ್ಲಾಪ
Read More
`Things fall apart, the center cannot hold’.
`Things fall apart, the center cannot hold’.

ಇದುಆಂಗ್ಲ ಕವಿ ಯೇಟ್ಸನ ಕವನವೊಂದರ ಸಾಲು.

ಈ ಸಾಲನ್ನು ಈಗ ಹೀಗೂ ಹಾಡಬಹುದು:

`ಭಾರತಕೋ ತುಕಡೇ ತುಕಡೇ ಕರೇಂಗೆ!

Let India fall apart!’

ಬಂಗಾಲ ಸರಕಾರವು  ಭಾರತ ದೇಶದ ಲೋಕಸಭೆಯು ಅನುಮೋದಿಸಿದ ಹಾಗು ಇದೀಗ ಶಾಸನವೆಂದು ಅಂಗೀಕೃತವಾದ ‘ನಾಗರಿಕತೆ ಬದಲಾವಣೆ ಶಾಸನ’ವನ್ನು ಒಪ್ಪುವದಿಲ್ಲವೆಂದೂ, ತಮ್ಮ ರಾಜ್ಯದಲ್ಲಿ ಇದನ್ನು ಚಲಾಯಿಸುವದಿಲ್ಲವೆಂದೂ ಹೇಳಿಕೆ ಕೊಟ್ಟಿದೆ. ಬಂಗಾಲವನ್ನು ಅನುಕರಿಸಿ ಇತರ ಭಾಜಪೇತರ ರಾಜ್ಯಗಳೂ ಸಹ ಇಂತಹದೇ ಹೇಳಿಕೆ ಕೊಟ್ಟಿವೆ.

ಕೇರಳದ ಮುಖ್ಯ ಮಂತ್ರಿ ಪಿಣರಾಯಿಯವರು ಭಾರತದ ಹನ್ನೊಂದು ರಾಜ್ಯಗಳಿಗೆ ಈ ಶಾಸನವನ್ನು ಧಿಕ್ಕರಿಸಲು ಕರೆ ಕೊಟ್ಟಿದ್ದಾರೆ! ಹಾಗು ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು...
Source: ಸಲ್ಲಾಪ
Read More
ವಿಶ್ವವಾಣಿ ಪತ್ರಿಕೆಯ ಸಂಪಾದಕರಿಗೆ,
ವಿಶ್ವವಾಣಿ ಪತ್ರಿಕೆಯ ಸಂಪಾದಕರೆ,
ನಾನು ಮೆಚ್ಚುವ ದಿನಪತ್ರಿಕೆಗಳಲ್ಲಿ ‘ವಿಶ್ವವಾಣಿ’ಯೂ ಒಂದು. ಇದಕ್ಕೆ ಕಾರಣ ವಿಶ್ವವಾಣಿಯಲ್ಲಿ ಕಂಡು ಬರುವ ಜಾಣಹಾಸ್ಯ. ಇದು ಅನೇಕ ಸಲ ಯಾರ್ಯಾರೋ ವ್ಯಕ್ತಿಗಳ ಹುಳಕನ್ನು ಪ್ರದರ್ಶಿಸುವ ಸಲುವಾಗಿಯೂ ಬಳಕೆಯಾಗುತ್ತಿದೆ. ಅದರಲ್ಲೇನೂ ತಪ್ಪಿಲ್ಲ ಬಿಡಿ; ಆದರೆ ಇದು ವಿನಾಕಾರಣ ವ್ಯಕ್ತಿನಿಂದನೆಯಾಗಬಾರದಷ್ಟೆ? ಹಾಗಾದಾಗ ವಿಶ್ವವಾಣಿಗೆ ಪೀತಪತ್ರಿಕೆ ಎನ್ನುವ ಬಿರುದು ಬರಲಿಕ್ಕಿಲ್ಲವೆ? ೧೭-೧-೨೦ರ ಪತ್ರಿಕೆಯನ್ನು ನೋಡಿದಾಗ ಇಂತಹ ಭಾವನೆಯೊಂದು ನನ್ನ ಮನದಲ್ಲಿ ಸುಳಿದು ಹೋಯಿತು.

