Skip to main content

Wednesday 27 September 2023

Home

ಅಂತರ್ಜಾಲದ ಕನ್ನಡ ಪುಟಗಳು ಅಂತರ್ಜಾಲದ ಕನ್ನಡ ಜಗತ್ತು

   

Main menu

  • ಮುಖಪುಟ
  • ನಿಮ್ಮ ಫೀಡ್ ಸೇರಿಸಿ
  • ಸಂಪರ್ಕ

ಬ್ಲಾಗ್ಸ್

ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !

ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !
Ashwin Rao K P
Mon, 08/14/2023 - 19:13

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೬ ವರ್ಷಗಳೇ ಕಳೆದುಹೋದವು. ನಂತರದ ದಿನಗಳಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಸಾವಿರಾರು ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತೇವೆ. ಆದರೆ ನಾವಿನ್ನೂ ಹಲವಾರು ವಿಷಯಗಳಲ್ಲಿ ಹಿಂದೆ ಇದ್ದೇವೆ. ಆದರೆ ಭವಿಷ್ಯದಲ್ಲಿ ಅದನ್ನೆಲ್ಲಾ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ನೆನಪಿನಾಳದಲ್ಲಿ ಹುದುಗಿರುವ ಬಾಲ್ಯದ...

Source: Sampada
Read More
ಕೃಷಿಕರಿಗೆ ನೆರವು ಅಗತ್ಯ

ಕೃಷಿಕರಿಗೆ ನೆರವು ಅಗತ್ಯ
Ashwin Rao K P
Mon, 08/14/2023 - 18:57

ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರವಾಗಿದೆಯೇ? ಬರಗಾಲದ ಪರಿಸ್ಥಿತಿ ಮನೆ ಮಾಡಿದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಮುಂಗಾರು ಜೂಜಾಟ ಮುಂದುವರಿದಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಜೂನ್ ತಿಂಗಳಲ್ಲಿ ಸರಾಸರಿಗಿಂತ ಶೇ. ೫೬ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈನಲ್ಲಿ ಈ ಕೊರತೆ ಶೇ. ೩ರಷ್ಟು ಮಾತ್ರ ಇದೆ. ಅಲ್ಲದೆ, ಈ ಪರಿಸ್ಥಿತಿ ಎಲ್ಲಾ ತಾಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಒಂದೇ ತೆರನಾಗಿಲ್ಲ. ಮಲೆನಾಡು ಪ್ರದೇಶಗಳಲ್ಲಿ ಸರಾಸರಿಗಿಂತ ಶೇಕಡಾ ೨೪ರಷ್ಟು ಮಳೆ ಕೊರತೆಯಾಗಿದೆ. ಈ ಗೊಂದಲಕಾರಿ ಪರಿಸ್ಥಿತಿಯ ಕಾರಣದಿಂದಾಗಿ ಬರಗಾಲ ಘೋಷಿಸಬೇಕೇ ಬೇಡವೇ ಎಂಬ ಸಂದಿಗ್ಧತೆಯಲ್ಲಿ ರಾಜ್ಯ ಸರ್ಕಾರ...

Source: Sampada
Read More
ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...

ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...
Shreerama Diwana
Mon, 08/14/2023 - 14:24

ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವೈಯಕ್ತಿಕ ಮಟ್ಟದಲ್ಲಿ, ಗುಂಪು ಘರ್ಷಣೆಗಳು, ಯೋಜಿತ ಘಟನೆಗಳು, ತಕ್ಷಣದ ಕೋಪೋದ್ರಿಕ್ತ ಪ್ರತಿಕ್ರಿಯೆಗಳು ತುಂಬಾ ಹೆಚ್ಚಾಗುತ್ತಿದೆ. ಹಿಂಸೆಯ ಪ್ರಮಾಣ, ತೀವ್ರತೆ, ವಿಕೃತಿ ಸಹ ಭಯ ಮೂಡಿಸುತ್ತಿದೆ. ರಾಜಕೀಯ ಮಾತ್ರವಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲು ಹಿಂಸೆ ವ್ಯಾಪಕವಾಗಿ ಹರಡುತ್ತಿದೆ.

