ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಓ ನನ್ನ ಚೇತನಾ...

Syndicate content
ಅಲೆಮಾರಿಯ ಹಾಡು
URL: http://chetanachaitanya.wordpress.com
Updated: 2 min 12 sec ago

ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…

11 hours 13 min ago

ಚಂದಿರ  * ಚಂದಿರ

ನಾನು ಗಂಡಾಗಿ ಹುಟ್ಟಿದ್ದರ ಅಹಂಕಾರ ನನಗೆ ಖಂಡಿತ ಇತ್ತು. ಹಾಗಂತ ಹೆಣ್ಣುಮಕ್ಕಳಿಲ್ಲದ ನಮ್ಮ ಮನೆಯಲ್ಲಿ ನಾನೇ ಮಗನೂ ಮಗಳೂ ಆಗಿದ್ದೆ. ರಂಗೋಲಿ ಹಾಕೋದು, ಅಮ್ಮ ಮನೆ ಕ್ಲೀನು ಮಾಡುವಾಗ ಸಹಾಯಕ್ಕೆ ನಿಲ್ಲೋದು, ಅವಳ ಪೂಜೆ ಪುನಸ್ಕಾರಗಳಿಗೆ ಅಣಿ ಮಾಡ್ಕೊಡೋದು…
ನನಗದೆಷ್ಟು ದೇವರನಾಮಗಳು ಬಾಯಿಗೆ ಬರ್ತಿದ್ದವೆಂದರೆ, ನಮ್ಮ ಮನೆಗೆ ಬಂದುಹೋಗುವ ಆಂಟಿಯರೆಲ್ಲ “ಈ ಹುಡ್ಗನ್ನ ನೋಡಾದ್ರೂ ಕಲ್ತುಕೊಳ್ಳಿ” ಅಂತ ತಮ್ಮ ಹೆಣ್ಣುಮಕ್ಕಳ ಮೂತಿ ತಿವೀತಿದ್ದರು!
ಇದರ ಜೊತೆಗೆ ಓದಿನಲ್ಲಿ, ಆಟದಲ್ಲಿ ಎಲ್ಲಾದರಲ್ಲೂ ಮುಂದು. ನಮ್ಮಪ್ಪ ಅಮ್ಮನಿಗೆ ನಾನಂದರೆ ವಿಪರೀತ ಹೆಮ್ಮೆ.

ಆದರೆ, ನನ್ನ ಕಾಲೇಜಿನ ದಿನಗಳು ಮುಗಿದವು ನೋಡಿ… ಆಗ ಶುರುವಾಯ್ತು ಅಸಲಿ ಜೀವನ. ಡಿಗ್ರಿ ಮುಗಿಸಿದ ನಾನು ಕ್ಲಾಸಿಫೈಡುಗಳಲ್ಲಿ ಮುಳುಗಿಹೋದೆ. ಗುರುತು ಮಾಡಿಟ್ಟುಕೊಂಡ ವಿಳಾಸಗಳನ್ನ ಹುಡುಕಿಕೊಂಡು ಅಲೆದೆ. ಆದರೇನು? ನಾನು ಇಂಟರ್ವ್ಯೂಗೆ ಹಾಜರಾಗುವ ಹೊತ್ತಿಗೆ ‘ಕೆಲಸ ಖಾಲಿ ಇಲ್ಲ’ ಬೋರ್ಡು ನೇತಾಡತೊಡಗುತ್ತಿತ್ತು. ರಿಸೆಪ್ಷನ್ ಕೆಲಸ, ಟೆಲಿ ಮಾರ್ಕೆಟಿಂಗು, ಡಿಟಿಪಿ… ಊಹೂಂ! “ಅವೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ” ಅಂದುಬಿಡ್ತಿದ್ದರು. ಯಾಕೆ? ಟೆಲಿ ಮಾರ್ಕೆಟಿಂಗಲ್ಲೂ ನಾವು ಬೇಡ್ವಾ? ಅಂದ್ರೆ, ಕಾಲ್ ರಿಸೀವ್ ಮಾಡಿದವರಿಗೆ ಹೆಣ್ಣುದನಿ ಕೇಳಿದರೆ ಖುಷಿಯಾಗತ್ತೆ ಅನ್ನುವ ಉತ್ತರ!
ಇನ್ನು ಮಾಹಿತಿ, ದೂರು ವಿಭಾಗಗಳು? ಯಾರು ಉತ್ತರ ಕೊಟ್ಟರೇನು? ಸಮಸ್ಯೆ ಪರಿಹಾರವಾದ್ರೆ ಸಾಕಲ್ಲ? ಇಲ್ಲ…  ಹಾಗಲ್ವಂತೆ ಅದು. ಹೆಣ್ಣಿನ ದನಿ, ಕೇಳುಗರ ಕೋಪ ತಣಿಸುತ್ತಂತೆ. ಅದರಲ್ಲೊಂದು ಮಾದಕತೆ ಇರತ್ತಂತೆ!

ನಾನು ಅಲೆಯುತ್ತ ಅಲೆಯುತ್ತ ಕಾಲ ಕಳೆದಿದ್ದೊಂದೇ ಬಂತು. ಕೆಲಸ ಮಾತ್ರ ಸಿಗಲೇ ಇಲ್ಲ. ಈಗ ಅಪ್ಪನಿಗೂ ಅಸಹನೆ ಶುರುವಾಗಿತ್ತು. ಅರಿಶಿಣ ಕುಂಕುಮಕ್ಕೆ ಬರುವ ಅಂಟಿಯರು ‘ನಮ್ ಮಗ್ಳಿಗೆ ಬಿಪಿಓ ದಲ್ಲಿ ಕೆಲ್ಸ’ ಅಂದಾಗಲೆಲ್ಲ ಅಮ್ಮನ ಮುಖ ಸಣ್ಣಗಾಗ್ತಿತ್ತು. ನಾನು ಅಲ್ಲಿಗೆ ಮತ್ತೆ ಮತ್ತೆ  ಎಡತಾಕಿದ್ದು, ಅವರು ಹೆಣ್ಣುಗಳಿಗೆ ಮೊದಲ ಆದ್ಯತೆ ಅಂದಿದ್ದು, ಎಲ್ಲಾ ವಿವರಿಸಿ ಹೇಳಿದರೂ ಅವಳಿಗೆ ಅರ್ಥವಾಗಲೇ ಇಲ್ಲ.
ನಾನು ಮಾತ್ರ ಹತಾಶನಾಗದೆ ನನ್ನ ಹುಡುಕಾಟ ಮುಂದುವರಿಸಿದ್ದೆ.

ಈ ಬಾರಿ ಟೀವಿ ಕಛೇರಿಯೆದುರು ನಿಂತಿದ್ದೆ. ನನ್ನ ನಿರರ್ಗಳ ಮಾತು, ಶೈಲಿ, ಹಾಡುಗಾರಿಕೆಗಳು ನನಗೆ ಕೆಲಸ ಕೊಡಿಸಿಕೊಡಬಹುದೆಂಬ ಭರವಸೆ ಇತ್ತು. ಅಲ್ಲಿ ನಿರೂಪಣೆಗಾಗಿ ಸಂದರ್ಶನ ನಡೆಸಿದ್ದರು. ನಾನು ನೋದಲು ಚೆಂದವಿದ್ದೇನೆ ಅಂತಿದ್ರು ಎಲ್ಲರೂ.
ಸರಿ. ಸ್ಕ್ರೀನ್ ಟೆಸ್ಟ್ ಮುಗಿಯಿತು. ನಮ್ಮ ಮಂಜ ಮಾವ ಆ ಟೀವಿ ಚಾನೆಲ್ಲಿನ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಾರೆ. ಅವರೇ ಸ್ಟುಡಿಯೋಗೆಲ್ಲ ಕರೆದುಕೊಂಡುಹೋದರು.
ನಾನಂತೂ ಚೂರೂ ಭಯವಿಲ್ಲದೆ ಕ್ಯಾಮೆರಾದೆದುರು ನಿಂತೆ. ಡೈರೆಕ್ಟರು ಪೀಚು ಹುಡುಗ. “ನಾನು ಹೇಳಿದಾಗ ಮಾತಾಡು, ಸನ್ನೆ ಮಾಡಿದಾಗ ನಿಲ್ಲಿಸು” ಅಂದ.

ನಾನು ಶುರು ಹಚ್ಚಿಕೊಮ್ಡೆ. “ವೀಕ್ಷಕರೇ, ನಿಮಗೆಲ್ಲ ಮುಟ್ಟಿದರೆ ಮುನಿ ಕಾರ್ಯಕ್ರಮಕ್ಕೆ ಸ್ವಾಗತ. ನಾವಿವತ್ತು ನಾರಿ ಮುನಿದರೆ ಮಾರಿ ಅನ್ನೋ ಟಾಪಿಕ್ ಚರ್ಚಿಸೋಣ. ಯಾರ್ ಚೆನ್ನಾಗಿ ಒಲೀತಾರೋ, ಯಾರ್ ಚೆನ್ನಾಗಿ ಮುನೀತಾರೋ ಅವರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾಣ. ಬನ್ನಿ ಹಾಗಿದ್ರೆ, ಮೊದಲ ಕಾಲರ್ ಯಾರು ನೋಡೋಣ…”
ಅರಳುಹುರಿದಹಾಗೆ ಮಾತಾಡ್ತಾ ಸಾಗಿದೆ. ಡೈರೆಕ್ಟರು ‘ಕಟ್’ ಹೆಳೋದು ಮರೆತು ನಿಂತಿದ್ದ.
ವಿಶ್ವಾಸ ಬಂದಹಾಗಾಗಿ ‘ನಂಗೆ ಹಾಡ್ಲಿಕ್ಕೂ ಬರತ್ತೆ’ ಅಂದು ಹಾಡಿ ತೋರಿಸಿದೆ. ಲೈಟ್ ಬಾಯ್ ಗಳಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೈಕು ತೆಗೀಲಿಕ್ಕೆ ಬಂದ ಹುಡುಗ ಕೂದ ‘ಚೆನಾಗಿ ಮಾತಾಡಿದ್ರಿ ಸಾರ್’ ಅಂದ. ನಾನು ಕೆಲಸ ಸಿಕ್ಕೇ ಬಿಡ್ತು ಅಂತ ನಿರಾಳವಾದೆ.

ಸ್ಟುಡಿಯೋ ಹೊರಗೆ ಬರೋ ವೇಳೆಗೆ ಡೈರೆಕ್ಟರು ಮಾತಾಡ್ತಿದ್ದದ್ದು ಕೇಳಿಸ್ತು. ‘ಸಾರ್, ಇವ್ನು ಹುಡುಗಿಯಾಗಿದ್ದಿದ್ರೆ ಮಜಾನೇ ಬೇರೆ ಇರ್ತಿತ್ತು ಸಾರ್. ಸಖತ್ ಪ್ರೋಗ್ರಾಮ್ ಮಾಡಬಹುದಿತ್ತು!”
ನನ್ನ ತಲೆ ಮೇಲೆ ತಣ್ಣೀರು ಸುರಿದಹಾಗಾಯ್ತು.