ವಿಶ್ವವಾಣಿಯ ಮುಖಪುಟದಲ್ಲಿಯೇ ಈಸಲ ಒಂದು‘ಸುದ್ದಿ+ಟೀಕೆ’ ಪ್ರಕಟವಾಗಿದೆ. ಅದು ಹೀಗಿದೆ:

...
Source: ಸಲ್ಲಾಪ
Read More
ಮಹಾತ್ಮಾ ಗಾಂಧೀಜಿ, ನಾಥೂರಾಮ ಗೋಡಸೆ, ಸಾಧ್ವಿ ಪ್ರಜ್ಞಾಸಿಂಗ
ಮಹಾತ್ಮಾ ಗಾಂಧೀಜಿ:

ಗಾಂಧೀಜಿಯವರ ಬಾಲ್ಯದಲ್ಲಿ ಅವರ ತಂದೆ ಕರಮಚಂದ ಗಾಂಧೀಯವರ ಮನೆಯಲ್ಲಿ ವಿವಿಧ ಧರ್ಮಗಳ ಪಂಡಿತರಿಂದ ಧರ್ಮಜಿಜ್ಞಾಸೆ ನಡೆಯುತ್ತಿತ್ತು.  ಇವರ ತಾಯಿ ಪುತಳೀಬಾಯಿಯವರೂ ಸಹ ಧಾರ್ಮಿಕ ವ್ರತಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ಕೆಲವೊಂದು ದಿನಗಳಲ್ಲಿ ಚಂದ್ರನ ದರ್ಶನವಾದ ನಂತರವೇ ಊಟವನ್ನು ಮಾಡಬೇಕೆನ್ನುವ ಅವರ ನಿಯಮದಿಂದಾಗಿ, ಅವರಿಗೆ ಅನೇಕ ದಿನಗಳವರೆಗೆ ಉಪವಾಸವೇ ಗತಿಯಾಗುತ್ತಿತ್ತು. ಇದೆಲ್ಲ ಬಾಲಕ ಮೋಹನದಾಸನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಧರ್ಮಶಾಸ್ತ್ರಗಳಲ್ಲಿ ಹೇಳಲಾದ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಮೊದಲಾದ ಅವರ ಸದಾಚರಣೆಗಳೆಲ್ಲ ಅವರ ಮೇಲೆ ಬಾಲ್ಯಕಾಲದಲ್ಲಾದ ಘಟನೆಗಳ ಪರಿಣಾಮಗಳೇ ಆಗಿವೆ. ಕಠೋರ ಉಪವಾಸವೂ ಸಹ ಅವರಿಗೆ ತಾಯಿಯಿಂದ ಬಂದ ಆದರ್ಶವೇ ಎನ್ನಬೇಕು....
Source: ಸಲ್ಲಾಪ
Read More
ಕನ್ನಡ ಕಲಿಕೆಯೂ, ಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ...............ಅನಿತಾ ನರೇಶ್ ಮಂಚಿ
ಸುಶ್ರೀ ಅನಿತಾ ನರೇಶ್ ಮಂಚಿಯವರು ಕನ್ನಡದ ಬಗೆಗೆ ಹಾಗು ಪ್ರಸ್ತುತ ವಿಷಯಗಳ ಬಗೆಗೆ ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ನಿಯತವಾಗಿ ವೈಚಾರಿಕ ಲೇಖನಗಳನ್ನು ಬರೆಯುತ್ತಾರೆ.  ದಿನಾಂಕ ೨೮ ನವೆಂಬರದಂದು ವಿಜಯವಾಣಿಯಲ್ಲಿ ಪ್ರಕಟವಾದ  ‘ಕನ್ನಡ ಕಲಿಕೆಯೂ, ಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ’ ಎನ್ನುವ ಇವರ ಲೇಖನವು ಕನ್ನಡ ಕಲಿಕಾವಿಧಾನದ ಬಗೆಗಿನ ಸಮಗ್ರ ವಿಮರ್ಶೆಯಾಗಿದೆ. ಈ ಲೇಖನದಲ್ಲಿ ಇವರು ಪ್ರಸ್ತುತಪಡಿಸಿದ ವಿಚಾರಗಳನ್ನು ನಮ್ಮ ಶಿಕ್ಷಣತಜ್ಞರು ಗಂಭೀರವಾಗಿ ಪರಿಶೀಲಿಸುವುದು ಹಾಗು ಸಮಂಜಸವಾದ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ. ಈ ಲೇಖನದ ತಿರುಳಿಗೆ ಹಾಗು ಶೈಲಿಗೆ ಮಾರು ಹೋದ ನಾನು ‘ಸಲ್ಲಾಪ’ದಲ್ಲಿ ಈ ಲೇಖನವನ್ನು ಪ್ರಕಟಿಸಲು ಅವರ ಅನುಮತಿಯನ್ನು ಕೋರಿದಾಗ ತಕ್ಷಣವೇ ಅನುಮತಿಯನ್ನು ನೀಡಿದರು. ಅವರಿಗೆ ನನ್ನ ಧನ್ಯವಾದಗಳು. ಇದೀಗ ಅವರ...
Source: ಸಲ್ಲಾಪ
Read More
ಶ್ರಾವಣ.................ದ.ರಾ.ಬೇಂದ್ರೆ
ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ ಹಸಿರಿನ ಹಸುಗೂಸದೊಂದು ಆಗ ಈಗ ಹೊರಳುತಿಹುದು ಏನೊ ಎಂತೊ ಒರಲುತಿಹುದು ಆs ಹಸಿರ ಒಳಗೆ ಹೊರಗೆ ನೀರ ಬೆಳಕು ತುಣುಕು ಮಿಣುಕು ಅಲ್ಲಿನಿಂದ ಬಂದೆಯಾ ! ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ ? ಏಕೆ ಬಂದೆ ? ಏನು ತಂದೆ? ಹೇಳೊ ಹೇಳು ಶ್ರಾವಣಾ ನೀನು ಬಂದ ಕಾರಣಾ. ಪಡುವ ದಿಕ್ಕಿನಿಂದ ಹರಿವ ಗಾಳಿ-ಕುದುರೆಯನ್ನು ಏರಿ ಪರ್ಜನ್ಯ ಗೀತವನ್ನು