...
Source: Sampada
Read More
ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು

ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು
ಬರಹಗಾರರ ಬಳಗ
Mon, 08/14/2023 - 11:12

ನಮ್ಮ ಬದುಕಿನ ಜಾಗವಿದು. ಇದನ್ನು ಬಿಟ್ಟು ಇನ್ನೊಂದು ಬದುಕಿದೆ ಅನ್ನೋದು ನಮಗೆ ಇಷ್ಟರವರೆಗೂ ಎಲ್ಲಿಯೂ ತಿಳಿದು ಬರಲಿಲ್ಲ. ಸುತ್ತಮುತ್ತ ಒಂದು ಪಂಜರ, ನನ್ನಂತೆ ಹಲವಾರು ಜನ ಯಾರನ್ನ ಅಂತ ಪರಿಚಯ ಇಟ್ಟುಕೊಳ್ಳುವುದು. ನಮ್ಮಿಂದ ಕಾಣೆಯಾಗುತ್ತಾರೆ, ಹೊಸಬರು ಪ್ರವೇಶವಾಗುತ್ತಾರೆ. ಆಗಾಗ ನಮ್ಮನ್ನ ಎತ್ತಿ ನೋಡಿ ಕೆಲವೊಂದು ಸಲ ಬಿಟ್ಟು ಹೋಗ್ತಾರೆ, ಇನ್ನೊಬ್ಬರನ್ನು ತೆಗೆದುಕೊಂಡು ಹೋಗುತ್ತಾರೆ. ಆಗ ಒಂದು ಸಲ ಕಿರುಚಾಟದ ಶಬ್ದ ಕೇಳುತ್ತೆ. ಉರುಳಾಟದ ನರಳಿಕೆ ಕೇಳುತ್ತೆ. ತಿನ್ನೋದಕ್ಕೆ ಸಿಕ್ಕಿದಾಗ ಸಂಭ್ರಮದಿಂದ ತಿಂದುಬಿಡುತ್ತೇವೆ. ನಮಗೆ ಮುಂದೇನಾಗುತ್ತೆ...

Source: Sampada
Read More
ನನ್ನೊಳಗಿನ “ಅವನು" (ಭಾಗ 1)

ನನ್ನೊಳಗಿನ “ಅವನು" (ಭಾಗ 1)
ಬರಹಗಾರರ ಬಳಗ
Mon, 08/14/2023 - 11:04

ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ್ಕಳು ಶಾಲೆಗೆ ಬರುತ್ತಿದ್ದರೂ ನನ್ನ ಕಣ್ಣು ಹುಡುಕುತ್ತಿದೆ ಅವನನ್ನು.... ಅಷ್ಟೊಂದು ಉಲ್ಲಾಸದಿಂದ ಕಳೆದ ವರ್ಷ ನಲಿಕಲಿ ಪುಟಾಣಿಗಳಿಗೆ ವಿದ್ಯಾಪ್ರವೇಶ ಮಾಡಿದ್ದರೂ ಈ ವರ್ಷ 1ನೇ ತರಗತಿಗೆ ವಿದ್ಯಾಪ್ರವೇಶ ಮಾಡುವಾಗ ಏನನ್ನೋ ಕಳೆದುಕೊಂಡ ಭಾವ! ಅದೇಕೋ ಶಾಲೆಗೆ ಹೋದರೂ ಮನೆಗೆ ಬಂದರೂ ಅವನ ನೆನಪಾದಾಗಲೆಲ್ಲ ಶೂನ್ಯ ನೋಟ...! ಮರೆಯಬೇಕು ಎಂದರೂ ಮರೆಯಲಾಗದ ಸಂಕಟ. ನನ್ನನ್ನೇ ನಾ ಮರೆತು...

Source: Sampada
Read More
ಎರಡು ಗಝಲ್ ಗಳು.....

ಎರಡು ಗಝಲ್ ಗಳು.....
ಬರಹಗಾರರ ಬಳಗ
Mon, 08/14/2023 - 10:44

೧.

ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು

ಬಾಳಿನ ಎಲುಬನ್ನು ಮುರಿದು ಎಸೆದವರಾರು

 

ಚೆಲುವಿನ ಒಡಲನ್ನು ಕರಿದು...

Source: Sampada
Read More
ಒಂದಷ್ಟು ಕಿವಿ ಮಾತು...