ಹೊರಗೆ ಬರುವಾಗ ನೋಡಿದೆ. ಟೀವಿಯಲ್ಲಿ ತುಂಡುಲಂಗದ ಹುಡುಗಿ “ಬನ್ನಿ, ಹಿಂದಿನ ನೇರ ಪ್ರಸಾರದಲ್ಲಿ ನಾವು ನೀವು ಒಸ ಹಾಟ ಹಾಡೋಣ” ಅಂತಿದ್ಲು! ಅಸಹ್ಯವಾಯ್ತು.
“ಛೆ! ನಾನೂ ಹುಡ್ಗಿಯಾಗಿ ಹುಟ್ಬೇಕಿತ್ತು”
ಹಾಗಂತ ಮೊದಲ ಬಾರಿಗೆ ಅನ್ನಿಸ್ತು.

      
Categories: ಕನ್ನಡ ಪುಟಗಳು

’ಕೊಕನಕ್ಕಿ’ ಯ ಹೆಸರು ಹುಡುಕುತ್ತಾ…

Wed, 2008-10-01 11:47

ಪ್ರಾಮಾಣಿಕವಾಗಿ ಹೇಳ್ತೀನಿ, ನನಗೊಂದು ದುರ್ಬುದ್ಧಿ ಇದೆ. ಅದು ಬಹುತೇಕರಿಗೆ ಇರಬಹುದಾದ ಮೋಸ್ಟ್ ಕಾಮನ್ ದುರ್ಬುದ್ಧಿಯೂ ಹೌದು. ಅದೇನು ಅಂತ ಈ ಲೇಖನ ಓದುವಾಗ ನಿಮ್ಗೆ ಗೊತ್ತಾಗತ್ತೆ.

ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ನಾ, ಅಚಾನಕ್ಕಾಗಿ ಒಬ್ಬಳನ್ನ ನೋಡಿದೆ. ಅದೇ ಮುಖ, ಅದೇ ನಗು, ಅದೇ ಉದ್ದದ ಕಾಲು… ಕೊಕನಕ್ಕಿ!!
ಇನ್ನೇನು, ನಾನು ಕೂಗೋದೊಂದು ಬಾಕಿ!

ಹೀಗೆ ನಂಗೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಯಾರ್ಯಾರೋ ಊರವರು ಕಾಣ್ತಿರ್ತಾರೆ. ಕೆಲವರಿಗೆ ನನ್ನ ಗುರುತು ಸಿಕ್ಕು, ನನಗೆ ಅವರದು ಸಿಗದೆ (ಅದರಲ್ಲೂ ಯಾರೋ ದೂರದ ನೆಂಟರದ್ದು) , ‘ಗಾಯತ್ರಿಗೆ  ಜಂಭ ಬಂದ್ಬಿಟ್ಟಿದೆ ಕಣೇ ಶೈಲಾ’ ಅಂತ ಅಮ್ಮನ ಹತ್ರ ದೂರು ಒಯ್ದಿರ್ತಾರೆ. ಅಮ್ಮ ಅಂತೂ ಸಿಕ್ಕಿದ್ದೇ ಚಾನ್ಸು ಅಂತ ‘ಅಯ್ಯೋ! ಈ ಅಪ್ಪ ಮಗ್ಳಿಬ್ರೂ ಒಂದೇ ಜಾತಿ. ಮನುಷ್ಯ ಮಾತ್ರದವರ ಗುರುತು ಸಿಗೋಲ್ಲ ಅವ್ರಿಗೆ!!’ ಅಂದುಬಿಟ್ಟಿರ್ತಾಳೆ.

ಅದೇನೇ ಇರಲಿ. ಹೀಗೆ ಮೊನ್ನೆ ಕೊಕನಕಿಯನ್ನ ನಾನು ನೋಡಿದ್ದು ಮತ್ತಷ್ಟು ಹಳೆ ನೆನಪುಗಳ ಭಂಡಾರದ ಕೀಲಿ ತೆರೆದಂತೆ ಆಗಿತ್ತು. ಗೊಂಬೆ ಹಬ್ಬಕ್ಕೆ ಭಾರತ ಮಾತೆಯ ಪುಟ್ಟದೊಂದು ಗೊಂಬೆ ಹುಡುಕುತ್ತ ನಿಂತಿದ್ದೆ ನಾನು. ಅಗೋ, ಅಲ್ಲಿ, ತನ್ನ ಕಾಲಿನಷ್ಟೆತ್ತರದ ಮಗನನ್ನ ‘ಮಂಡೆ ಸಮ ಇಜ್ಜ?’ ಅಂತೇನೋ ಗದರುತ್ತ ಅವಳು ನಿಂತಿದ್ದಳು. ನೋಡಿದ್ದೇ ತಡ, ಗೊಂಬೆ ಹುಡುಕೋ ಪ್ರೋಗ್ರಾಮನ್ನ ಪೋಸ್ಟ್ ಪೋನ್ ಮಾಡಿ ಕಣ್ಣುಗಳನ್ನ ಅವಳ ಹಿಂದೆ ಅಟ್ಟಿಬಿಟ್ಟೆ, ಅವಳು ಆ ಬೀದಿಯ ಇಳಿಜಾರಿನಲ್ಲಿ ಕಳೆದುಹೋಗುವವರೆಗೂ.

ಅರೆ! ಅವಳ ಹೆಸರೇನು!? ಇದ್ದಕ್ಕಿದ್ದ ಹಾಗೆ ತಲೆ ಕೆರೆತ ಶುರುವಾಯ್ತು. ಅವಳು ನನಗೆ ಅಷ್ಟೇನೂ ಪರಿಚಿತಳಲ್ಲದ ನನ್ನ ಸೀನಿಯರ್ರು. ಒಂಥರಾ ಗಂಡುಗಂಡು ದನಿ ಮಾಡ್ಕೊಂಡು ರ್ಯಾಗಿಂಗ್ ಮಾಡ್ಕೊಂಡು ಓಡಾಡ್ತಿದ್ದ ಆ ಹುಡುಗಿಯನ್ನ  ನಾವು ಹಿಂದಿನಿಂದ ಕೊಕನಕಿ ಅಂತ ಆಡಿಕೊಳ್ತಿದ್ವಿ. ಅವಳ ಊದ್ದದ ಕೊಕ್ಕರೆ ಕಾಲು ಅವಳಿಗೆ ಆ ಹೆಸರಿಡುವಂತೆ ಮಾಡಿತ್ತು. ತುಳುವಿನ ಕೊಕನಕ್ಕಿ, ಕನ್ನಡದಲ್ಲಿ ಕೊಕ್ಕರೆ.

ನಮಗೆ ಆಗೆಲ್ಲಾ (ಈಗಲೂ!) ಅದೊಂದು ಮೋಜು. ಅಡ್ಡ ಹೆಸರುಗಳನ್ನಿಡೋದು. ಇದು ಪ್ರೈಮರಿ ದಿನಗಳಿಂದಲೂ ಅಂಟಿಕೊಂಡ ಗೀಳು ಬಿಡಿ.

ಮೊಟ್ಟ ಮೊದಲು ನಾನು, ನನ್ನ ತಮ್ಮ ಇದನ್ನ ಪ್ರಯೋಗ ಮಾಡಿದ್ದು ಲಾರಾ ಟೀಚರಿನ ಮೇಲೆ. ಅವರ ಬಗ್ಗೆ ಮಾತಾಡುವಾಗೆಲ್ಲಾ ‘ಕುಳ್ಳಿ ಟೀಚರ್’ ಅಂದು, ಅದನ್ನ ಕೇಳಿಸ್ಕೊಂಡ ಕ್ಲಾಸ್ ಮೇಟು ನಮ್ಮನ್ನ ಬ್ಲ್ಯಾಕ್ ಮೇಲ್ ಮಾಡುವವರೆಗೂ ಸಂಗತಿ ಗಂಭೀರವಾಗಿತ್ತು.
ಸೂಸನ್ ಮೇರಿ ಟೀಚರು ಉದ್ದಕ್ಕಿದ್ರು. (ತಮ್ಮ ಅವರನ್ನ ಸೊಸೆ ಮೇರಿ ಅಂತಿದ್ದ!). ಅವರನ್ನ ಅಮಿತಾಬ್ಬಚ್ಚನ್ ಅಂತ ಕರೀತಿದ್ವಿ. ಅಮ್ಮ ಪೆಟ್ಟು ಕೊಟ್ಟಿದ್ಳು. :(
ಆದರೆ ಹೀಗೆ ಟೀಚರ್ ಗಳಿಗೆ ಹೆಸರಿಡೋದು ಅತಿರೇಕಕ್ಕೆ ಹೋಗಿ ಅಮ್ಮ ಸಮಾ ಬಾರಿಸಿದ್ದು, ನಾವು ಮಾಸ್ಟರೊಬ್ಬರಿಗೆ ಚಾರ್ ಕೋಲ್ ಅಂತ ಹೆಸರಿಟ್ಟಾಗ. ಕರೀ ಕಪ್ಪಗಿದ್ದ ಸೈನ್ಸ್ ಮಾಸ್ತರು ಯಾವಾಗಲೂ ನೋಟ್ಸ್ ತೋರಿಸು ಅಂತಾರೆ ಅಂತ ನಮಗೆಲ್ಲ ಕೋಪ. ನನಗಾದರೋ, ನೋಟ್ಸ್ ಬರೆಯೋದಂದರೇನು ಅನ್ನೋದೇ ಗೊತ್ತಿರಲಿಲ್ಲ. ಸಾಲದ್ದಕ್ಕೆ, ಅವರು ಹೊಡೀತಿದ್ದರು ಕೂಡ.  ಕಿತಾಪತಿಗಳಿಲ್ಲ ಲೀಡರ್ ಆಗಿದ್ದ ನನ್ನನ್ನ ಮುಂದಿಟ್ಟುಕೊಂಡು ಸಭೆ ನಡೆಸಿದ ಗೆಳತಿಯರು, ನಾನು ಹೆಕ್ಕಿ ತೆಗೆದ ಚಾರ್‍ ಕೋಲ್ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರು.
ಹೀಗೇ ಒಬ್ಬ ಗೆಳತಿ ಮನೆಗೆ ಬಂದಾಗ ಚಾರ್ ಕೋಲಿನ ಸಂಗತಿ ಬಂದು, ಅಮ್ಮ ಕಿವಿಗೊಟ್ಟು ಕೇಳಿ ನನ್ನನ್ನ ಬಡಿದು, ಅವಳನ್ನ ಬಯ್ದು, ಅವರಮ್ಮನಿಗೂ ಚಾಡಿ ಹೇಳಿಬಿಟ್ಟಿದ್ದಳು! ಆಗ ನಾನು ಹೈಸ್ಕೂಲು.
ಸಂಜೆ ನನ್ನನ್ನ ತೊಡೆಮೇಲೆ ಕೂರಿಸ್ಕೊಂಡ ಅಮ್ಮ, ಗುರುಗಳಿಗೆ ಗೌರವ ಕೊಡಬೇಕು ಇತ್ಯಾದಿ ಪಾಠ ಹೇಳಿದ್ದಳು. ಅವತ್ತೇ ಕೊನೆ. ನಾನು ಟೀಚರ್ ಗಳಿಗೆ ಅಡ್ಡ ಹೆಸರಿಡೋದು ಬಿಟ್ಟುಬಿಟ್ಟೆ.

