Skip to main content

Sunday 28 May 2023

Home

ಅಂತರ್ಜಾಲದ ಕನ್ನಡ ಪುಟಗಳು ಅಂತರ್ಜಾಲದ ಕನ್ನಡ ಜಗತ್ತು

   

Main menu

  • ಮುಖಪುಟ
  • ನಿಮ್ಮ ಫೀಡ್ ಸೇರಿಸಿ
  • ಸಂಪರ್ಕ

ಬ್ಲಾಗ್ಸ್

ದರ್ಶಿನಿ ಹೋಟೆಲುಗಳೆಂಬ ಅನ್ನಪೂರ್ಣೆಯರು
ಸಣ್ಣ ಊರಿನಿಂದ ಮಹಾನಗರಕ್ಕೆ ಬರುವವರಿಗೆ ಅಚ್ಚರಿಯೆನಿಸುವ ಹಲವು
ಸಂಗತಿಗಳು ಇಲ್ಲಿ ಅಡಿಗಡಿಗೂ ಕಾಣಸಿಗುತ್ತವೆ. ಅಬ್ಬಾ ಎನಿಸುವಂತಹ ಇಲ್ಲಿನ ಟ್ರಾಫಿಕ್ಕು,
ರಸ್ತೆಯಿಕ್ಕೆಲದ
ಥಳಥಳ ಕಟ್ಟಡಗಳು,
ಐಷಾರಾಮಿ ಬಂಗಲೆಯಿಂದ ಹೊರಬಂದು ಸುಂಯ್ಯನೆ ಕಣ್ಮುಂದೆ ಹಾಯುವ ಕಾರುಗಳು,
ತರಾತುರಿಯೇ ಜೀವನಕ್ರಮವೆಂಬಂತೆ ಓಡುತ್ತಲೇ ಇರುವ ಜನ, ಮಾಲುಗಳ
ಎಸ್ಕಲೇಟರುಗಳು, ಪಾರ್ಕುಗಳಲ್ಲಿನ ನಗೆಕ್ಲಬ್ಬುಗಳು.... ಹೀಗೆ
ನಮ್ಮೂರಲ್ಲಿಲ್ಲದ ಸಂಗತಿಗಳೆಲ್ಲ ಇಲ್ಲಿ ವಿಸ್ಮಯದ ಚಿತ್ರಗಳಾಗಿ ಕಾಣುವವು. ಇಂತಹ ನಗರದಲ್ಲಿ
ಹೊಸದೆನ್ನಿಸಿದ ವಿಷಯಗಳ ಪಟ್ಟಿಗೇ ಸೇರಿಸಬಹುದಾದ ಇನ್ನೊಂದು ವಿಶೇಷವೆಂದರೆ ಇಲ್ಲಿನ
ಗಲ್ಲಿಗಲ್ಲಿಯಲ್ಲೂ ಇರುವ ‘ದರ್ಶಿನಿ’
ಹೋಟೆಲುಗಳು.   ಹಳ್ಳಿ ಅಥವಾ ಸಣ್ಣ ಪಟ್ಟಣದಲ್ಲಿ ಹುಟ್ಟಿ...
Source: :ಮೌನಗಾಳ:
Read More
ಅನವರತ -ಒಂದು ನೀಳ್ಗವಿತೆ

[ಈ ನೀಳ್ಗವಿತೆ ಅಥವಾ ಸರಣಿ ಕವಿತೆಗಳು ಮೊಮ್ಮಗನ ನೋಟದಲ್ಲಿ
ಬೆಳಗಿದ ಅಜ್ಜ-ಅಜ್ಜಿಯ ದಾಂಪತ್ಯಜೀವನದ ಕತೆಯಾಗಿದೆ. ಸುಮಾರು ಎರಡು ವರುಷಗೂಡಿ ಬರೆದು ಮುಗಿಸಿದ ಈ
ನೀಳ್ಗವಿತೆ 2015ರಲ್ಲಿ ‘ಚುಕ್ಕು-ಬುಕ್ಕು’ವಿನಲ್ಲಿ ಪ್ರಕಟವಾಗಿತ್ತು. ಆಗ ‘ಚುಕ್ಕು-ಬುಕ್ಕು’ವಿಗೆ ಹಿರಿಯ ಕವಿ ಎಚ್ಚೆಸ್ವಿಯವರು ಸಂಪಾದಕರಾಗಿದ್ದರು. ರಘು ಅಪಾರ ಚಂದದ
ಚಿತ್ರಗಳನ್ನು ಬಿಡಿಸಿದ್ದರು. ಈಗ ‘ಚುಕ್ಕು-ಬುಕ್ಕು’ ಇಲ್ಲವಾದ್ದರಿಂದ, ದಾಖಲೆಗಿರಲಿ ಅಂತ, ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.
ಇದು ನಾನು ಕೇಳಿದ-ನೋಡಿದ ನನ್ನ ಅಜ್ಜ-ಅಜ್ಜಿಯರ ಕತೆಯೇ ಆಗಿದ್ದರೂ, ನನ್ನ
ಬರೆಯುವ ಸ್ವಾತಂತ್ರ್ಯದಲ್ಲಿ ಮತ್ತು ಕಾವ್ಯಕ್ಕೆ...