ಒಂದಷ್ಟು ಕಿವಿ ಮಾತು...
Shreerama Diwana
Sun, 08/13/2023 - 15:39

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ. ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ.

ಆದರೆ, ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ,...

Source: Sampada
Read More
ಸ್ಟೇಟಸ್ ಕತೆಗಳು (ಭಾಗ ೬೯೧) - ಆವರಣ

ಸ್ಟೇಟಸ್ ಕತೆಗಳು (ಭಾಗ ೬೯೧) - ಆವರಣ
ಬರಹಗಾರರ ಬಳಗ
Sun, 08/13/2023 - 15:34

ಕೋರ್ಟಿನ ಹೊರಗಡೆ ಸರದಿಗಾಗಿ ಅವರಿಬ್ಬರೂ ಕಾಯುತ್ತಿದ್ದಾರೆ. ಇಬ್ಬರು ಅಲ್ಲಿಗೆ ಹಲವು ಬಾರಿ ಬಂದಿದ್ದಾರೆ. ಬಂದಾಗ ವಾದ ವಿವಾದಗಳಾಗಿದ್ದಾವೆ, ಉತ್ತರಗಳು ಸಿಕ್ಕಿದ್ದಾವೆ. ಅವರಿಬ್ಬರಿಗೆ ಒಬ್ಬರನ್ನೊಬ್ಬರು ತೊರೆದು ಹೋಗಬೇಕಂತೆ. ಅವರಿಷ್ಟದ ಪ್ರಕಾರ ಬದುಕಬೇಕಂತೆ, ದಿನ ತಿಂಗಳು ವರ್ಷಗಳಾದರೂ ಇನ್ನೂ ಅರ್ಥ ಮಾಡಿಕೊಂಡಿಲ್ಲ ಅವರಿಬ್ಬರೂ. ಇಬ್ಬರ ಮನಸ್ಸಿನೊಳಗೂ ಒಂದೊಂದು ಕಥೆಗಳನ್ನ ತುಂಬಿಸಿಕೊಂಡಿದ್ದಾರೆ. ಅವಳ ಮನಸಿನೊಳಗೆ ಅವಳೇ ಕಟ್ಟಿಕೊಂಡ ಗೋಪುರದ ಕನಸುಗಳು, ಅವನ ಮನಸ್ಸಿನೊಳಗೆ ಹರಡಿಕೊಂಡಿರುವ ಮೈದಾನದಂತ ಕನಸುಗಳು. ಊರವರ ಬಾಯಲ್ಲಿ ಸೇರಿದವರ ಸಮ್ಮುಖದಲ್ಲಿ ಸಾವಿರದ...

Source: Sampada
Read More
ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...

ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...
ಬರಹಗಾರರ ಬಳಗ
Sun, 08/13/2023 - 15:32

ಅದು ಧುಮ್ಮುಕ್ಕಿ ಹರಿಯುತ್ತಿರುವ ಜಲರಾಶಿ. ರಭಸವಾಗಿ ನುಗ್ಗುತ್ತಿರುವ ಶುಭ್ರ ನೀರು. ಆಳದ ಅರಿವಿಲ್ಲ. ಎತ್ತರ ಅಳೆದಿಲ್ಲ. ಬಂಡೆಗಳಿಗೆ ಅಪ್ಪಳಿಸುವ ಭೋರ್ಗರೆಯುವ ನೀರಿನಲ್ಲಿ ಅದ್ಭುತವಾದ ಆಕರ್ಷಣೆ. ಅಕ್ಕ ಪಕ್ಕ ಎತ್ತರವಾದ ಕರಿಬಂಡೆಗಳು. ಅಪ್ಪಿ ತಪ್ಪಿ ವಸ್ತುವೊಂದು ಕೈ ಜಾರಿ ಬಿದ್ದು ಬಿಟ್ಟರೆ ಮತ್ತೆ ಕಾಣಲು ಅಸಾಧ್ಯವಾದ ಕಂದರ. ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದ ಕತೆಯಿದು. ದೂರದಿಂದ ನೋಡುಗರಿಗೆ ಇದೊಂದು ರಮಣೀಯ ತಾಣ.

ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ. ಭದ್ರಾವತಿಯ ಯುವಕ ಶರತ್ ಕುಮಾರ್. ಇಪ್ಪತ್ತಮೂರರ ಸದೃಢ...

Source: Sampada
Read More
ಮುಗುದೆ ಬಾಳಲಿ

ಮುಗುದೆ ಬಾಳಲಿ
ಬರಹಗಾರರ ಬಳಗ
Sun, 08/13/2023 - 15:23

ಮುಗುದೆ ಬಾಳಲಿ

ಬೆಳಕು ಕಾಣದೆ

ಬದುಕು ವ್ಯಸನವ ಕಂಡಿದೆ 

ಶಿಸ್ತು ಕಲಿಸುವ 

ತಂದೆ ತಾಯಿಯ

...
Source: Sampada
Read More
ಆತ್ಮ‌ಕಥೆಯ ಬಿಡಿ ಭಾಗಗಳು ಅನುಭವ ಆಗಲು ಏನು ಮಾಡಬೇಕು ?

 ಆತ್ಮ‌ಕಥೆಯ ಬಿಡಿ ಭಾಗಗಳು 

ಅನುಭವ ಆಗಲು ಏನು ಮಾಡಬೇಕು ?

ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..

ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..

ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು

ಈ ಅನುಭವವನ್ನು ಪಡೆಯುವುದು ಹೇಗೆ...

Source: ಭೂತಗಳ ಅದ್ಭುತ ಜಗತ್ತು
Read More
ಮಳಿ ಬರದ ಚಿತ್ರಗಳು..
೧
ಆಯೇ ಕುಛ್ ಅಬ್ರ ಕುಛ್ ಶರಾಬ್ ಆಯೆ
ಉಸ್ ಕೆ ಬಾದ್ ಬಸ್ ಅಜಾಬ್ ಆಯೆ..(ಪೈಜ್ ಅಹ್ಮದ್ ಫೈಜ್) ಅಬ್ ಕೆ ನಾ ಸಾವನ್ ಬರಸೆ..

ಅಬ್ ಕೆ ಬರಸ ತೋ ಬರಸೆಂಗಿ ಅಖಿಯಾಂ...(ಗುಲ್ಜಾರ್)

ಮಳಿ ಸೂಕ್ಷ್ಮ ಮನಸ್ಸಿನವರಿಗೆ ಹೆಂಗೆಲ್ಲ ಮಾಡಬಹುದು ಅಲ್ಲ..?ಅದೂ ಈ ಕವಿಜಾತಿಯವರ ಪಾಡು ಕೇಳೂದ ಬ್ಯಾಡ.
ಕಿಟಕಿ ಹೊರಗ ಮುಚ್ಚಿದ ಗ್ಲಾಸಿನೊಳಗಿಂದ ಹೊರಗ ಸುರಿಯು ಮಳಿ ಅದೆಷ್ಟು ಛಂದ ಕಾಣಸತಿರತದ..
ಹಂಗ ಟಪ್ ಟಪ್ ಬೀಳೂ ಹನಿ ಸಪ್ಪಳ ಕೇಳಕೋತ ಇಡೀ ರಾತ್ರಿ ಚಾದರ ಹೊತಕೊಂಡು ಕೂಡಬೇಕು ಅನಸತದ
ಕರೆಂಟು ಹೋಗಿ ಹಳೆ ಟ್ರಾನ್ಸಿಸ್ಟರ್ ದಾಗ ವಿವಿಧಭಾರತಿಯೊಳಗ ಮುಕೇಶನ ದರ್ದಭರಿ ಆವಾಜಿನ್ಯಾಗಿನ ಹಾಡು...
"ಸಾವನ್ ಕೆ ದಿನ್ ಆಯೆ ಬೀತಿ ಯಾದೆಂ ಲಾಯೇ ಕೌನ್ ಬಿಛಾಕರ್ ಆಂಖೆ ಮುಜಕೊ ಪಾಸ್ ಬಿಠಾಯೆ?...."
ಹೌದು...