ಆದರೇನು? ಊರಲ್ಲಿ ಬೇರೆ ಜನರೂ ಇದಾರಲ್ಲ?
ಮೀನು ಇಲಾಖೆಯಲ್ಲಿ ಕೆಲಸ ಮಾಡುವ ಮಂಜುನಾಥರ ಹೆಂಡತಿ ನಮ್ಮ ಬಯಲ್ಲಿ ಮೀನ್ ಮಂಜಿಯಾಗಿದ್ದರು. (ಅವರು ನಮಗೆ ಪೇರಳೆ ಹಣ್ಣು ‘ಕದಿಯಲು’ ಬಿಡ್ತಿರಲಿಲ್ಲ :( ). ಗೊಬ್ಬರದ ಪರ್ಬುಗಳು ನಮ್ಮ ಹಾಳು ಬಾಯಲ್ಲಿ ‘ಸೆಗಣಿ ಪರ್ಬು’ ಆಗಿದ್ದರೆ, ವೆಂಕಟ ರಮಣ ದೇವಸ್ಥಾನದ ಭಟ್ಟರು ‘ಬಾಂಡ್ಲೆ ಭಟ್ಟರು’ ಆಗಿಬಿಟ್ಟಿದ್ದರು.

ಕೆಲವೊಮ್ಮೆ ಪುಸ್ತಕದ, ಟೀವಿಯ ಕ್ಯಾರೆಕ್ಟರುಗಳೂ ನಮ್ಮ ನಾಮಕರಣದ ಕಷ್ಟ ನೀಗಿಸಲು ಸಹಕರಿಸ್ತಿದ್ದವು. ಅದ್ಯಾಕೋ ಪಕಕ್ದ ಮನೆ ಪಾಂಡಣ್ಣನ್ನ ‘ಬಾಲು’ ಅಂತಲೂ, ಕೆಳಗಿನ ಬೀದಿಯ ಬೆನ್ನಿಯನ್ನ ‘ಬಗೀರಾ’ ಅಂತಲೂ, ಎಸ್ಟೇಟಿನ ಶರೀಫರನ್ನ ‘ಶೇರ್ ಖಾನ್’ ಅಂತಲೂ, ಪೀಚಲು ಹುಡುಗ ವಿನ್ನುವನ್ನ ‘ಮೋಗ್ಲಿ’ ಅಂತಲೂ ಕರೀತಿದ್ದೆವು. ಇವೆಲ್ಲ ಜಂಗಲ್ ಬುಕ್ಕಿನ ರೋಲುಗಳು ಅಂತ ಪ್ರತ್ಯೇಕ ಹೇಳಬೇಕಿಲ್ಲ ತಾನೆ?
ಕೀರಲು ದನಿಯ ರೇಣುಕೆಯನ್ನ ನಾನು ಈಗಲೂ ಪೀಂಚಲು ಅಂತಲೇ ಕರೆಯೋದು. ನಾನು ಹಾಗೆ ಹೇಳೋದನ್ನ ಕೇಳಿ ಕೇಳಿ ಉಳಿದವರೂ ಕಾರಣ ಗೊತ್ತಿಲ್ಲದೆ ಹಾಗೇ ಶುರುಹಚ್ಚಿಕೊಂಡು ಅವರೆಲ್ಲರ ಬಾಯಲ್ಲೂ ಪೀಂಚಲು ಅನ್ನೋ ಹೆಸರೇ ನಿಂತುಬಿಟ್ಟಿದೆ. ಪೀಂಚಲು, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಪಾತ್ರ.

ಆಗ - ನಾನು ಟೀಚರ್ ಗಳಿಗೆ ಹಾಗೆಲ್ಲ ಹೆಸರಿಟ್ಟು ಕರೆಯೋದನ್ನ ನಿಲ್ಲಿಸಿಬಿಟ್ಟೆ ಅಂತ ಹೇಳಿದ್ನಲ್ಲ? ಆದ್ರೆ ಕಾಲೇಜಿಗೆ ಬಂದ್ಮೇಲೆ ಸ್ವಲ್ಪ ತಪ್ಪಬೇಕಾದ ಪ್ರಸಂಗ ಬಂದುಬಿಡ್ತು. ನಮ್ಮ ಲೆಚ್ಚರರ್ ಒಬ್ರನ್ನ ಇಡೀ ಕಾಲೇಜಿಗೆ ಕಾಲೇಜೇ ‘ಪಾಂಡು’ ಅಂತ ಕರೀತಿತ್ತು. ನಾನೊಬ್ಬಳು ಅವರ ಸರಿ ಹೆಸರು ಹಿಡಿದು ಹೇಳಿದರೆ ಅವರಿಗೆ ಸುಲಭಕ್ಕೆ ತಲೆಗೆ ಹೋಗ್ತಿರಲಿಲ್ಲ. ಹೀಗಾಗಿ ನಾನೂ ಪಾಂಡು ಅನ್ನೋದನ್ನೇ ರೂಢಿಸ್ಕೊಂಡ್ ಬಿಟ್ಟಿದ್ದೆ.

ಮತ್ತೊಂದು ದಿನ, ನಾನು ವಿಪರೀತ ಹಸಿವಾಯ್ತು ಅಂತ ಇಂಗ್ಲಿಶ್ ಪೀರಿಯಡ್ ಬಂಕ್ ಮಾಡಿ ಕ್ಯಾಂಟೀನಿಗೆ ಹೋಗಿ ಕುಂತಿದ್ದೆ. ಅದನ್ನ ನಮ್ಮ ಲಚ್ಚರರ್ರು ನೋಡಿಬಿಟ್ಟರು. ಆಮೇಲೆ ನನಗಿಂತ ಒಂದೇ ವರ್ಷ ಸೀನಿಯರಾಗಿದ್ದ ನನ್ನಣ್ಣನ ಹತ್ರ ಹೇಳಿಬಿಟ್ಟರು. ಅವತ್ತಿಂದ ಅನಿವಾರ್ಯವಾಗಿ ನಾನು ಅವರನ್ನ ‘ಕಾರ್ಟೂನ್’ ಅಂತ ಕರೀಬೇಕಾಯ್ತು. (ಯಾಕೇಂದ್ರೆ ಅವ್ರು ಕಾರ್ಟೂನ್ ಬರೀತಿದ್ರು). ಆಮೇಲೆ ಅದು ನನ್ನ ಫ್ರೆಂಡ್ಸಿಗೂ ಇಷ್ಟವಾಗಿ, ಅವರೆಲ್ಲರೂ ಹಾಗೇ ಕರೆಯೋಕೆ ಶುರು ಮಾಡಿದ್ದು ಖಂಡಿತ ನನ್ನ ತಪ್ಪಲ್ಲ ಅಲ್ವಾ?

ಹೀಗೇ ನಾನು- ತಮ್ಮ ಸೇರಿ ಇಟ್ಟ ಹೆಸರುಗಳು, ಗೆಳತಿಯರೊಟ್ಟಿಗೆ ಇಟ್ಟ ಹೆಸರುಗಳು ಸಾಕಷ್ಟಿವೆ. ಜಿಡ್ಡು,  ಎಪ್ಡು, ಬೋರ್ ವೆಲ್, ಟಿನ್, ಮೊಳೆ, ಕಾಳು, ಡಬ್ಬ, ಕಾಂಗ್ರೆಸ್, ತುರುಚಿಗಿಡ, ತಬಲ, ಕೆಸ, ಮುಂಗೇರಿ ಲಾಲ್, ಫಟೀಚರ್, ಕ್ರೇಜಿ ಕರ್ನಲ್, ಡೆಡ್ಲಿ, ಕರ್ಮ ವೀರ (ಇದು- ಯಾವಾಗಲೂ ‘ಕರ್ಮ’ ಅಂತಿದ್ದ ನಮ್ಮ ಮಾವನಿಗೆ ಇಟ್ಟಿದ್ದಿದ್ದು!), ಜಲ್ಮೇಪಿ ದೊಡ್ಡಮ್ಮ, ಮೂತಿ ಮುರ್ಕಿ, ತುರೇಮಣೆ (ಸ್ಸಾರಿ…), ಗಾಂಧಿ, ಆಜಾದ್, ಬಿಳಿ ಜಿರಳೆ…. ಹೀಗೇ…

ಕೊನೆಯದಾಗಿ, ಅಣ್ಣನ ಸ್ನೇಹಿತ ಒಬ್ಬ ಇದ್ದ. ಅವನದು ಕೋಲು ಕೋಲು ಮೈ. ನಾನು ಅವಂಗೆ ಕೋಲ ಮಹರ್ಷಿ ಅಂತ ಹೆಸರಿಟ್ಟಿದ್ದೆ. ನಮ್ಮ ನಮ್ಮ ಮಾತಲ್ಲಿ ಮಹರ್ಷಿ ಕಳೆದು ಬರೀ ಕೋಲ ಉಳೀತು. ಕೋಲ ಅನ್ನುತ್ತ ಅನ್ನುತ್ತ ಅದಕ್ಕೆ ಕೋಕಾ ಸೇರಿ ‘ಅವನೆಲ್ಲಿ? ಕೋಕಾ ಕೋಲ?’ ಅನ್ನುವವರೆಗೆ ಬಂತು. ಕೊನೆಯಲ್ಲಿ ಕೋಲ ಹೋಗಿ ’ಕೋಕ್ಸ್’ ಉಳೀತು. ಅವನ ಬಗ್ಗೆ ಮಾತಾಡುವಾಗ ನಾವಿವತ್ತು ‘ಕೋಕ್ಸ್’ ಅಂತಲೆ ಮತಾಡೋದು! ಮೊನ್ನೆ ಇದಕ್ಕೆ ಕಾರಣ ಹುಡುಕುವಾಗಲೇ ನನಗೆ ನಾನಿಟ್ಟ ಮೂಲ ಹೆಸರು ಹೊಳೆದಿದ್ದು!
~
ಭಾರತ ಮಾತೆಯ ಶೋಧದಲ್ಲಿ ತೊಡಗಿರ್ವಾಗಲೇ ನನ್ನ ತಲೇಲಿ ಇವೆಲ್ಲ ಹಣಕಿ, ಒಬ್ಬೊಬ್ಬಳೆ ನಗಾಡಿಕೊಳ್ಳುವ ಹಾಗೆ ಮಾಡಿ ಓಡಿಹೋದವು.
ಅಷ್ಟಾದರೂ, ಅದಕ್ಕೆ ಕಾರಣಳಾದ ಕೊಕನಕಿಯ ನಿಜವಾದ ಹೆಸರು ನೆನಪಾಗಲಿಲ್ಲ.
ಒಂಥರಾ ಕಡಿತ ಶುರುವಾಯ್ತು! ತಮ್ಮನಿಗೆ ಕಾಲ್ ಮಾಡಿದೆ. ಪಾಪ ಅದ್ಯಾವ ವಯರನ್ನ ಹಲ್ಲಲ್ಲಿ ಕಚ್ಚಿಕೊಂಡು ಒದ್ದಾಡ್ತಿದ್ದನೋ, ಫೋನ್ ಕಟ್ ಮಾಡಿದ. ನಾನು ಮತ್ತೆ ಮಾಡಿದ. ರಿಸೀವ್ ಮಾಡಿದವನೇ, ‘ಏಣೇ ಅಷ್ಟ್ ಅರ್ಜೆಂಟು!?’ ಅಂತ ರೇಗಿದ.
ನಾನು ‘ಕೊಕನಕಿಯನ್ನ ನೋಡಿದೆ ಕಣೋ!’ ಅಂತ ಸಂಭ್ರಮಿಸಿದೆ. ಅಂವ ಎದುರಿಗಿದ್ದಿದ್ದರೆ ಕೊಂದೇಬಿಡ್ತಿದ್ದನೇನೋ? ‘ಆರತಿ ಎತ್ಬೇಕಿತ್ತು’ ಅಂತ ಬಯ್ದು ಫೋನ್ ಕಟ್ ಮಾಡಿದ.