Source: :ಮೌನಗಾಳ:
Read More
ಬಾಕಿ ಮೊಕ್ತಾ

ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂಡಕ್ಟರಿಗೂ ಮರಳಿಸದೆ ಉಳಿದ ಚಿಲ್ಲರೆ?
ಅಥವಾ ನೂರಾರು ಚಿಲ್ಲರೆ ವಿಷಯಗಳ ನಡುವೆ
ಅವನಿಗೆ ಮರೆತೂ ಹೋಗಿರಬಹುದು

ಹಾಗೆ ಮರೆತು ಬಂದುದು ಹಲವು ವಿಷಯ
ದಿನಸಿ ಅಂಗಡಿಯಲ್ಲಿ ತೂಗಿಟ್ಟಿದ್ದ ಸಕ್ಕರೆ
ತರಕಾರಿ ಅಂಗಡಿಯಲ್ಲಿ ಮಡಚಿಟ್ಟಿದ್ದ ಕೊಡೆ
ಮದುವೆಮನೆಯಲ್ಲಿ ಮಾತಾಡಿಸಲೇಬೇಕಿದ್ದ ನೆಂಟ
ಭಾಷಣದ ನಡುವೆ ಮಾಡಬೇಕೆಂದಿದ್ದ ಪ್ರಸ್ತಾಪ
ವಿದಾಯದ ಮೊದಲು ಕೊಡಬೇಕಿದ್ದೊಂದು ಅಪ್ಪುಗೆ

ಮರೆಯುತ್ತವೆ ಮರೆತ ವಿಷಯಗಳೂ ಕಾಲಕ್ರಮೇಣ
ಬಿಡುತ್ತವೆ ಕಾಡುವುದ ಹೊಸಹೊಸ...

Source: :ಮೌನಗಾಳ:
Read More
ಐಡಿಯಲ್ ಬಾಯ್

ಬೆಳಕಿನ ಸೆಲೆಯ ಅರಸಿ ಹೊರಟ ಹುಡುಗ
ಕೊನೆಗೇನಾದ ಎಂದು ಅವರು ಹೇಳುವುದಿಲ್ಲ
ಆದರೆ ಅವನಿಗೆ ಒಳ್ಳೆಯದೇ ಆಗುತ್ತದೆ
ಚೆನ್ನಾಗಿ ಕಲಿತು ಮುಂದೆ ದೊಡ್ಡ ಸಿನೆಮಾ ಮಾಡುತ್ತಾನೆ

ಅವನಿಗೀಗ
ಬಳೆಗಳಿಗೆ ಬಣ್ಣ ಎಲ್ಲಿಂದ ಬರುತ್ತದೆ ಎಂಬುದು ಗೊತ್ತು
ಕುಳಿಯ ಚಮಚೆಗೆ ಅಷ್ಟುದ್ದ ಹಿಡಿಕೈ ಹಚ್ಚಿದ್ದು ಗೊತ್ತು
ಚಲನಚಿತ್ರವು ಹೇಗೆ ಮೂಡುತ್ತದೆಂಬುದು ಗೊತ್ತು
ನಿರುದ್ಯೋಗಿಗೆ ಕೆಲಸ ಕೊಡಿಸುವುದು ಗೊತ್ತು
ಐಡಿಯಲ್ ಬಾಯ್ ಹೇಗಿರಬೇಕೆಂಬುದು ಗೊತ್ತು

ಅಥವಾ ಅವನಿಗೆ ಈ ಮೊದಲೇ ಎಲ್ಲಾ ತಿಳಿದಿತ್ತು
ಓಡುವ ರೈಲಿನಲ್ಲಿ ಚಹಾ ಮಾರುವ ಚಾಕಚಕ್ಯತೆ
ಮೊಳೆಯ ಅಲಗನ್ನು ಚೂಪಾಗಿಸಿ ಬಾಣ ಮಾಡುವ ಕಲೆ
ಕನಸಿನ ಸಿನೆಮಾ ನೋಡಲು ಶಾಲೆ ತಪ್ಪಿಸಿ ಓಡುವ ಬಗೆ
ಹಸಿದ...

Source: :ಮೌನಗಾಳ:
Read More
BUSINESS AS USUAL!

… BUSINESS AS USUAL! ಓದಲು ಮುಂದುವರೆಸಿ

Source: nageshamysore
Read More
Get Daily Vachana Push Notifications

One of the things that I would like to do every day is to read a Vachana. It does appear to me on my desktop daily, but even then, I miss it when I don't access that specific computer or am busy. So a push message would be great. I usually pay attention to push messages because no app on my phone except a couple can show push messages. One of them is ntfy. Push notification on...