Source: ದೇಸಾಯರ ಅಂಬೋಣ
Read More
ನಿರೋಪ.. ------------------------------

ನಿರೋಪ..
------------------------------
ಗ್ರೀಶ್ಮನೂ ಅರೆಬರೆ ಬಟ್ಟೆ ಧರಿಸಿ ಬೆದರಿ ನಿಂತಿಹ
ಉದುರಿದ ನಾಕೈದು ಹನಿಗಳನೇ ಮತ್ತೆ ಮತೆ ನೆಕ್ಕಿ ತೇಗುವ ಭುವಿ.
ಸುಡುವ ಹಾಸಿಗೆಯ ಮೇಲೆ ನಿದ್ದೆ ಬಾರದೆ
ಉರುಳಾಡಿ ಮಗ್ಗುಲಾದಾಗ ಮುಖಾಮುಖಿಯಗುತ್ತವೆ ಇವು.
ಹೌದು ಇವು ಹೀಗಿರಬೇಕು ಹೀಗೆ ಹೇಳಬೇಕು ಹೀಗೆಯೇ ಬದುಕಬೇಕು
ಎಂದು ನಾ ನಿರ್ದೇಶಿಸಿದ್ದೆ ಹಂಬಲಿಸಿದ್ದೆ ಇವುಗಳ ಪೋಷಣೆಗೆ.. ರಕ್ತ ಸುಟ್ಟುಕೊಂಡಿದ್ದೆ..
ಅವುಗಳನ್ನು ಅಲ್ಲಿಗಲ್ಲಿಗೆ ಬಿಟ್ಟು ಮುಂದೆಂದಾದರೂ ಮತ್ತೆ ಸಂಧಿಸುವ ಮೈ ನೇವರಿಸುವ
ಮಾತನಾಡಿ ನಾಜೂಕಿನಿಂದ ಅವುಗಳ ಬಂಧ ಬಿಡಿಸಿಕೊಂಡ ಭ್ರಮೆಯಿಂದ ಖುಶಿಯಾಗಿ
ಬೀಗುವಾಗ ಹೀಗೆ ಹಾಳುರತ್ರಿಗಳಲಿ ಇವು ಬರಬೇಕೆ?
ಸುಮ್ಮನಿರದೆ ತಿವಿದು ಎಬ್ಬಿ ಕಾಡುವ...

Source: ದೇಸಾಯರ ಅಂಬೋಣ
Read More
ದಂಡಿಮ್ಯಾಲ ನಿಂತು..
ಈ ಕತೆ ತುಶಾರದಿಂದ ತಿರಸ್ಕರಿಸಲ್ಪಟ್ಟಿತ್ತು. ಅಲ್ಲಿಯ ಸಂಪಾದಕರು ಈ ಕತೆ ತುಷಾರಕ್ಕೆ ಯೋಗ್ಯವಲ್ಲ ಎಂಬ ಫರಮಾನು ಕೊಟ್ಟಿದ್ದರು. ಪತ್ರಿಕೆಗೆ ಈ ಕತೆ ಯೋಗ್ಯ ಅಥವಾ ಅಯೋಗ್ಯ ಎಂದು ನಿರ್ಧರಿಸುವ ಮಾನದಂಡವೂ ಇರುತ್ತವೆ ಇದು ವಿಚಿತ್ರಸಂಗತಿ.ಮಂಗಳದವರು ಈ ಕತೆ ೨೧/.೦೧/೨೦೧೫ ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರಿಗೊಂದು ಸಲಾಮು. ಎಲ್ಲರೂ ಕತೆ ಓದಲಿ ಎಂಬ ಉದ್ದೇಶದಿಂದ ಕತೆಯನ್ನು ಬ್ಲಾಗಿಗೆ ಹಾಕಿರುವೆ ಓದಿ ಹೆಂಗನ್ನಿಸಿತು ತಿಳಸರಿ.
-------------------------------------------------------------------------------------------------

  ಬೆಳಿಗ್ಗೆ ಎದ್ದಾಗ ಆಗಲೇ ಎಂಟು ಹೊಡದಿತ್ತು.ರಂಜನಾಳನ್ನು ಎಬ್ಬಿಸಿಕೊಂಡು ಹೊರಬಂದೆ.ಗಿರೀಶ ಆಗಲೇ ಆಫೀಸಿಗೆ ಹೊರಡುವುದರಲ್ಲಿದ್ದ.ಅವನ ಹೆಂಡತಿ ಶುಭದಾ ಕೊಟ್ಟ ಚಹಾ ಕುಡಿಯುತ್ತ...