ನಾನು ಉರ್ರ್ ಅಂದುಕೊಂಡು ಮನೆಗೆ ಹೋಗಿ ಓದುತ್ತ ಕುಳಿತಿದ್ದಾಗ ಅವನ ಫೋನು ಬಂತು.  “ಸಾರಿ, ಬ್ಯುಸಿ ಇದ್ದೆ”  ಅಂತ ಪಾಲಿಶ್ ಮಾಡಿಕೊಂಡೇ ಕೊಕನಕಿ ಬಗ್ಗೆ ವಿಚಾರಿಸಿದ. ಅವಳ ನಿಜ ಹೆಸರು ಏನು ಅಂತ ಐದು ನಿಮಿಷ ಯೋಚನೆ ಮಾಡಿ, ‘ಇವ್ಳನ್ನ ಬಿಡೋಕೆ ಊರಿಗ್ ಹೋಗ್ತೀನಲ್ಲ, ಪತ್ತೆ ಮಾಡ್ಕೊಂಡ್ ಬರ್ತೀನಿ ಬಿಡು’ ಅಂದು ಸಮಾಧಾನ ಮಾಡಿದ.

ಅಂದಹಾಗೆ, ಕೊಕನಕಿ ನನ್ನನ್ನ ಅಲ್ಲಿ ನೋಡಿದ್ದಳಾ?  ನೋಡಿ ಗುರುತು ಸಿಕ್ಕಿದ್ದಿದ್ದರೆ, ‘ಅರೆ! ಲಿಲ್ಲಿಪುಟ್!!’ ಅಂದ್ಕೊಂಡಿದ್ದಾಳು…
ಹೌದು… ನಂಗೊತ್ತು…
ಅವ್ರೆಲ್ಲಾ ಐದಡಿ ಸೊನ್ನೆ ಇಂಚಿನ ನನ್ನನ್ನ ‘ಲಿಲ್ಲಿಪುಟ್’  ಅಂತ ಕರೀತಿದ್ರು!

      
Categories: ಕನ್ನಡ ಪುಟಗಳು

ಇಲ್ಲೊಂದಷ್ಟು ಆರೋಪಗಳಿವೆ…

Mon, 2008-09-29 12:07

ನಾನು ನೆಟ್ ತೆಗೆಸಿ ನಾಲ್ಕು ತಿಂಗಳಾಗ್ತಾ ಬಂತು. ಅವತ್ತಿಂದ ರೆಗ್ಯುಲರ್ರಾಗಿ ಮೇಲ್ ಚೆಕ್ ಮಾಡಲು ಸಾಧ್ಯವೇ ಆಗ್ತಿಲ್ಲ. ಕೆಲಸ ಮಾಡೋದ್ ಬಿಟ್ಟು ಚಾಟ್ ಮಾಡ್ಕೊಂಡು ಕೂರ್ತಾರೆ ಅಂತಲೋ ಏನೋ ಆಫೀಸಲ್ಲೂ ಬ್ಲಾಕ್ ಮಾಡಿಬಿಟ್ಟಿದಾರೆ ನೋಡಿ! ಅದಕ್ಕೇ.
ಹಾಗೂ, ನೆನ್ನೆ ಸಂಜೆ ಸೈಬರ್ ನತ್ತ ಹೆಜ್ಜೆ ಹಾಕಿದೆ. ಆಮೇಲೆ ‘ಯಾಕಪ್ಪಾ ಬೇಕಿತ್ತು ಈ ಉಸಾಬರಿ’ ಅಂತ ಬೇಸರಪಟ್ಕೊಂಡು ಉಳಿದ ಸಮಯ ಹಾಳು ಮಾಡ್ಕೊಂಡೆ.
ಕಾರಣ, ಸ್ವಲ್ಪ ಗಂಭೀರವಾಗಿದೆ.

ಒಬ್ಬ ಪುಣ್ಯಾತ್ಮರು ಮೇಲ್ ಮಾಡಿದ್ದರು. (ಅವರನ್ನು ವೈಯಕ್ತಿಕವಾಗಿ ತರಾಟೆಗೆ ತೆಗೆದ್ಕೊಳ್ಳುವ ಉದ್ದೇಶ ನನ್ನದಲ್ಲ ಮತ್ತು ಅದರಿಂದ ಉಪಯೋಗವೂ ಇಲ್ಲವಾದ್ದರಿಂದ ಹೆಸರು, ಐಡಿಗಳನ್ನು ಇಲ್ಲಿ ನಮೂದಿಸುತ್ತಿಲ್ಲ). ಅವರದೊಂದಷ್ಟು ಆರೋಪ. ಅವರ ಪ್ರಕಾರ;
* ಭಾಮಿನಿ ಷಟ್ಪದಿ ಬರೆದ ನಾನು ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ (ಹತ್ತು-ಹನ್ನೆರಡು ದಿನಗಳ ಕೆಳಗೆ ನನ್ನ ಬ್ಲಾಗಲ್ಲಿ ಬರೆದಿದ್ದು) ಥರದ ಲೇಖನಗಳನ್ನು ಮತ್ತೆ ಮತ್ತೆ ಬರೀತಿರೋದು ನನ್ನ ಹಿಪಾಕ್ರಸಿಯನ್ನು ಸೂಚಿಸುತ್ತದೆ.
* ಪೌರಾಣಿಕ ಪಾತ್ರಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವ ನಾನು ಇಸ್ಕಾನ್ ನಲ್ಲಿ ಕೆಲಸ ಮಾಡ್ತಿರೋದು ನನಗೆ ಬದ್ಧತೆಯಿಲ್ಲ ಎಂಬುದನ್ನ ಸಾಬೀತುಪಡಿಸುತ್ತೆ.
* ಇಷ್ಟಕ್ಕೂ ನನಗೆ ಭಾಮಿನಿ ಷಟ್ಪದಿಗಾಗಿ ಅನಗತ್ಯ ಪ್ರಚಾರ ಸಿಕ್ಕಿದ್ದು, ಅದೊಂದು ನೀರಮೇಲಿನ ಗುಳ್ಳೆಯ ಥರದ ಜನಪ್ರಿಯತೆಯಷ್ಟೆ. ಬ್ಲಾಗಿಗೆ ಬರುವ ಕಮೆಂಟುಗಳೂ ಕೇವಲ ಗೆಳೆಯರ ಬಳಗದ್ದು ಮಾತ್ರ. ಅಷ್ಟಾದರೂ ನಾನು ಟಾಪ್ ಬ್ಲಾಗರ್ ಎಂದು ಬೀಗುತ್ತಿದ್ದೇನೆ!!
ಎಲ್ಲಕ್ಕಿಂತ ಮುಖ್ಯ ಆರೋಪ- * ನಾನು ಕೋಮುವಾದಿಗಳ ಪರ ಬರೆಯುತ್ತ ಬ್ಲಾಗ್ ಮಾಧ್ಯಮದ ಸ್ವಾಸ್ಥ್ಯ ಕದಡಲು ಪ್ರಯತ್ನಿಸುತ್ತಿದ್ದೇನೆ. ಗುಂಪುಗಾರಿಕೆ ಹುಟ್ಟುಹಾಕುತ್ತಿದ್ದೇನೆ.

ಇವನ್ನೆಲ್ಲ ನಿಮ್ಮ ಬಳಿ ಹೇಳ್ಕೊಳ್ಳುವ ಮುನ್ನ ಅದರ ಅಗತ್ಯ ಇದೆಯಾ, ಇದನ್ನೂ ವಿವಾದ ಹುಟ್ಟುಹಾಕುವ ಸ್ಟಂಟ್ ಎಂದುಬಿಟ್ಟರೆ ಏನು ಮಾಡೋದು? ಅಂತ ಯೋಚಿಸಿದೆ. ಆದರೆ ಇಲ್ಲಿ ಬ್ಲಾಗಿಂಗಿಗೆ ಸಂಬಂಧಪಟ್ಟ ಆರೋಪಗಳು ಇದ್ದುದರಿಂದ ನಿಮ್ಮ ಜತೆ ಒಂದು ಮಾತು ಹೇಳಿನೋಡುವಾ ಅನಿಸಿತು.

ಈ ಮೇಲಿನ ಆರೋಪಗಳಿಗೆ ಖಂಡಿತ ಉತ್ತರಗಳಿವೆ. ಆದರೆ ಅದನ್ನು ಕೊಡುತ್ತ ಕೂರುವುದು ಸಮಯ ಹಾಳುಮಾಡಿದಂತೆ ಅನಿಸ್ತಿದೆ. ಒಂದೊಮ್ಮೆ ನಿಮಗೆಲ್ಲರಿಗೂ ಅವು ನಿಜವೆನಿಸಿದಲ್ಲಿ, ದಯವಿಟ್ಟು ನಿಮ್ಮನಿಮ್ಮ ಬ್ಲಾಗ್ ರೋಲುಗಳಿಂದ ನನ್ನ ಲಿಂಕು ತೆಗೆದುಬಿಡಿ. ಯಾರೂ ಓದದೆ ರಿಜೆಕ್ಟ್ ಮಾಡಿಬಿಡಿ.

ಯಾಕೆಂದರೆ,
ಯಾರೇನೇ ಹೇಳಿದರೂ ಬರೆಯದೆ ಸುಮ್ಮನಿರುವುದು ನನ್ನಿಂದಾಗದ ಕೆಲಸ.

      
Categories: ಕನ್ನಡ ಪುಟಗಳು

ನಾಲ್ಕು ಮಾತು- ನಾಲ್ಕು ಮಂದಿಯ ಪ್ರತಿಕ್ರಿಯೆ

Sat, 2008-09-27 13:15

ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು.