Source: Thejesh GN
Read More
ವಾರಂಟಿ

ಪರಿಶೀಲಿಸಿ ನೋಡಬೇಕು
ಮರು
ಪರಿಶೀಲಿಸಿ ನೋಡಬೇಕು
ತಿಕ್ಕಿ ಒರೆಗೆ ಹಚ್ಚಿ
ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ
ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ
ಹೊರಗೆ ಕಾಲಿಟ್ಟರೆ ಮೋಸ ದಗಾ ವಂಚನೆ
ಸುಳ್ಳೇ ಎಲ್ಲರಮನೆ ದೇವರು
ಅಷ್ಟು ದುಬಾರಿಯ ಒಡವೆ ಕೊಳ್ಳುವಾಗ
ಕಣ್ಮುಚ್ಚಿ ಕೂರಲಾಗುವುದೇ

ಅಯ್ಯೋ ನನ್ ಮೇಲೆ ನಂಬಿಕೆ ಇಲ್ವಾ ಸಾರ್
ದಿನಾ ನೋಡೋ ಮುಖ ಅಲ್ವಾ ಸಾರ್
-ದೊಡ್ಡ ದನಿಯಲ್ಲಿ ಕೇಳುತ್ತಾನೆ ಅಂಗಡಿಯವ
ಆತ್ಮೀಯತೆಯ ಸೋಗು ಹಾಕಿ
ಮುಖ ಅದೇ ಕಣಪ್ಪಾ, ಆದರದನು ಮುಚ್ಚಿರುವ
ಕಾಸ್ಮೆಟಿಕ್ಕುಗಳಿಗೆ ಬಿಡಿಸಿ ನೋಡಲಾಗದಷ್ಟು ಪದರ

ನಾನು ನಿನಗೆ ಮೋಸ ಮಾಡ್ತೀನಾ ಮಾರಾಯಾ
ಖೋಟಾ ಅಲ್ಲವೋ, ಈಗಷ್ಟೆ ಬ್ಯಾಂಕಿನಿಂದ ತಂದದ್ದು...

Source: :ಮೌನಗಾಳ:
Read More
ಹಾಗಂದುಕೊಂಡಿರುವಾಗ

 ಅಪ್ಪನ ಶರಟು ಧರಿಸಿದ ಮಗಳು ಹೇಳಿದಳು:
'ಅಪ್ಪಾ, ಈಗ ನಾನು ನೀನಾದೆ!'

ಅದು ಸುಲಭ ಮಗಳೆ:
ಇರಬಹುದು ಸ್ವಲ್ಪ ದೊಗಳೆ
ಮಡಚಬೇಕಾಗಬಹುದು ತೋಳು
ಕುತ್ತಿಗೆಯ ದಾಟುವ ಕಾಲರು
ಚಡ್ಡಿಯಿಲ್ಲದಿದ್ದರೂ ನಡೆಯುವುದು ದರಬಾರು
ಪರವಾಗಿಲ್ಲ: ಯಬಡಾ ತಬಡಾ ಅನಿಸಿದರೂ ಚೂರು

ಆದರೆ
ನಿನ್ನ ಅಂಗಿಯ ನಾನು ಧರಿಸಲಾರೆ
ಅಷ್ಟೇ ಏಕೆ,
ನಿನ್ನಂತೆ ಲಲ್ಲೆಗರೆಯಲಾರೆ
ನಿನ್ನಂತೆ ನಿದ್ರಿಸಲಾರೆ
ನಿನ್ನಂತೆ ಆಟವಾಡಲಾರೆ
ನಿನ್ನಂತೆ ಉಣಲಾರೆ

ಹೇಳುವುದುಂಟು ಜನ:
ನಾನು ಅಪ್ಪನ ಹಾಗೆಯೇ ಮಾತನಾಡುತ್ತೇನೆಂದು
ಅಮ್ಮನ ಹಾಗೆಯೇ ದ್ರೋಹಿಗಳ ಕ್ಷಮಿಸುತ್ತೇನೆಂದು
ಇನ್ಯಾರ ಹಾಗೋ ನಡೆಯುತ್ತೇನೆಂದು
ಮತ್ಯಾರ ಹಾಗೋ ಬರೆಯುತ್ತೇನೆಂದು
ಥೇಟು...