Source: ದೇಸಾಯರ ಅಂಬೋಣ
Read More
ಸುಮ್ಮನ ನೆನಪು....೨
ಮೊದಲಿನ ಭಾಗದಲ್ಲಿ ಬರದಂಗ ಹೇಮಂತ್ ಅನ್ನುವ ಹೆಸರು ಹೊಸಾ ಸಾಧ್ಯತೆ ತೆರೆದಿತ್ತು. ನನ್ನೆಲ್ಲ ಈ ಸಾಹಸಗಳನ್ನು
ಗೆಳೆಯ ವಿವೇಕ್ ಶಿಂಧೆ ಜೊತೆ ಹಂಚಿಕೊಳ್ಳುತ್ತಿದ್ದೆ. ಅವ ಪ್ರೋತ್ಸಾಹ ಕೊಡತಿದ್ದ. ರಂಜಿತಾ ಅನ್ನೋ ಬಂಗಾಲಿ ಹುಡುಗಿದು
ಪತ್ರ ಬಂದಿತ್ತು. ವಿವೇಕ್ ಶಿಂಧೆ ಗ ಏರ್ಫೋರ್ಸ ನೌಕರಿ ಸಿಕ್ಕಿತ್ತು. "ಬಂಗಾಲಿ ಹುಡುಗ್ಯಾರು ಭಾಳ ಛಂದಿರತಾರಲೆ.." ಅಂತ
ಅವ ಆಸೆಗಳಿಗೆ ಗೊಬ್ಬರ ಹಾಕಿದ. ಫೋಟೋಗಳ ವಿನಿಮಯನೂ ಆದುವು..ಅವು ಕಲರ್ ಫೋಟೋಗಳಲ್ಲ ..ಬ್ಲಾಕ್ ವೈಟ್ ದಾಗ ಹುಡುಗಿಯರ ಚೆಹರೆ ಛಂದ ಕಾಣಸತಿತ್ತು.ಮನಸ್ಸಿನ್ಯಾಗ ಮಂಡಿಗಿ ತಿಂತಿದ್ದೆ ಜೋರಾಗಿ ಪತ್ರಹೋಗೂದು ಬರೂದು ಇತ್ತು.

ಹುಡುಗರ ಗೆಳೆತನನೂ ಲಭಿಸಿತು. ತಾಳಿಕೋಟಿಯ ಮುಜಾವರ್ ,ಗದಗದ ಮಕಾಂದಾರ್ ಇತ್ಯಾದಿ. ಮಕಾಂದಾರ್ ಹೊಸಾ
ಕವಿಗಳ ಸಂಕಲನ ತರುವ...

Source: ದೇಸಾಯರ ಅಂಬೋಣ
Read More
ಸುಮ್ಮನ ನೆನಪು...೧





ಈ ಫೇಸಬುಕ್, ವಾಟ್ಸಅಪ್ ಯುಗ ಇನ್ನೂ ಶುರು ಆಗಿರಲಿಲ್ಲದಾಗ "ಪತ್ರಮಿತ್ರ" ಅನ್ನುವ
ಪ್ರಕಾರ ಇತ್ತು. ಕನ್ನಡದಾಗ ಮಂಗಳ, ಉತ್ಥಾನ ಹಂಗ ಇಂಗ್ಲೀಶಿನ್ಯಾಗ 'ಸ್ಪೋರ್ಟವೀಕ್' ಮತ್ತು ಇನ್ನೂ
ಕೆಲವು ಪತ್ರಿಕೆಗಳು ಆಸಕ್ತರ ವಿಳಾಸ ಪ್ರಕಟಿಸಿ ಗೆಳೆತನ ಬೆಳೆಯಲು ಉಪಕಾರ ಮಾಡತಿದ್ವು. ನಂದು
ಕಾಲೇಜು...