ಚೇತನಾ,
ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ??
ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ.
ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ.
ಕೊಲೆ ಮಾಡಿದವರು ಕೂಡ ಒಳ್ಳೆಯ ಲಾಯರ್ ಸಹಾಯ ಪಡೆದರೆ ಹೊರಗೆ ಬರಬಹುದು .ಪಾಪ ಪಿಕ್ ಪಾಕೆಟ್ ಮಾಡಿದವನು ಸಾಯೋ ತನಕ (ಕೆಲವೊಂದು ಪ್ರಕರಣಗಳಲ್ಲಿ ಏನೂ ತಪ್ಪು ಮಾಡದವನು ಕೂಡಾ!) ಜೈಲಿನಲ್ಲಿ ಕೊಳೆಯಿತ್ತಿರುವ ಉದಾಹರಣೆಗಳೂ ಇವೆ .
ಮತಾಂತರ ಮಾಡೋರ ಮೇಲೆ ಮೊಕದ್ದಮೆ ಹಾಕಿದ್ರೆ ಅವರನ್ನು ಬಿಡಿಸಲು ಎಲ್ಲಿಂದ ಎಷ್ಟು ಡಾಲರ್ ಗಳು ಬರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು.

ನಾನೊಂದು ಮಾತು ಹೇಳ್ತೀನಿ ಬೇಜಾರು ಮಾಡ್ಕೋಬೇಡಿ .ನೀವು ಈ ಬಗ್ಗೆ ಎಷ್ಟೇ ಚರ್ಚೆ ಮಾಡಿದ್ರು ನಿಮ್ಮ ಧೋರಣೆಯನ್ನು ವಿರೋಧಿಸುವ ಬುದ್ಧಿಜೀವಿಗಳು ಸಿಕ್ಕೇ ಸಿಕ್ತಾರೆ.ಹಾಗೇ ಆ ಬುದ್ಧಿಜೀವಿಗಳೂ ಹಿಂದುಗಳು ಅನ್ನೋದೂ ನಮ್ಮೆಲ್ಲರ ಸೌಭಾಗ್ಯ.

ಮಂಗಳೂರಿನಲ್ಲಿ ಮತಾಂತರ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ರೂ ಆ ಹಲ್ಲೆಯನ್ನು ಕ್ರಿಶ್ಚಿಯನ್ ಸಮುದಾಯದ ಮೇಲೆ ಆದ ಹಲ್ಲೆ ಅಂತಲೇ ಬಿಂಬಿಸಲಾಗುತ್ತಿದೆ.You can not convince all the people all the time.

- ಸಂದೀಪ್ ಕಾಮತ್

 Chetana,

Very wise decision. It is high time, this issue was debated and discussed thread bare. Hope you get enough particiapation to make this debate a success.

>>ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್|| >>

This is what our culture tells us, but the other side do not believe in this and that is where the problem lies. They believe in the game of numbers and are interested to achieve the numbers by any and all means.

To me it looks very foolish when people argue about the supremacy of their belief system as opposed to another belief system.

Mayura.

ಚೇತನಾ,
-ನೀವು ಬರೆದ ಮೊದಲಿನ ಲೇಖನ ಓದಿದ ಮೇಲೆ ನನಗೆ ತುಂಬಾ ದಿನಗಳಿನ್ದ ಅನ್ನಿಸುತ್ತಿದ್ದನ್ನು ನನ್ನ blogನಲ್ಲಿ ಬರೆದಿದ್ದೇನೆ. ಸಮಯವಿದ್ದರೆ ನೋಡಿ.
-” ಜಾತಿ ಆಧಾರಿತ ಭಯೋತ್ಪಾದನೆ……….” ಬಗೆಗಿನ ಮಾಹಿತಿ ಪ್ರಕಟಿಸಿ. ನನಗೂ ತಿಳಿದುಕೊಳ್ಳುವ ಆಸೆಯಿದೆ.
sandeep,
“ಗಾಂಧೀಜಿಯ ರಾಮರಾಜ್ಯ,” ಅದು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆಯೂ ಅವರು ಹೇಳಿದ್ದಾರೆ. ಅದು ಕಲ್ಪನೆಯಲ್ಲ. ಸಮಯ ಸಿಕ್ಕಲ್ಲಿ ಗಾಂಧಿ ಅಜ್ಜನ ವಿಚಾರಗಳ ಬಗ್ಗೆ ಓದಿ, ಅಮೇಲೆ ಹೀಗೆಲ್ಲ ಹೇಳಿ. ( ನನ್ನ ಈ ಕಾಮೆನ್ಟ್ ವಿಷಯಾಂತರ ಮಾಡುತ್ತದೆ ಎಂದು ಗೊತ್ತಿದ್ದರು ಹೀಗೆ ಬರೆಯಬೇಕಾಯಿತು ( )

- ನೀಲಾಂಜಲ

ಅಕ್ಕಾ,
ಈ ಸಂಪೂರ್ಣ ಘಟನೆಯ ಬಗೆಗಿನ ನನ್ನ ಗ್ರಹಿಕೆಗಳು ಇವು.
‘ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಮಾಡುತ್ತಿರುವ ಮುಸ್ಲಿಂ ಉಗ್ರಗಾಮಿಗಳು ಹಾಗೂ ಅವರ ಕೃತ್ಯಕ್ಕೆ ನೆರವನ್ನು, ಬೆಂಬಲವನ್ನೂ ನೀಡುವ ನಮ್ಮ ದೇಶದ ‘ಕೆಲವು’ ಮುಸ್ಲೀಮರ ಕೃತ್ಯದಿಂದ ಇಡೀ ಸಮುದಾಯವನ್ನು ನಿಂದನೆಗೆ ಒಳ ಮಾಡುವುದು ತಪ್ಪು. ಇದರಿಂದ ಸಾಮಾನ್ಯ ಮುಸಲ್ಮಾನರು ಹಾಗೂ ಮತಾಂಧತೆಯ ಸೋಂಕು ಇಲ್ಲದವರೂ ಸಹ ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಅವರೂ ಅನಿವಾರ್ಯವಾಗಿ ಭಯೋತ್ಪಾದನೆಯನ್ನು ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿಯೇ ಬಾಬ್ರಿ ಮಸೀದಿ ಕೆಡವಿದಾಗ, ಗುಜರಾಥದಲ್ಲಿ ಕೋಮು ದಳ್ಳುರಿ ಸಂಭವಿಸಿದಾಗ ಭಯೋತ್ಪಾದನೆ ಹೆಚ್ಚುತ್ತದೆ’ - ಇದು ‘ವಿಶ್ವಮಾನವ, ಬುದ್ಧಿಜೀವಿಗಳ’ ನೈಜ ಕಾಳಜಿಯ ವಾದ. ಇದನ್ನು ಒಪ್ಪಿಕೊಳ್ಳೋಣ, ಇದರಲ್ಲಿ ಆಕ್ಷೇಪ ಪಡಿಸುವಂತಹ ಸಂಗತಿಗಳ್ಯಾವುವೂ ಇಲ್ಲ.
ಈಗ ಇನ್ನೊಂದು ವರ್ಷನ್ ಗಮನಿಸೋಣ. ‘ಫ್ಯಾಸಿಸಂ ಅನ್ನು ಆರಾಧಿಸುವ, ರಕ್ತದೋಕುಳಿ ನಡೆಸಲು ಹೊಂಚು ಹಾಕುವ ಭಜರಂಗದಳ, ಶ್ರೀ ರಾಮ ಸೇನೆ, ವಿ.ಎಚ್.ಪಿ, ವಿಶ್ವ ಹಿಂದೂ ಪರಿಷತ್ತುಗಳು ಹಾಗೂ ದಲಿತರನ್ನು ದಮನಗೈಯ್ಯುವ **ಪುರೋಹಿತಶಾಹಿ** ಜನರು ದೇಶದ ಐಕ್ಯತೆಗೆ ಮಾರಕ. ದಲಿತರನ್ನು ಐದು ಸಾವಿರ ವರ್ಷಗಳಿಂದ ತುಳಿದವರು ಯಾರು ಎಂದು ಹೇಳಬೇಕಿಲ್ಲ. ಈಗ ದಲಿತರು, ಹಿಂದುಳಿದವರು ಮತಾಂತರಗೊಂಡರೆ ಅವರ ಸಾಮಾಜಿಕ ಸ್ಥಾನ ಮಾನ ವೃದ್ಧಿಸುತ್ತದೆ. ಕೆಲಸ ಸಿಕ್ಕುತ್ತದೆ… ಇದನ್ನೂ ವಿರೋಧಿಸುತ್ತಿರುವ ಜನರ ಕೊಳೆತ ಮನಸ್ಥಿತಿಯನ್ನು ಮತಾಂಧತೆ ಎನ್ನದೆ ಇದರಲಾಗದು. ಪ್ರಾರ್ಥನೆ ಮಾಡುವವರ ಮೇಲೆ ಆಕ್ರಮಣ ಮಾಡುವವರ ‘ಧರ್ಮ’ ಎಂಥದ್ದು?’ ಇದೂ ನಮ್ಮ ವಿಶ್ವಮಾನವರ ಹೇಳಿಕೆ.
ಮೊದಲ ಹೇಳಿಕೆಯಲ್ಲಿ ಕಾಣುವ ಕಾಳಜಿಗೂ ಎರಡಾನೆಯ ಹೇಳಿಕೆಯಲ್ಲಿ ಕಾಣುವ ಬೇಜವಾಬ್ದಾರಿಗೂ ಇರುವ ವ್ಯತ್ಯಾಸವನ್ನೇ ಡೈಕಾಟಮಿ ಅನ್ನುವುದು.
ಯಾರೋ ಕೆಲವು ಮಂದಿ ಧರ್ಮದ ಹೆಸರಿನಲ್ಲಿ ಸಂಘಟಿತರಾಗಿ ಮಾಡುವ ಕೆಲಸ ಅವರ ಅಪರಾಧ ಮಾತ್ರ ಅದು ಸಮುದಾಯವೊಂದರ ಅಪರಾಧವಲ್ಲ. ಹೀಗಂತ ಹೇಳುವ ಕಾಂಗ್ರೆಸ್ಸಿನ ಮುತ್ಸದ್ಧಿಗಳು ಹಿಂದೆ ಗೋಡ್ಸೆ ಎಂಬ ಅಡ್ಡನಾಮದ ವ್ಯಕ್ತಿ ಗಾಂಧಿಯನ್ನು ಕೊಂದದ್ದಕ್ಕಾಗಿ ಆ ಸರ್ ನೇಮ್ ಇರುವವರನ್ನೆಲ್ಲಾ ಹಿಂಸಿಸಿದ್ದು, ಈಗಲೂ ಒಂದು ವರ್ಗದ ಜನರ ಬಗ್ಗೆ ಮಾತಾಡುವಾಗ ಗೋಡ್ಸೆ ವಂಶಸ್ಥರು ಎನ್ನುವುದು ಎಲ್ಲಿಯ ವಿಶ್ವಮಾನವತೆ? ಇನ್ನು ಸಿಖ್ ಮಾರಣ ಹೋಮವನ್ನು ಯಾರು ನಡೆಸಿದ್ದು? ಆಗೆಲ್ಲಾ ಯಾಕೆ ಲಾ ಅಂಡ್ ಆರ್ಡರ್ ಕೈಗೆತ್ತಿಕೊಳ್ಳಲಾಯ್ತು? ಹೀಗಿರುವಾಗ ಮತಾಂತರವನ್ನು ತಾತ್ವಿಕವಾಗಿ ವಿರೋಧಿಸುವ ಹಿಂದುಗಳೆಲ್ಲಾ ಕೋಮುವಾದಿಗಳಾಗುತ್ತಾರೆ, ಭಯೋತ್ಪಾದಕರನ್ನು ‘ಭಾಯಿ’ ಎಂದು ಒಪ್ಪಿಕೊಳ್ಳುವವರು ‘ಸಾಮಾನ್ಯ’ ಮುಸ್ಲೀಮರಾಗಿ ಉಳಿಯುತ್ತಾರೆ. ಯಾಕೆ ಹೀಗೆ? ‘ಆರ್ಡರ್’ ಸ್ಪೆಷಲಿಸ್ಟುಗಳಾದ ವಿಶ್ವಮಾನವರು ಉತ್ತರಿಸಬೇಕು.
ಹೌದು ನಮ್ಮ ಯು.ಆರ್.ಎ ಅವರು ಮೂರು ನಾಲ್ಕು ವೇದಿಕೆಗಳಲ್ಲಿ ಉಗ್ರವಾಗಿ ಗಲಭೆಯನ್ನು ವಿರೋಧಿಸಿದ್ದಾರೆ. ಸೆಕ್ಯುಲರಿಸಂನ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇವರ ವಾದವನ್ನು ಗಮನಿಸಿದರೆ , ಹಿಂದುಳಿದವರ, ದಲಿತರ ಏಳಿಗೆಗಾಗಿ ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಸವಲತ್ತುಗಳಾದರೂ ಏಕೆ ಬೇಕಿತ್ತು? ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಬುದ್ಧಿ ಇರಬೇಡವಾ? ಎಲ್ಲಾ ದಲಿತರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರು, ಸಾಮಾಜಿಕ ನ್ಯಾಯ ಸಿಕ್ಕದವರೆಲ್ಲಾ ಕ್ರೈಸ್ತ ಧರ್ಮಕ್ಕೆ ಹಾರಿಕೊಂಡು ಬಿಡಿ ಎಂದು ಸಂವಿಧಾನದಲ್ಲಿ ನಮೂದಿಸಿಬಿಡಬಹುದಿತ್ತು. ಎಲ್ಲರಿಗೂ ಮನ್ನಣೆ, ಉದ್ಯೋಗ ಸಿಕ್ಕುತ್ತದೆಯಲ್ಲವೇ ಇದರಿಂದ? ಕ್ರಿಸ್ತನ ಧರ್ಮದಲ್ಲಿ ಯಾರಿಗೂ ಕಷ್ಟಗಳೇ ಇರುವುದಿಲ್ಲ. ಅಲ್ಲಿ ಸಮಾನತೆ ಇರುತ್ತದೆ, ಶಾಂತಿ ಸೌಹಾರ್ದತೆ ಇರುತ್ತದೆ ಲಾ ಅಂಡ್ ಆರ್ಡರ್‌ಗಾಗಿ ಇಷ್ಟೆಲ್ಲಾ ನಮ್ಮ ವಿಶ್ವ ಮಾನವರು ಹಾಗೂ ಸರಕಾರ ತಲೆ ಕೆಡಿಸಿಕೊಳ್ಳುವ ಬದಲು ಇಡೀ ದೇಶವನ್ನೇ ಕ್ರಿಶ್ಚಿಯನ್ ದೇಶ ಎಂದು ಕರೆದುಬಿಟ್ಟರೆ ಸಾಕಲ್ಲವೇ? ಇಷ್ಟೆಲ್ಲಾ ಸಂಘರ್ಷಗಳಿಗೆ ಕಾರಣವಾದದ್ದು ಭಾರತ ಕ್ರೈಸ್ತ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಿದ್ದೇ ಎಂದು ಹೇಳಿ ಬಿಟ್ಟು ಸ್ವಾತಂತ್ರ್ಯ ಹೋರಾಟ ಮಾಡಿದವರೆಲ್ಲಾ ದುಷ್ಟರು ಎಂದು ಬಿಡಿ ಜ್ಞಾನಪೀಠಿಗಳೇ, ಆಗ ನಿಮ್ಮ ಸೆಕ್ಯುಲರಿಸಂ, ಬುದ್ಧಿಜೀವಿತ್ವ ಎಲ್ಲಕ್ಕೂ ಸಾರ್ಥಕ್ಯ ದಕ್ಕಿ ಅವು ನೇರವಾಗಿ ಸ್ವರ್ಗಕ್ಕೆ ಹೋಗುತ್ತವೆ…                  