Source: :ಮೌನಗಾಳ:
Read More
ಮಾವಿನ ರುಚಿಯ ಮಾಯೆ

ನಾವೆಲ್ಲ ನಮ್ಮ ಪಠ್ಯಪುಸ್ತಕದಲ್ಲಿ ಓದಿದ್ದೇ: “ವಿಜಯನಗರ
ಸಾಮ್ರಾಜ್ಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ಬಳ್ಳಗಳಲ್ಲಿಟ್ಟು ರಸ್ತೆಯ
ಇಕ್ಕೆಲಗಳಲ್ಲೂ ಕೂತು ಮಾರುತ್ತಿದ್ದರು” -ಎಂದು. ಅಂತಹ ವೈಭೋಗವನ್ನು ಕಣ್ಣಾರೆ ನೋಡುವ
ಅದೃಷ್ಟವನ್ನಂತೂ ನಾವು ಪಡೆಯಲಿಲ್ಲ. ಚಿನ್ನ-ಬೆಳ್ಳಿ-ವಜ್ರಗಳೆಲ್ಲ ಅತ್ಯಮೂಲ್ಯ ದ್ರವ್ಯಗಳಾಗಿ
ಮಾರ್ಪಟ್ಟು, ಗಾಜು ಹೊದಿಸಿದ ಹವಾನಿಯಂತ್ರಿತ ಜ್ಯುವೆಲರಿ ಅಂಗಡಿಗಳಲ್ಲಿ ಸ್ಥಾಪಿತವಾಗಿ,
ರಸ್ತೆಯಲ್ಲಿ
ನಡೆಯುವಾಗ ಅತ್ತ ನೋಡಲೂ ಭಯವಾಗುವಷ್ಟು ಬೆಲೆ ಹೊಂದಿರುವಾಗ, ಹಿಂದೊಮ್ಮೆ ಅವು ರಸ್ತೆ ಬದಿಗೆ
ಮಾರಲ್ಪಡುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದಾಯಕ ವಿಷಯ.  ಆದರೆ ಹೆಚ್ಚುಕಮ್ಮಿ ಚಿನ್ನದ ಬಣ್ಣವನ್ನೇ ಹೊಂದಿದ ಒಂದು...

Source: :ಮೌನಗಾಳ:
Read More
ರೆಕ್ಕೆ
 
ಹಕ್ಕಿಗೆ ರೆಕ್ಕೆಗಳು ಅದ್ಯಾವಾಗ ಮೂಡುವವೋ ಗೊತ್ತೇ ಆಗುವುದಿಲ್ಲ ಅಥವಾ ಅವು ಹುಟ್ಟುವಾಗಲೇ ಇರುತ್ತವೋ? ಪಾರದರ್ಶಕ ರೆಕ್ಕೆಗಳು ಬಹಳ ಮೋಸ   ಹಸಿವೆಂದು ಕೀರುವಾಗ ಗುಟುಕು ಕೊಡುವವರೆಗೆ ಹರೆಯಲೂ ಬರದ ಅವಸ್ಥೆಯಲಿ ಎತ್ತಿಕೊಂಡಾಡಿಸುವವರೆಗೆ ಕೂರಲು ನಿಲ್ಲಲು ನಡೆಯಲು ಮೈ ತೊಳೆಸಲು ಎಲ್ಲಕೂ ತಂದೆತಾಯಿಯೂರುಗೈ ಬೇಕೆಂದಿದ್ದ ಕಾಲವೊಂದಿತ್ತು ನಿಂತು ನಡೆಯುವಂತಾದರೂ ನೆರವಿಗೊಬ್ಬರು ಬೇಕಿತ್ತು- ಕತ್ತಲೆ ಕೋಣೆಯೊಳಗೆ ಹೆಜ್ಜೆಯಿಡಲು ರಾತ್ರಿ ಪಕ್ಕದಲಿ ಮಲಗಲು ಮನೆಯಿಂದ ಹೊರಗಡಿಯಿಡಲು ಅಪರಿಚಿತರೆದುರು ಸುಳಿಯಲು ಗುಮ್ಮನ ಭಯ ಕಳೆಯಲು   ಆದರೆ ಅವೆಲ್ಲ ಹೇಗೆ ಯಾವಾಗ ಹಾರಿ ಹೋದವು? ಒಂದು ದಿನ ಎದ್ದು ತಾನೇ ಶುಭ್ರವಾಗಿ ತಾನೇ ಬಟ್ಟೆ ಧರಿಸಿ ತಾನೇ ಅಲಂಕರಿಸಿಕೊಂಡು ಬಿರಬಿರನೆ ನಡೆದು ಬಂದು ಜಗಲಿಗೆ ದಿಟ್ಟವಾಗಿ ನಿಂತು...
Source: :ಮೌನಗಾಳ:
Read More
ಒಡೆದ ಹಿಮ್ಮಡಿ ಕಾಲಿನಂದದಿ
ತಿರುವುತ್ತ ತಿರುವುತ್ತ ಕ್ಯಾಲೆಂಡರಿನ ಪುಟಗಳು
ಖಾಲಿಯಾಗಿ ಕೊನೆಯ ಎರಡು ಹಾಳೆಗಳು ಉಳಿಯಿತು ಎನ್ನುವಾಗ ಚಳಿಗಾಲ ಇಳೆಗೆ ಕಾಲಿಡುತ್ತದೆ. ಕಂಬಳಿ
ಮಾರುವ ಅಂಗಡಿಗಳಲ್ಲಿ ಹೊಸ ಸ್ಟಾಕು ತರಿಸುತ್ತಾರೆ. ಬೀದಿಬದಿಗಳಲ್ಲಿ ಬೆಚ್ಚನೆಯ
ಸ್ವೆಟರು-ಜಾಕೆಟ್ಟುಗಳ ಮಾರಾಟ ಶುರುವಾಗುತ್ತದೆ. ರಾತ್ರಿಯ ಸಮಯ ಅಲ್ಲಲ್ಲಿ ಹೊಡಚಲು ಹಾಕಿ ಬೆಂಕಿ
ಕಾಯಿಸುವ ಜನಗಳು ಕಾಣತೊಡಗುತ್ತಾರೆ. ಫ್ಯಾನುಗಳು ಸಂಜೆಯ ಹೊತ್ತಿಗೇ ಆಫ್ ಆಗಿ ಪಂಕಗಳಿಂದ ಆಕಳಿಕೆಯ
ಸದ್ದು ಕೇಳಿಬರುತ್ತದೆ. ‘ಮಾಘಮಾಸ
ಬಂತಯ್ಯಾ ಪ್ರೇಮಿಗಳಿಗಿನ್ನು ಹಬ್ಬವಯ್ಯಾ’
ಅಂತೆಲ್ಲ ಕವಿತೆ ಬರೆಯಬಹುದು ಎಂದು ಕಲ್ಪಿಸಿಕೊಂಡು ಕವಿಗಳು ರೋಮಾಂಚಿತರಾಗುತ್ತಾರೆ. ಬಾಟಲಿಯಲ್ಲಿನ
ಕೊಬ್ರಿ ಎಣ್ಣೆ ಇಟ್ಟಲ್ಲೆ ಗಟ್ಟಿಯಾಗುತ್ತದೆ. ಐಸ್‌ಕ್ರೀಮ್ ಅಂಗಡಿಯವನು...
Source: :ಮೌನಗಾಳ:
Read More
ಕವಳತಬಕು