Source: ದೇಸಾಯರ ಅಂಬೋಣ
Read More
ಈ ಹೊತ್ತಿಗೆ ಕಥಾ ಕಮ್ಮಟ--೨೦೧೪

 ಹಿಂದೆ ಕುಪ್ಪಳಿಯಲಿ ಎರಡು-ಮೂರುದಿನ ಕಥಾ ಕಮ್ಮಟದಲ್ಲಿ ಭಾಗವಹಿಸಿದ್ದೆ. ಸ್ವಲ್ಪ ಕಹಿಯೇ ಅನ್ನಬಹುದಾದ ಅನುಭವ
ಅದರದು. ಶ್ರೀಮತಿ ಜಯಲಕ್ಷ್ಮಿ ಪಾಟಿಲ್ ಅವರ ಮುಂದಾಳತ್ವದ "ಈ ಹೊತ್ತಿಗೆ" ಇದು ಪ್ರತಿತಿಂಗಳು ಒಂದು ಕಡೆ ಸೇರಿ ನಿರ್ಧಾರವಾದ ಕತೆ/ಕಾದಂಬರಿ ಬಗ್ಗೆ ಚರ್ಚಿಸುತ್ತಾರೆ.ಒಂದು ಸಲ ಮಾತ್ರ ನಾನು ಇದರಲ್ಲಿ ಭಾಗಿಯಗಿದ್ದು. ಆ ಗುಂಪಿನ...

Source: ದೇಸಾಯರ ಅಂಬೋಣ
Read More
ನೆನಪುಗಳು ಕಾಡುತ್ತವೆ...
ನೆನಪುಗಳು ಕಾಡುತ್ತವೆ
ಒಮ್ಮೊಮ್ಮೆ ನಿರಂತರ ಸುರಿಯುವ ಮಳೆಯಂತೆ
ಇನ್ನೊಮ್ಮೆ ಒಂದು ಕ್ಷಣದ ಸ್ಪರ್ಶದಂತೆ
ಕಳೆದುಕೊಂಡದ್ದನ್ನು ಮರೆತು ಬಿಡು ಎನ್ನುವ ಹ್ರದಯವೂ...
Source: ಅಲೆ - ಮರಳು
Read More
ಚೌಕಟ್ಟಿನಾಚೆ
ಪ್ರಸ್ತುತ ಈ ಕತೆಗೆ ಶ್ರೀ ವಿದ್ಯಾದರ್ ಕನ್ನಡ ಪ್ರತಿಷ್ಠಾನ, ಮುಂಬೈ ದವರು ಏರ್ಪಡಿಸಿದ ಕಥಾಸ್ಫರ್ಧೆಯಲ್ಲಿ ಮೂರನೇ ಬಹುಮಾನ ಬಂದಿತ್ತು. ಕತೆ ಓದಿ ನಿಮ್ಮ ಅನಿಸಿಕೆ ಅಭಿಪ್ರಾಯ ಜರೂರು ತಿಳಿಸಿ. -------------------------------------------------------------------

“ಆರ್‍ ಯು ಕಂಫರ್ಟೆಬಲ್ ಇನ್ ಬೆಡ್” ಅವನ ಪ್ರಶ್ನೆ ಅನಿತಾಗೆ ಮೊದಲು ಅರ್ಥವಾಗಲೇ ಇಲ್ಲ. ನಿಧಾನವಾಗಿ ವಾಸ್ತವಕ್ಕೆ ಬಂದಳು. ಉತ್ಸಾಹ, ಆತಂಕ ಎಲ್ಲ ಮಾಯವಾಗಿ ಎದುರಿನ ಅವನನ್ನು ನಿರುಕಿಸಿದಳು ಹಾಗೆಯೇ ಅರಿವಿಗೆ ಬಂದಿದ್ದು... ತನ್ನ ಗಂಡ ಎಂದೂ ಈ ಪ್ರಶ್ನೆ ಕೇಳಿರಲೇ ಇಲ್ಲ ಅಂತ. ಪ್ರಶ್ನೆಗೆ ಏನು ಉತ್ತರಿಸುವುದು ಎಂಬ ಗೊಂದಲವಿತ್ತು. ಇವಳ ದ್ವಂದ್ವ ಅರಿತವನಂತೆ ಆತ ಮುಂದುವರೆಯಲಿಲ್ಲ. ನಿಧಾನವಾಗಿ ಬೀರ್ ಹೀರಲು ಸುರು ಇಟ್ಟ.
“ನಿಜ ಹೇಳೂದಾದ್ರೆ ಇದೆಲ್ಲ...