supreeth

ಇವು ನನ್ನ ಮಾತುಗಳು…

ನೀಲಾಂಜಲ, ವಿಷಯಾಂತರವಾದರೂ ಪರವಾಗಿಲ್ಲ, ಉತ್ತಮ ವಿಷಯಗಳನ್ನು ಹಂಚಿಕೊಳ್ಳುವುದೇ ನನ್ನ ಇರಾದೆಯಾಗಿದೆ. ಆದ್ದರಿಂದ, ಹೇಳಲಡ್ಡಿಯಿಲ್ಲ. ಖಂಡಿತ ನಾನು ಈ ಬಗ್ಗೆ ಮತ್ತಷ್ಟು ಬರೆಯುವೆ.

ಸಂದೀಪ್,
ನಿಮಗೆ ಬಿಡುವಿದ್ದರೆ, ಆಸಕ್ತಿಯಿದ್ದರೆ ಹೇಳಿ, ಗಾಂಧೀಜಿ ಕುರಿತ ಪುಸ್ತಕಗಳೊಂದಷ್ಟನ್ನು ಪಟ್ಟಿ ಮಾಡಿಕೊಡುತ್ತೇನೆ. ದಯವಿಟ್ಟು ಓದಿ. ಗಾಂಧೀ ತತ್ತ್ವವನ್ನು ಗಂಭೀರವಾಗಿ ಅಧ್ಯಯನ ಮಾಡದೆ ಹೀಗೆಲ್ಲ ಹೇಳಬಾರದು ಅಲ್ವಾ? ಖಂಡಿತ ನಾನು ಕೂಡ ಸಂಪೂರ್ಣವಾಗಿ ತಿಳಿಯುವ ಮುನ್ನ ನಿಮ್ಮ ಹಾಗೇ ಯೋಚಿಸ್ತಿದ್ದೆ. ಗಾಂಧೀ ಚಿಂತನೆಗಳನ್ನ ತಪ್ಪಾಗಿ ಬಿಂಬಿಸ್ತ ಒಂದು ವಿಚಾರಕ್ಕೆ ಮಾತ್ರ ಸೀಮಿತಗೊಳಿಸ್ತಾ ನಮ್ಮ ಹಾದಿ ತಪ್ಪಿಸಿದ್ದು ನಮ್ಮ ದೇಶದ ಪ್ರಮುಖ ರಾಜಕೀಯ ಪಕ್ಷ ಮತ್ತು ಒಂದಷ್ಟು ಜನ ಅದರ ಕೃಪಾಪೋಷಿತ ಚರಿತ್ರಕಾರರು.
ಇನ್ನು ಕುವೆಂಪು… ಖಂಡಿತ ಅವರ ‘ವಿಶ್ವ ಮಾನವ ತತ್ತ್ವ’ ಸಾರ್ವಕಾಲಿಕ, ಆದರಣೀಯ. ಹೇಳಿಕೇಳಿ ಅವರು ನಮ್ಮ ಸ್ವಾಮಿ ವಿವೇಕಾನಂದರ ಶಿಷ್ಯರು. ರಾಮಕೃಷ್ಣಾಶ್ರಮದ ತತ್ತ್ವಗಳನ್ನ ಮೈಗೂಡಿಸಿಕೊಂಡವರು. ಅವರು ಹೇಳಿದ ವಿಶ್ವ ಮಾನವತ್ವವೇ ಹಿಂದೂ ಧರ್ಮದ ಬುನಾದಿಯಾಗಿದೆ. ಪುರೋಹಿತ ಷಾಹಿಯ ಸೋಗಲಾಡಿತನಗಳು, ಕಂದಾಚಾರಗಳನ್ನು ಅವರು ದ್ವೇಷಿಸಿದಷ್ಟೇ ತೀವ್ರವಾಗಿ ಮತಾಂತರ ಮತ್ತು ಕ್ರೈಸ್ತರ ಆಟಾಟೋಪವನ್ನೂ ಖಂಡಿಸುತ್ತಿದ್ದರು ಎನ್ನುವುದನ್ನು ಅವರ ಕೃತಿಗಳಲ್ಲಿ ಗ್ರಹಿಸಬಹುದು. ಮತಾಂತರವಾಗ ಹೊರಟಿದ್ದವನನ್ನು ತಡೆಯಲು, ಪಾದ್ರಿಯನ್ನು ಬೆದರಿಸಲು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು ’ ಪಾತ್ರಗಳ ಮೂಲಕ ಬಂದೂಕು ಹಿಡಿಸುತ್ತಾರೆ! (ಹೆದರಿಸಲು ಮಾತ್ರ).

ಸಂದೀಪ್, ನಿಮ್ಮ ಚಿಂತನೆಗಳು, ಭಾವನೆಗಳು ಗಟ್ಟಿಯಾಗಿವೆ. ಖುಷಿಯಾಯ್ತು. ಇನ್ನೊಂಚೂರು ಪ್ರಬುದ್ಧವಾಗಿಬಿಟ್ಟರೆ (ಹೀಗೆ ಹೇಳಬಾರದಿತ್ತೆನಿಸಿದರೆ ಸಾರಿ) ನೀವು ಸಮರ್ಥರಾಗಿಬಿಡುತ್ತೀರಿ!

ಮಯೂರ,
ನಿಜ. ತಾವಾಗಿಯೇ ಎತ್ತರದವರೆಂದು ಗುರುತಿಸಿಕೊಳ್ಳಲು ಸಾಧ್ಯವಾಗದವರು ಮತ್ತೊಬ್ಬರನ್ನು ಹೂತು ಅವರ ಗೋರಿಯ ಮೇಲೆ ನಿಂತು ‘ನನ್ನ ಎತ್ತರ ಅಳೆಯಿರಿ’ ಎನ್ನುತ್ತಾರೆ. ಇದು ಎಲ್ಲಾ ಕಾಲ/ ಕ್ಷೇತ್ರಕ್ಕೂ ಅಪ್ಲೇ ಆಗುತ್ತದೆ.

- ಚೇತನಾ

ಸುಪ್ರೀತ್ ಎತ್ತಿಕೊಟ್ಟ ಮಾತುಗಳು ಚರ್ಚೆಯ ಹರವನ್ನು ಮತ್ತಷ್ಟು ವಿಸ್ತಾರಗೊಳಿಸಿದೆ. ಥ್ಯಾಂಕ್ಸ್ ಟು ಸುಪ್ರೀ.
ನನ್ನ ಕೆಲವು ಮಾತುಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುವೆ.