ಊಟಕ್ಕೆ ಯಾವ ತಟ್ಟೆಯಾದರೂ ಆದೀತು
ಬಂಗಾರದ ತಟ್ಟೆಯಲ್ಲುಣ್ಣುವ ಅತಿಸಿರಿವಂತರೂ
ಬೆಳ್ಳಿತಟ್ಟೆಯಲ್ಲುಣ್ಣುವ ಸಿರಿವಂತರೂ
ಹಿತ್ತಾಳೆಯ ತಟ್ಟೆಯೂಟ ಆರೋಗ್ಯಕ್ಕೊಳಿತೆನ್ನುವವರೂ
ಸ್ಟೀಲಿನ ತಟ್ಟೆ ಹಿಡಿದ ಮಧ್ಯಮವರ್ಗದವರೂ
ಪಿಂಗಾಣಿ ಬಳಸುವ ನಾಜೂಕುದಾರರೂ
ದರ್ಶಿನಿಯ ಹಾಳೆತಟ್ಟೆ ರಿಸೆಪ್ಷನ್ನಿನ ಪ್ಲಾಸ್ಟಿಕ್ ತಟ್ಟೆ
ಬಡತನದ ದಿನಗಳ ಸಿಲಾವರದ ತಟ್ಟೆ
ಕಾರ್ಯದ ಮನೆಯ ಬಾಳೆಯೆಲೆ ಊಟ
ಬಿಡಿ, ತಟ್ಟೆಯೇ ಇಲ್ಲದಿದ್ದರೆ ನೇರ ಅಮ್ಮನ ಕೈತುತ್ತು

ಆದರೆ ಕವಳತಬಕಿಗೆ ಚಿತ್ತಾರವಿರುವ ತಟ್ಟೆಯೇ ಆಗಬೇಕು
ಸುಗಂಧಿನೀ ನದಿಯ ತೀರದಲ್ಲಿ ಬೆಳೆದ ವೀಳ್ಯದೆಲೆ
ತಾ ಹಬ್ಬಿದ ಮರದಿಂದಿಳಿಸಿ ಬೇಯಿಸಿದ ಕೆಂಪಡಿಕೆ
ಕೊತಕೊತ ನೀರಲ್ಲಿ ಬೆಂದು ತಿಳಿಯಾದ ಬಿಳಿಸುಣ್ಣ
ಮತ್ತಾ ಕರಿಕರಿ ಎಸಳು...