ಹಾsಡುತ್ತ ಬಂದಿತು.

ಬನದ ಮನದ ಮೇಳವೆಲ್ಲ


ಸೋs ಎಂದು ಎಂದಿತು


ಬಿದಿರ ಕೊಳಲ ನುಡಿಸಿತು


ಮಲೆಯ ಹೆಳಲ ಮುಡಿಸಿತು;


ಬಳ್ಳಿ ಮಾಡ ಬಾಗಿಸಿತ್ತು


ಗಿಡಗಳ ತಲೆದೂಗಿಸಿತ್ತು...

Source: ಸಲ್ಲಾಪ
Read More
ಗಿರೀಶ ಕಾರ್ನಾಡರು --ಉಳಿದವರು ಕಂಡಂತೆ.... ಡಾ| ಸುದರ್ಶನ ಗುರುರಾಜರಾವ
ಅನಿವಾಸಿ ಸಾಹಿತಿಯಾದ ಶ್ರೀ ಸುದರ್ಶನ ಗುರುರಾಜರಾವ ಇವರು ಗಿರೀಶ ಕಾರ್ನಾಡರ ಬಗೆಗೆ ಬರೆದ ಲೇಖನವನ್ನು ನನಗೆ ಕಳುಹಿಸಿ ಕೊಟ್ಟಿದ್ದಾರೆ. ಅವರ ಪರಿಚಯವನ್ನು ಅವರ ಮಾತುಗಳಲ್ಲಿಯೇ ನೋಡೋಣ: “ವೃತ್ತಿಯಲ್ಲಿ ನಾನು ವೈದ್ಯ,ಅರಿವಳಿಕೆ ತಜ್ಞ. ಪ್ರವೃತ್ತಿಯಲ್ಲಿ ಕನ್ನಡದ ಪ್ರೇಮಿ,ಸನಾತನ ಧರ್ಮದ ಅನುಯಾಯಿ, ಭಾರತೀಯ ಪರಂಪರೆಯ ಅಭಿಮಾನಿ. ಬೆಂಗಳೂರು ವೈದ್ಯಕೀಯ ವಿದ್ಯಾಲಯದಿಂದ ಪದವಿ,ಚಂಡೀಗಢದಿಂದ ಸ್ನಾತಕೋತ್ತರ ಪದವಿ,ಇಂಗ್ಲೆಂಡ್ ನಲ್ಲಿ ತರಬೇತಿ ಹಾಗೂ ತಜ್ಞ ವೈದ್ಯನಾಗಿ ದುಡಿದು ಪ್ರಸ್ತುತ ಕೆನಡಾದ ಮ್ಯಾನಿಟೋಬ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ತಜ್ಞ ವೈದ್ಯನಾಗಿ ದುಡಿಯುತ್ತಿರುವೆ. ಆಗಾಗ ಲೇಖನ, ಕವಿತೆ ಇತ್ಯಾದಿ ಬರೆವುದುಂಟು.”
...
Source: ಸಲ್ಲಾಪ
Read More
ಬಂದಿಕಾರಾ ಶ್ರಾವಣಾ.........ದ. ರಾ. ಬೇಂದ್ರೆ

ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ ಬಂದಿಕಾರಾ ಶ್ರಾವಣಾ ಬಂಧನದೊಳಿಹರೊ ಜಗವಂದಿತರನಿಂದಿತರು ಬಂದೆ ಬಿಡಿಸೈ ಶ್ರಾವಣಾ ಅಂಧಕಾರವಿದಲ್ಲ ಮಂದೇಹ ಸಂಘವಿದೆ ಸಂದೇಹವೇ ಶ್ರಾವಣಾ? ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ ಇಂದಾವದೊ ಶ್ರಾವಣಾ? ಬಂದು ಗೀತೆಯ ಹಾಡಿನೊಂದು ಯೋಗವ ಹೇಳಿ ಒಂದುಗೂಡೋ ಶ್ರಾವಣಾ. ಒಂದು ಶ್ರುತಿಯವ ನೀನಮಂದ ನಂದನವಾಸಿ ಮಂದಹಾಸಾ ಶ್ರಾವಣಾ. ನಂದಗೋಪನ ಕಾಂತೆಗಂದೊಪ್ಪಿಸಿದೆ ತಾನೆ ಬಂಧಮುಕ್ತನ ಶ್ರಾವಣಾ. ಇಂದು ಬಂದಿಹುದು ಮತ್ತೊಂದು ಸಮಯವು ಅಂತೆ ತಂದೆ ಬಿಡಿಸೈ ಶ್ರಾವಣಾ. ಮುಂದಿರುವ ಹೊಲಗಳಲಿ ಇಂದಿರೆಯೆ ನಲಿವಂತೆ ಚೆಂದವೇನೋ ಶ್ರಾವಣಾ ಬಂಧು ನೀ ಬೆಳೆಗೆ ಉಕ್ಕಂದ ನೀ ಹೊಳೆಗೆ ಆ- ನಂದಸಿಂಧೋ ಶ್ರಾವಣಾ. ಚಂಡರಾಹುಗ್ರಾಸದಿಂದ ಬಿಡಿಸೈ ಜಗದ ಚಂದಿರನನೇ ಶ್ರಾವಣಾ. ನಿಂದಿಸುತ ಬಾಯ್ಮುಚ್ಚಿ ಸ್ಫುಂದಿಸುತ ಬಡವರಾ-...
Source: ಸಲ್ಲಾಪ
Read More

Pages

  • 1
  • 2
  • next ›
  • last »

ಏನಿದು ಪ್ಲಾನೆಟ್ ಕನ್ನಡ?

ಸಂಪದ Sampada
ಇದು ಸಂಪದದ ಒಂದು ಯೋಜನೆ.

ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.

 

ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪ್ಲಾನೆಟ್ ಕನ್ನಡ ಒಂದು ಫೀಡ್ ಅಗ್ರಿಗೇಟರ್. ಹಾಗಂದರೇನು? ಕನ್ನಡದ ವೆಬ್ಸೈಟುಗಳ ಅರ್ ಎಸ್ ಎಸ್ (RSS - Really Simple Syndication) ಫೀಡ್ ಒಟ್ಟುಗೂಡಿಸಿ ನಿಮಗೆ ಒಂದೇ ಜಾಗದಲ್ಲಿ ಓದಲು ಸೌಲಭ್ಯ ಕಲ್ಪಿಸುವ ಯೋಜನೆ. ಗಮನಿಸಿ - ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

Planet Kannada is a Kannada feed aggregator which aggregates content from Kannada websites and Kannada blogs to present it for readers at one location. No content is owned by Planet Kannada. The copyright of the content rest with respective blogs or projects or websites. Note that the readers will be redirected to the respective websites on clicking on content aggregated here.

Add us up on Social media:

Google+

© ಆಯಾ ಬ್ಲಾಗ್ ಅಥವ ಯೋಜನೆಯದ್ದು. ಈ ವೆಬ್ಸೈಟಿನಲ್ಲಿ ಏನಾದರೂ ತೊಂದರೆ ಕಂಡುಬಂದಲ್ಲಿ ಅಥವ ಇದರಲ್ಲಿ ಪಟ್ಟಿಯಾಗಿರುವ ಬ್ಲಾಗ್ ಅಥವ ವೆಬ್ಸೈಟುಗಳು ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಲ್ಲಿ ಅದನ್ನು ನಿರ್ವಾಹಕರ ಗಮನಕ್ಕೆ ತನ್ನಿ.

© Copyright rest with respective websites and projects. Please report plagiarism or abuse.

Technology provided and supported by: Saaranga