* ಇವತ್ತು ವೀರಪ್ಪ ಮೊಯ್ಲಿ ಸ್ಟೇಟ್ ಮೆಂಟ್ ನೋಡಿದೆ. ಗೋಧ್ರಾ ಘಟನೆ ಕುರಿತು ನಾನಾವತಿ ಆಯೋಗ ನೀಡಿದ ವರದಿಗೆ ಪ್ರತಿಕ್ರಿಯಿಸಿರುವ ಅವರು, ಬೇರೆ ದೇಶದಲ್ಲಾಗಿದ್ದರೆ ಮೋದಿಯನ್ನು ಗಲ್ಲಿಗೇರಿಸ್ತಿದ್ದರು ಎಂದು ಹೇಳಿದ್ದಾರೆ.ಗೋಧ್ರಾನಂತರದ ಘಟನೆಗಳು ಕರಸೇವಕರ ಸಜೀವ ದಹನದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿತ್ತು. ನಿಜ. ಈ ಸಂದರ್ಭದಲ್ಲಿ ಅನೇಕ ಕ್ರೂರ ಹಿಂಸೆಗಳು ಜರುಗಿದವು. ಅದು ಖಂಡನೀಯ. ಆದರೆ ಒಟ್ಟು ಘಟನೆಯನ್ನು ಗಮನಿಸದೆ ಒಟ್ಟಾರೆ ಹಿಂದೂವನ್ನು ಮಾತ್ರ ತಪ್ಪಿಸ್ಥನ ಜಾಗದಲ್ಲಿ ನಿಲ್ಲಿಸೋದನ್ನ ನಾನು ಖಂಡಿಸ್ತೇನೆ.
ಒಂದು ಸಂಗತಿ ನಾವು ಗಮನಿಸಬೇಕು. ಇಲ್ಲಿ ಸಾಮೂಹಿಕ ಪ್ರಚೋದನೆಗೆ ಸಾಮೂಹಿಕ ಪ್ರತಿಕ್ರಿಯೆ ನಡೆದಿತ್ತು. ಆದರೆ,
ಇಂದಿರಾ ಹತ್ಯೆಯಾದಾಗ ಕಾಂಗ್ರೆಸಿಗರು ಇಡಿಯ ಸಿಖ್ ಸಮುದಾಯದ ಮೇಲೆ ಮುಗಿಬಿದ್ದರಲ್ಲ, ಅತೀವ ಪ್ರಮಾಣದ ಜೀವ ಹನಿಯಾದವಲ್ಲ, ಆಗ ಯಾಕೆ ರಾಜೀವ್ ರನ್ನು (ಆಗ ಅವರೇ ತಾನೇ ಪ್ರಧಾನಿಯಾಗಿದ್ದು?) ಯಾರೂ ಪ್ರಶ್ನಿಸಲಿಲ್ಲ? ಯಾಕೆ ಅವರನ್ನು ಗಲ್ಲಿಗೇರಿಸುವ ಉತ್ಸಾಹ ಯಾರಿಗೂ ಮೂಡಲಿಲ್ಲ?
ತಮ್ಮ ಇತಿಹಾಸ ಮರೆತು ಮಾತಾಡೋದು ಇದೆಲ್ಲಿಯ ಜಾಣತನ!?

ಕರ್ನಾಟಕದಲ್ಲಿ ಮತಾಂತರ ನಡೆಯುತ್ತಿದ್ದ ಜಾಗಗಳಲ್ಲಿ ಗಲಭೆಯಾಗಿದ್ದಕ್ಕೆ ಅಮೆರಿಕದ ಕ್ರೈಸ್ತರು ನಮ್ಮ ಪ್ರಧಾನಿಯೆದುರು ಜಾಥಾ ನಡೆಸಿ ಪ್ರತಿಭಟನೆ ತೋರಿಸ್ತಾರೆ… ಹಿಂದೂಗಳು- ಸಾವಿರಾರು ವರ್ಷಗಳ ಮಾತು ಬಿಡಿ, ಸ್ವಾತಂತ್ರ್ಯಾನಂತರದ ಅರವತ್ತು ವರ್ಷಗಳಿಂದಲೂ ಹಿಂಸೆ ಅನುಭವಿಸ್ತಲೇ ಬಂದಿದ್ದಾರೆ, ಯಾಕೆ ಯಾರ ಸಹಾನುಭೂತಿ, ಬೆಂಬಲ, ಭರವಸೆಗಳು ಸಿಕ್ಕೋಲ್ಲ? ಪಕ್ಷನಿಷ್ಟ ಹಿಂದೂಗಳು ಹೇಗಿದ್ದರೂ ಮತ ಹಾಕ್ತಾರೆ, ಮುಸ್ಲಿಂ/ ಕ್ರೈಸ್ತರ ಮತಗಳು ಕಳೆದುಹೋಗುತ್ತದೆಂದು ಭಯವೇ? ಚಿಂತಕರೆನಿಸಿಕೊಂದವರಿಗೆ ತಾವೆಲ್ಲಿ ‘ಗೊಡ್ಡು ಆಚಾರದವರು’ ಎನಿಸಿಕೊಂಡುಬಿಡುವೆವೋ ಎಂಬ ಚಿಂತೆಯೇ?

* ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅಸಮಾನತೆ ತೊಲಗುತ್ತದೆಯೆಂದಾದರೆ, ‘ದಲಿತ ಕ್ರೈಸ್ತರು’ ಯಾಕಿದ್ದಾರೆ? ‘ಶಾಂತಿ- ಪ್ರೀತಿಯನ್ನು ಬೋಧಿಸುವ ಧರ್ಮದ ಮೇಲೆ ದಾಳಿ ಖಂಡನೀಯ’ ಅನ್ನುತ್ತಿದ್ದಾರಲ್ಲ, ಶತಶತಮಾನಗಳಿಂದ ಇವರು ಮತಾಂತರ ನಡೆಸಲಿಕ್ಕಾಗಿ, ಲೂಟಿ ಹೊಡೆಯಲಿಕ್ಕಾಗಿ ಏಸುದೇವನ ಹೆಸರನ್ನು ದುರುಪಯೋಗಪಡಿಸ್ಕೊಳ್ತಿರೋದನ್ನು ಒಪ್ಪಬೇಕೇನು?
ಇದೇನೂ ಹಳೆಯ ಕಥೆಯಲ್ಲ, ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಭಯೋತ್ಪಾದನೆ ಯಾವ ಮಟ್ಟಕ್ಕೆ ಹೋಗಿದೆ, ಅದರ ಕುಮ್ಮಕ್ಕು ಯಾರದು ಎಂಬುದು ಗೊತ್ತಿಲ್ಲವೇ?

ಹ್ಹ! ನಾಲ್ಕು ಪುಂಡರು ಕಲ್ಲು ಹೊಡೆದ ಮಾತ್ರಕ್ಕೆ ರಾತ್ರೋರಾತ್ರಿ ಹಿಂದೂಗಳು ಭಯೋತ್ಪಾದಕರಾಗಿಹೋದರಲ್ಲವೆ?

* ಮೊನ್ನೆ ಹಿಂದೂ ಸಂತರ ತಂಡ ಮಾತುಕಥೆ ನಡೆಸಿ ‘ಮತ್ತೆ ಚರ್ಚುಗಳ ಮೇಲೆ ದಾಳಿಯದರೆ ಇಪ್ಪತ್ತ ನಾಲ್ಕು ಗಂಟೆ ಉಪವಾಸ ಕುಳಿತು ಪ್ರತಿಭಟಿಸುವೆವು’ ಎಂದು ಹೇಳಿಕೆ ಕೊಟ್ಟಿತು.
ಇಷ್ಟು ಮಾತ್ರದ ಸಹಾನುಭೂತಿ ನಮಗೆ ಯಾವಾಗ ಸಿಕ್ಕಿದೆ ಹೇಳಿ? ಯಾವ ಧರ್ಮಗುರುಗಳು ನಮ್ಮ ಮೇಲೆ ದಾಳಿಯಾದಾಗ ಇಂಥದೊಂದು ಹೇಳಿಕೆ ಕೊಟ್ಟಿದ್ದಾರೆ?

ಇಲ್ಲಿ, ಧರ್ಮ- ಧರ್ಮಗಳ ನಡುವೆ ಕಿಚ್ಚು ಹಚ್ಚುವುದು, ಕೆಸರೆರೆಚಾಟ ನಡೆಸೋದು ನನ್ನ ಉದ್ದೇಶವಲ್ಲ. ಈಗಾಗಲೇ ನೆಲೆ ಕಳೆದುಕೊಂಡು ಅನಾಥನಾಗುತ್ತಿರುವ ಹಿಂದೂವನ್ನು ಸುಖಾಸುಮ್ಮನೆ ದೂಷಿಸೋದನ್ನ ಸಹಿಸಿಕೊಂದ ಸುಮ್ಮನಿರಲಾಗೋದಿಲ್ಲ ಅಷ್ಟೇ.

- ವಂದೇ,

ಚೇತನಾ ತೀರ್ಥಹಳ್ಳಿ

      
Categories: ಕನ್ನಡ ಪುಟಗಳು

ಒಂದು ಕಥೆ, ನಾಲ್ಕು ಮಾತು…

Fri, 2008-09-26 15:24

ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು.  ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.  

ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು ಬೀರುವುದು ಮೊದಲಾದ ಉಪಟಳ ನೀಡತೊಡಗಿದರು. ಇದು ಎಷ್ಟು ಹೆಚ್ಚಾಯ್ತೆಂದರೆ, ಸರ್ಪ ಸದಾ ಹುತ್ತದೊಳಗೆ ಅಡಗಿ  ಕೂರುವ ಸ್ಥಿತಿ ಬಂತು. ಇದರಿಂದಾಗಿ ಅದಕ್ಕೆ ಆಹಾರ ಒದಗುವುದು ದುಸ್ತರವಾಗತೊಡಗಿತು. ಬಲಹೀನನಾದ ಸರ್ಪ ಹುತ್ತದೊಳಗೆ ಕುಳಿತಿದ್ದರೆ, ಹುಡುಗರು ಹುತ್ತದ ಬಾಯಿಗೆ ಮರಳು ಸುರಿದು, ಮತ್ತಷ್ಟು ಹಿಂಸೆ ಕೊಟ್ಟರು. ಇವೆಲ್ಲವನ್ನೂ ಸಹಿಸಿಕೊಳ್ಳುತ್ತ ಅದು ದಿನೇ ದಿನೇ ಸೊರಗತೊಡಗಿತು.