Source: :ಮೌನಗಾಳ:
Read More
ತಾರಸಿಯಿಂದ ಕಂಡ ಮಹಾನಗರ

ಮಲೆನಾಡಿನ ಪುಟ್ಟ ಹಳ್ಳಿಯಿಂದ ಬಂದ ನಮಗೆ ಇಡೀ ಬೆಂಗಳೂರು ಸುತ್ತಿದರೂ ಒಂದೇ ಒಂದು ಸೋಗೆಯ ಮನೆ ಅಥವಾ ಹೆಂಚಿನ ಮನೆ ಕಾಣದಿದ್ದುದು ಸೋಜಿಗದ ಸಂಗತಿಯಾಗಿತ್ತು. ಬೆಂಗಳೂರನ್ನು ನೋಡಲೆಂದು ನಾನು ಮೊದಲ ಸಲ ಇಲ್ಲಿಗೆ ಹೊರಟಾಗ ಅಪ್ಪ, ‘ಎಂಜಿ ರೋಡು ನೋಡೋದಕ್ಕೆ ಮರೀಬೇಡ. ಅಲ್ಲಿಗೆ ಹೋದರೆ ಬೇರೆಯದೇ ಲೋಕಕ್ಕೆ ಹೋದಹಾಗೆ ಆಗುತ್ತೆ. ಪೆಟ್ಟಿಗೆ-ಪೆಟ್ಟಿಗೆಗಳ ಹಾಗೆ ಪಕ್ಕಪಕ್ಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಆರ್‌ಸಿಸಿ ಕಟ್ಟಡಗಳು, ಎಲ್ಲಾ ನೀಟಾಗಿ ತುಂಬಾ ಚೆನ್ನಾಗಿದೆ’ ಅಂತ ಹೇಳಿದ್ದ. ಅವನಾದರೋ ಎಷ್ಟೋ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರಿನ ಚಿತ್ರವನ್ನು ಕಣ್ಮುಂದೆ ಇಟ್ಟುಕೊಂಡು ಹೇಳಿದ್ದು; ಆದರೆ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಬೆಂಗಳೂರೇ ಎಂಜಿ ರೋಡಿನ ಹಾಗೆ ಆಗಿತ್ತು. ಎಲ್ಲ ಏರಿಯಾಗಳಲ್ಲೂ ಎಂಜಿ ರೋಡಿನ ಹಾಗೆ ಚಂದದ ಥಳಥಳ ಕಟ್ಟಡಗಳು,...

Source: :ಮೌನಗಾಳ:
Read More
ಆನ್ಲೈನ್ ಹಂಗಾಮ (ಹರಟೆ / ಲಘು ಹಾಸ್ಯ – ಗುಬ್ಬಣ್ಣ)

… ಆನ್ಲೈನ್ ಹಂಗಾಮ (ಹರಟೆ / ಲಘು ಹಾಸ್ಯ – ಗುಬ್ಬಣ್ಣ) ಓದಲು ಮುಂದುವರೆಸಿ

Source: nageshamysore
Read More
ಕರುಣಾಳು ಬಾ ಬೆಳಕೆ

I got a Christmas gift from a friend. I loved it. They wanted me to sing a Christmas song. That's something I can't do. Instead, I chose to recite the poem ಕರುಣಾಳು ಬಾ ಬೆಳಕೆ by BM Shree. Originally called Lead, Kindly Light titled "the Pillar of the Cloud" was written by John Henry Newman, an English priest. He wrote it during his difficult times.

...
Source: Thejesh GN
Read More
ಲಂಚ್ ಅವರ್

ಆಫೀಸಿಗೆ ಹೊರಟ ಅಪ್ಪನ ಚೀಲಕ್ಕೆ
ಮಗಳು ತಿಂಡಿ ತುಂಬಿದ ಡಬ್ಬಿ ಹಾಕಿದಳು

ಪುಟ್ಟ ಪುಟ್ಟ ಪಡ್ಡುಗಳನು
ಪುಟ್ಟ ಪುಟ್ಟ ಕೈಗಳಲಿ ಹಿಡಿದು
ಸಣ್ಣ ದನಿಯಲ್ಲವನು ಎಣಿಸುತ
ತುಂಬುವಷ್ಟರಲ್ಲಿ ಡಬ್ಬಿ ಎಣಿಕೆ ತಪ್ಪಿ
ಮತ್ತೆ ಎಣಿಸಿ ಮತ್ಮತ್ತೆ ಎಣಿಸಿ
ಮುಚ್ಚಳ ಹಾಕುವಷ್ಟರಲ್ಲಿ
ಅಪ್ಪನಿಗೆ ಗಡಿಬಿಡಿಯಾಗಿ ಗಲಿಬಿಲಿ
ಖಾರದ ಚಟ್ನಿಯನು ಸುತಾರಾಂ
ತಾನು ಮುಟ್ಟದೆ ಅಮ್ಮನಿಂದಲೇ
ಡಬ್ಬಿಗೆ ತುಂಬಿಸಿ ಚೀಲದಲಿರಿಸಿ

ಮಧ್ಯಾಹ್ನ ಹಸಿದ ಅಪ್ಪ ಚೀಲ ತೆರೆಯಲು
ಊಟದ ಡಬ್ಬಿಯೊಂದಿಗೆ ಯಾವುದೋ ಮಾಯೆಯಲಿ
ಮಗಳು ಚೀಲದೊಳಗಿರಿಸಿರುವ ಒಂದು
ಆಟಿಕೆ ಸಾಮಗ್ರಿಯೂ ಸಿಕ್ಕು
ಈಗ ಊಟ ಮಾಡುವುದೋ ಆಟವಾಡುವುದೋ
ತಿಳಿಯದೆ ಮತ್ತೆ ಗಲಿಬಿಲಿ

ಆಟದೊಂದಿಗೆ...