Source: ದೇಸಾಯರ ಅಂಬೋಣ
Read More
ಮೌನವನ್ನು ಕೇಳು
ಮೌನವನ್ನು ಕೇಳು
ನಮ್ಮ ನಡುವೆ ಮಡುಗಟ್ಟಿರುವ ಮೌನದ ಸದ್ದನ್ನು ಕೇಳು
ಕೇಳಬಹುದು ನಿನಗೆ
ನನ್ನ ಮನಸ್ಸಿನೊಳಗೆ ಹರಿದಾಡುವ ಮಾತುಗಳು
ನಿನ್ನೊಳಗೆ ನೆಲೆಯನ್ನು ಕಂಡು ಹಿಡಿಯಲೆತ್ನಿಸುವ
ವ್ಯರ್ಥ ಪ್ರಯತ್ನದ ಏರುಸಿರು
ಕೇಳಬೇಕೆಂದಿದ್ದರೆ ಕೇಳುವುದು ನೋಡು
ನೆನಪುಗಳ ಅಗಣಿತ ಭರಾಟೆಯಲ್ಲಿ
ಬಿರುಕು ಬಿಡುತ್ತಿರುವ ಗಾಜಿನರಮನೆ
ಕುಸಿಯುತ್ತಿರುವ ಒಂಟಿ ಹೃದಯ
ನಿನ್ನ ಮಾತುಗಳೂ ನನಗೆ ಕೇಳದು
ಆದರೆ ನನಗೆ ಗೊತ್ತು
ನಿನ್ನ ಮಾತುಗಳು ಕಣ್ಣಂಚಿನಲ್ಲಿ ಹನಿಗೂಡಿ
ಹೊರದಾರಿಯನ್ನು ಕಂಡುಕೊಂಡು
ಸದ್ದೇ ಇಲ್ಲದೆ ಮರೆಯಾಗುತ್ತವೆ
ಎಂದೂ ಅಸ್ತಿತ್ವವನ್ನೇ ಪಡೆಯದಂತೆ!
Source: ಅಲೆ - ಮರಳು
Read More

Pages

  • 1
  • 2
  • 3
  • 4
  • next ›
  • last »

ಏನಿದು ಪ್ಲಾನೆಟ್ ಕನ್ನಡ?

ಸಂಪದ Sampada
ಇದು ಸಂಪದದ ಒಂದು ಯೋಜನೆ.

ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.

 

ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪ್ಲಾನೆಟ್ ಕನ್ನಡ ಒಂದು ಫೀಡ್ ಅಗ್ರಿಗೇಟರ್. ಹಾಗಂದರೇನು? ಕನ್ನಡದ ವೆಬ್ಸೈಟುಗಳ ಅರ್ ಎಸ್ ಎಸ್ (RSS - Really Simple Syndication) ಫೀಡ್ ಒಟ್ಟುಗೂಡಿಸಿ ನಿಮಗೆ ಒಂದೇ ಜಾಗದಲ್ಲಿ ಓದಲು ಸೌಲಭ್ಯ ಕಲ್ಪಿಸುವ ಯೋಜನೆ. ಗಮನಿಸಿ - ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

Planet Kannada is a Kannada feed aggregator which aggregates content from Kannada websites and Kannada blogs to present it for readers at one location. No content is owned by Planet Kannada. The copyright of the content rest with respective blogs or projects or websites. Note that the readers will be redirected to the respective websites on clicking on content aggregated here.

Add us up on Social media:

Google+

© ಆಯಾ ಬ್ಲಾಗ್ ಅಥವ ಯೋಜನೆಯದ್ದು. ಈ ವೆಬ್ಸೈಟಿನಲ್ಲಿ ಏನಾದರೂ ತೊಂದರೆ ಕಂಡುಬಂದಲ್ಲಿ ಅಥವ ಇದರಲ್ಲಿ ಪಟ್ಟಿಯಾಗಿರುವ ಬ್ಲಾಗ್ ಅಥವ ವೆಬ್ಸೈಟುಗಳು ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಲ್ಲಿ ಅದನ್ನು ನಿರ್ವಾಹಕರ ಗಮನಕ್ಕೆ ತನ್ನಿ.

© Copyright rest with respective websites and projects. Please report plagiarism or abuse.

Technology provided and supported by: Saaranga