Source: :ಮೌನಗಾಳ:
Read More
ಬಿಸಿಲು-ನೆರಳು

ನ್ಯಾಲೆ ಭರ್ತಿಯಾಗಿದೆ; ಮಗಳ ಎರಡು ಅಂಗಿಗಳಿಗೀಗ ಜಾಗವಿಲ್ಲ
ಅಪ್ಪನೊಂದಿಗೇ ಬಟ್ಟೆಯೊಣಗಿಸಲು ಕ್ಲಿಪ್ಪಿನ ಸಂಗಡ
ಟೆರೇಸಿಗೆ ಬಂದ ಮಗಳು, ತನ್ನೆರಡು ಅಂಗಿ
ಹಾಗೆಯೇ ಉಳಿದುದು ಕಂಡು ಮುಖ ಸಣ್ಣದಾಗಿ
ಬಿಸಿಲು ಸುರಿಸುವ ಸೂರ್ಯನಿಗೂ ದಿಗಿಲು

ಚಪ್ಪಲಿ ಹಾಕಿಕೋ ಎಂದರೂ ಹಾಗೆಯೇ ಬಂದ ಮಗಳು, ಕಾದ ನೆಲ,
ಕಣ್ಣಿಂದೆರಡು ಹನಿ ಜಾರಿದರೂ ಅದು ಕ್ಷಣದಲ್ಲೇ ಇಂಗಬಹುದು
ಅಪ್ಪನೀಗ ತನ್ನ ಚಪ್ಪಲಿಯನ್ನೇ ಕೊಟ್ಟು, ಮಗಳಿಗೆ ನೆರಳಾಗಿ ನಿಂತು
ಮುಂದೇನೆಂದು ನೋಡಲಾಗಿ

ಬೇರೆ ನ್ಯಾಲೆಗಳಲ್ಲಿ ಬೇರೆ ಮನೆಯವರ ಬಟ್ಟೆಗಳು
ಅಂಗಿ ಚಡ್ಡಿ ಪ್ಯಾಂಟು ಟಾಪು ಸೀರೆ ರವಿಕೆ ಬನೀನು
ಮನುಜರ ಮೈ ಮುಚ್ಚಲು ಎಷ್ಟೆಲ್ಲ ಪಡಿಪಾಟಲು

ಮೂಲೆಯಲ್ಲಿರುವ ಪಾಟಿನಲ್ಲಿ ನಳನಳಿಸುತ್ತಿರುವ ದೊಡ್ಡಪತ್ರೆ
...

Source: :ಮೌನಗಾಳ:
Read More
ಜೀವ

ಪುಷ್ಯ ಮಾಸದ ಆಕಾಶ ಕಡುನೀಲಿ
ರಾತ್ರಿ ಕಟ್ಟಿಕೊಂಡಿದ್ದ ಇಬ್ಬನಿ ಮೋಡಗಳೂ ಕರಗಿ
ರವಿ ಮೂರಾಳೆತ್ತರಕ್ಕೇರುವ ವೇಳೆಗೆ
ಎಲ್ಲಾ ಶುಭ್ರ ನಿರಭ್ರ

ಬೇಕಿದ್ದರೆ ಒಂದು ಕುಂಚ ಹಿಡಿದು
ಇದೇ ನೀಲಿಗದ್ದಿ ತೆಗೆದು
ಮಣ್ಣ ಮೂರುತಿಗೆ ಬಳಿದು
ಅದನು ಕೃಷ್ಣನನ್ನಾಗಿಸಬಹುದು

ಆಮೇಲಾ ಕೃಷ್ಣನಿಗೆ ಊದಲು ಕೊಡಲು
ಬೇಕೊಂದು ಕೊಳಲು
ಈಗಷ್ಟೆ ಕಳೆದ ಮಳೆಗಾಲದ ನೀರು ಕುಡಿದು
ಮೊಳೆತು ಚಿಗುರಿದೆ ಬಿದಿರು
ನುಗ್ಗಿ ಮೆಳೆಯೊಳಗೆ ತೆಗೆದು ಸಿಗುರು
ಇಟ್ಟಾಗಿದೆಯೀಗ ಶ್ಯಾಮನ ಕೈಗೆ
ಇನ್ನು ಭುವಿಯ ಜನರೆಲ್ಲ ಮರುಳು

ನವಿಲುಗರಿಯದೇ ಸಮಸ್ಯೆ
ಮೋಡವಿದ್ದರೆ ಹಿತ್ತಿಲಿಗೆ ಬಂದ ನವಿಲು
ಉನ್ಮಾದದಲಿ ಕುಣಿದು
ಒಂದಷ್ಟು ಗರಿಗಳನುದುರಿಸಿ ಹೋಗುತ್ತಿತ್ತು...

Source: :ಮೌನಗಾಳ:
Read More
ಟಿವಿಯೆಂಬ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ...

ಊರಿನ ಮೊದಲ ಟಿವಿ ಬಂದದ್ದು ನಿಚ್ಛಳವಾಗಿ ನೆನಪಿದೆ. ಎಲ್ಲ ಹೊಸ ವಸ್ತುಗಳಂತೆ ಪಟೇಲರ ಮನೆಗೇ ಬಂದದ್ದು ಮೊದಲ ಟಿವಿ. ಮರ ಹತ್ತುವುದರಲ್ಲಿ ನಿಷ್ಣಾತ ಎಂದು ಹೆಸರಾಗಿದ್ದ ನರಸಿಂಹ ಶೆಟ್ಟಿಗೆ ಆಂಟೆನಾ ಕೂರಿಸುವ ಕೆಲಸ ವಹಿಸಲಾಗಿತ್ತು. ಪಟೇಲರ ಮನೆಯ ಸಮೀಪವಿದ್ದ ಅತಿ ಎತ್ತರದ ಮರದ ಮೇಲೆ ಆಂಟೆನಾ ಕೂರಿಸುವುದು ಅವನ ಜವಾಬ್ದಾರಿಯಾಗಿತ್ತು. ಅಂತಹ ಮರ ಹುಡುಕಿ ಆಂಟೆನಾ ಕೂರಿಸಿದ ಅವನು, ಊರಿನ ಪ್ರತಿ ಮನೆ ಹೊಕ್ಕು, “ನೋಡಿ, ಪಟೇಲ್ರು ಮನಿಗೆ ಟೀವಿ ಬಂತು. ಆಂಟೆನಾ ಕೂರ್ಸಕ್ಕೆ ನನ್ನೇ ಕರ್ದೀರು. ಅದೇ ಅಲ್ ಕಾಣಿ, ಎಷ್ಟ್ ಎತ್ರಕ್ ಕೂರ್ಸೀದೆ” ಅಂತ ಹೇಳಿ, ಎಲ್ಲರಿಂದಲೂ ತನ್ನ ಸಾಹಸಕಾರ್ಯಕ್ಕೆ ಶಹಬ್ಬಾಷ್ ಗಿಟ್ಟಿಸಿಕೊಂಡು ಬಂದಿದ್ದ. ಅವನಾದರೂ ಎಷ್ಟು ಎತ್ತರಕ್ಕೆ ಅದನ್ನು ಕೂರಿಸಿದ್ದ ಎಂದರೆ, ಊರಿನ ಬಹುಪಾಲು ಮನೆಗಳ ಕಟ್ಟೆಯ ಮೇಲೆ ನಿಂತರೆ ಆ...
Source: :ಮೌನಗಾಳ:
Read More
ಸಣ್ಣಕಥೆ: ಪಾಪ ಪ್ರಜ್ಞೆ

… ಸಣ್ಣಕಥೆ: ಪಾಪ ಪ್ರಜ್ಞೆ ಓದಲು ಮುಂದುವರೆಸಿ

Source: nageshamysore
Read More

Pages

  • 1
  • 2
  • 3
  • 4
  • next ›
  • last »

ಏನಿದು ಪ್ಲಾನೆಟ್ ಕನ್ನಡ?

ಸಂಪದ Sampada
ಇದು ಸಂಪದದ ಒಂದು ಯೋಜನೆ.

ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.

 

ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪ್ಲಾನೆಟ್ ಕನ್ನಡ ಒಂದು ಫೀಡ್ ಅಗ್ರಿಗೇಟರ್. ಹಾಗಂದರೇನು? ಕನ್ನಡದ ವೆಬ್ಸೈಟುಗಳ ಅರ್ ಎಸ್ ಎಸ್ (RSS - Really Simple Syndication) ಫೀಡ್ ಒಟ್ಟುಗೂಡಿಸಿ ನಿಮಗೆ ಒಂದೇ ಜಾಗದಲ್ಲಿ ಓದಲು ಸೌಲಭ್ಯ ಕಲ್ಪಿಸುವ ಯೋಜನೆ. ಗಮನಿಸಿ - ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

Planet Kannada is a Kannada feed aggregator which aggregates content from Kannada websites and Kannada blogs to present it for readers at one location. No content is owned by Planet Kannada. The copyright of the content rest with respective blogs or projects or websites. Note that the readers will be redirected to the respective websites on clicking on content aggregated here.

Add us up on Social media:

Google+

© ಆಯಾ ಬ್ಲಾಗ್ ಅಥವ ಯೋಜನೆಯದ್ದು. ಈ ವೆಬ್ಸೈಟಿನಲ್ಲಿ ಏನಾದರೂ ತೊಂದರೆ ಕಂಡುಬಂದಲ್ಲಿ ಅಥವ ಇದರಲ್ಲಿ ಪಟ್ಟಿಯಾಗಿರುವ ಬ್ಲಾಗ್ ಅಥವ ವೆಬ್ಸೈಟುಗಳು ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಲ್ಲಿ ಅದನ್ನು ನಿರ್ವಾಹಕರ ಗಮನಕ್ಕೆ ತನ್ನಿ.

© Copyright rest with respective websites and projects. Please report plagiarism or abuse.

Technology provided and supported by: Saaranga