ಭೂಲೋಕ ಸಂಚಾರ ಮಾಡುತ್ತಿದ್ದ ನಾರದರು, ತಮ್ಮ ಸರ್ಪಶಿಷ್ಯನನ್ನು ಹುಡುಕಿಕೊಂಡು ಬಂದರು. ಹುತ್ತದಲ್ಲಿ ಎರೆಹುಳುವಿನಂತೆ ವಿಲಿಗುಟ್ಟುತ್ತ ಬಿದ್ದಿದ್ದ ಅದನ್ನು ಕಂಡು ಕನಿಕರಪಟ್ಟರು. ಅದರ ದುರವಸ್ಥೆಗೆ ಕಾರಣ ವಿಚಾರಿಸಿದರು. ಆಗ ಸರ್ಪ, ತನ್ನ ಸಾಧುತ್ತ್ವವೇ ಇಂಥಹ ಪರಿಸ್ಥಿತಿ ಒದಗಿಸಿತು ಎಂದು ಹೇಳಿತು.

 ಅದಕ್ಕುತ್ತರವಾಗಿ ನಾರದರು,

“ಹಿಂಸೆಯನ್ನು ಬಿಡುವುದೆಂದರೆ ಸ್ವರಕ್ಷಣೆಯನ್ನು ಕೈ ಬಿಡುವುದಲ್ಲ. ನೀನು ಕಚ್ಚುವುದನ್ನು ಬಿಡುವುದು ಸರಿಯೇ, ಆದರೆ ಹೆಡೆಬಿಚ್ಚಿ ಭುಸುಗುಟ್ಟುವುದನ್ನು ಬಿಡಬೇಡ. ಆಗ ಈ ಹುಡುಗರು ನಿನ್ನನ್ನು ನೋಡಿ ಭಯಪಡುತ್ತಾರೆ. ನಿನಗೆ ತೊಂದರೆ ಕೊಡುವುದಿಲ್ಲ” ಎಂದು ಉಪದೇಶಿಸಿ, ಹರಸಿ ಹೊರಟುಹೋದರು.
~

ಈ ಕಥೆ ಹೇಳಲು ಇದು ಸಕಾಲ ಅನಿಸಿತು. ತಡೆಯಲಾಗಲಿಲ್ಲ. ಅದಕ್ಕೇ, ನಿಮಗೆಲ್ಲ ಗೊತ್ತಿರಬಹುದಾದರೂ ಹೇಳಬೇಕಾಯಿತು. ಯಾವುದೇ ಕಥೆಯಾಗಲಿ, ಅದು ಕೆಲವು ಸಂದರ್ಭಗಳಲ್ಲಿ ವಿಶೇಷ ಬಲ ಪಡೆದುಬಿಡುತ್ತದೆ ಅಲ್ಲವೆ?

‘ವಿಶ್ವ ಮಾನವ’ರು ನನ್ನ ‘ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ’ ಲೇಖನಕ್ಕೆ ಪ್ರತಿಕ್ರಿಯೆ ಬರೆದು ಒಂದೆರಡು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರ ಏನು ಅಂತ ಕೊಡೋದು?  ಜಾತಿ ಆಧಾರಿತ ಭಯೋತ್ಪಾದನೆ ನಮ್ಮ ದೇಶದಲ್ಲಿ ಎಲ್ಲೆಲ್ಲಿ ನಡೀತಿದೆ, ಯಾರಿಂದ ನಡೀತಿದೆ, ಯಾಕಾಗಿ ನಡೀತಿದೆ ಅಂತ ಚರ್ಚಿಸೋಕೆ ಇದು ಸಕಾಲವಲ್ಲವೆ? ನಿಮಗೆ ಆಸಕ್ತಿ ಇದೆಯೇ? ನಿಮಗೆಲ್ಲ ಪುರುಸೊತ್ತಿದ್ದರೆ ನಾನಂತೂ ತಯಾರಾಗಿರುವೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ಮಾಡಿರುವುದರಿಂದ ಬಲವಾದ ದಾಖಲೆಗಳ ಸಹಿತ ಮಾಹಿತಿ ನೀಡಬಲ್ಲೆ. ಬಿಡೀ. ಅದೇನೂ ದೊಡ್ಡ ಸಂಗತಿಯಲ್ಲ. ಜಗತ್ತು ಕೀ ಬೋರ್ಡಿನ ಮೇಲೆ ನಲಿದಾಡುವ ಈ ದಿನಗಳಲ್ಲಿ ಯಾರೂ ಕಷ್ಟ ಪಡಬೇಕಾಗಿಲ್ಲ.

ಆದರೂ, ಚರ್ಚಿಸಬೇಕನಿಸುತ್ತದೆ. ಯಾಕೆ ಹೀಗಾಗುತ್ತಿದೆ, ಯಾಕೆ ಧರ್ಮದ ಹೆಸರಲ್ಲಿ ದೇಶ ಹೊತ್ತುರಿಯುತ್ತದೆ ಎಂದೆಲ್ಲ ಮಾತಾಡಿಕೊಂಡು ಮುಂದಿನ ಪೀಳಿಗೆ ಇದರತ್ತ ತಲೆ ಹಾಕದ ಹಾಗೆ ಮಾಡಬೇಕನಿಸುತ್ತದೆ. ಕುಂತತ್ರ ರಾಜಕಾರಣಕ್ಕಾಗಿ ನಾವು- ಜನ ಸಾಮಾನ್ಯರೆಲ್ಲರೂ ದಂಡ ತೆರಬೇಕಾಗುತ್ತಲೇ ಇದ್ದರೂ ಇದಕ್ಕೊಂದು ಅಂತಿಮ ಪರಿಹಾರ ಸಿಗದಿರುವುದರ ಬಗ್ಗೆ, ಅದರ ಹಿಂದಿನ ಕಾರಣದ ಬಗ್ಗೆ ಚಿಂತಿಸಬೇಕೆನಿಸುತ್ತದೆ. ನನ್ನ ಓರಗೆಯ ನೀವೆಲ್ಲ ಈ ಬಗ್ಗೆ ಏನು ಯೋಚಿಸುತ್ತಿದ್ದೀರಿ? ಕೇಳಬೇಕೆನಿಸುತ್ತದೆ.

ಆದರೇನು ಮಾಡಲಿ? ಈ ಬಗ್ಗೆ ನಿಮ್ಮಲ್ಲಿ ಕೇಳಿದರೆ ನೀವೇನು ಹೇಳುವಿರೋ ಎಂದುಕೊಂಡು ಸುಮ್ಮನಿದ್ದೇನೆ.

ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್||  ಅಷ್ಟೇ.

      
Categories: ಕನ್ನಡ ಪುಟಗಳು

ಅಂವ, ‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!

Sat, 2008-09-20 12:54

ಇದೊಬ್ಬ ಗೆಳೆಯ ಬರೆದಿದ್ದು. ಇಂಥದ್ದು ಬಹಳ ಬರೆದಿದಾನೆ. ಅದೆಲ್ಲ ಗಂಡಸ್ರ ಗೋಳಂತೆ. ಹಾಗಂದಿದಾನೆ. ನಿಮಗೂ ನನ್ ಬ್ಲಾಗಲ್ಲಿ ಹೆಂಗಸರ ಸುಖದುಃಖ ಓದಿಯೋದಿ ಬೇಜಾರ್ ಬಂದಿರಬಹುದಲ್ವ? ಅದಕ್ಕೆ ಇದನ್ನ ಇಲ್ಲಿ ಹಾಕ್ತಿದೇನೆ. ಮುಂದೆಯೂ ರೆಗ್ಯುಲರ್ರಾಗಿ ಹಾಕುವ ಇರಾದೆ ಇದೆ. ಆಗಲಾದ್ರೂ ನೀವು ನಂಗೆ ಕೊಟ್ಟಿರುವ ‘ಬಿರುದು- ಬಾವಲಿ’ಗಳನ್ನ ವಾಪಸ್ ತೊಗೊಳ್ತೀರೇನೋ ಅನ್ನುವ ದೂರದ ಆಸೆ ನಂದು!

~

ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ.

ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… ಷರಟಿಂಗೂ ಇಲ್ಲ!!’ ಅಂದಿದ್ರು ಪ್ರೊಡ್ಯೂಸರ್ರು. ಅದಕ್ಕೇ, ಘಟ್ಟದ ಬೋರು ಬೋರು ರಸ್ತೇಲೂ ಡ್ರೈವರ್ ಮಹೇಶಂಗೆ ಸಾಥ್ ಕೊಡೋದಕ್ಕೆ ನಾನು ಗಂಟು ಬಿದ್ದಿದ್ದೆ.

ಮೊಬೈಲ್ ರಿಂಗಾಯ್ತು. ಸರಿಯಲ್ಲದ ಹೊತ್ನಲ್ಲಿ ಹೆಂಡ್ತಿ ಕರೆ ಮಾಡೋಲ್ಲ. ಎಲ್ರೂ ಮಲಗಿರೋ ಹೊತ್ತು, ಕರರಕರೆ ಮಾಡೋದು ಸೆಟ್ ಅಪ್ ಗಳೇ! ಮಹೇಶನತ್ತ ತಿರುಗಿದೆ. ಅವನ ಕಂಗಳಲ್ಲಿ ಮುಚ್ಚಿಡಲೆತ್ನಿಸುವ ಭಯಾನಕ ಅಸಹನೆ. ನೀವೆಣಿಸೋ ಅಂಥಾದ್ದೇನಿಲ್ಲ ಬಿಡಿ! ಅನ್ನುವ ಭಾವ. ಆಮೇಲೆ ಭಾಳ ಹೊತ್ತು ಗಾಡಿ ಓಡಿಸ್ಲಿಲ್ಲ. ಸ್ವಲ್ಪ ದೂರದಲ್ಲೇ ಕಾರಿಂದ ಇಳಿದು, ಬದಿಗೆ ಬಂದು ನಿಂತ. ಪಾಪಿ! ಸಿಗರೇಟೂ ಸೇದದವನು!! ನಾನೇ ಒಂದು ದಮ್ ಎಳೆದು, ಅವನ ನಗುವಿನ ಹಿಂದಿದ್ದ ಅಳುವನ್ನ ಕೆಣಕಿದೆ. ಮಹೇಶ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.

ಮನೆಗೆಲಸಕ್ಕೆ ಬರತಿದ್ದ ತಾಯಮ್ಮನ ಮುದ್ದಾದ ಮಗಳು ಚಂದ್ರಿಯ ಬಗ್ಗೆ ಹೇಳಿದ. ಅವಳೊಡನೆ ತಾನು ನೋಡಿದ ಒಂದೇ ಒಂದು ಸಿನೆಮಾ ಬಗ್ಗೆ ಹೇಳಿದ. ಕೊನೆಗೆ, ಅಮ್ಮ ಸಾಯುವಾಗ ಅಣ್ಣನ ಮಗಳನ್ನೇ ಮದುವೆಯಾಗೋದಾಗಿ ಮಾತು ತೊಗೊಂಡಿದ್ದು,  ಅಮ್ಮ ಹೇಳಿದಾಳೆ ಅಂತ ಹಳ್ಳಕ್ಕೆ ಬೀಳ್ಬೇಡ   ಅಂತ ತಮ್ಮ ಹೇಳಿದ್ದು, ಚಂದ್ರಿಯ ಕ್ಷಮೆ ಕೇಳಿ ಮಾವನ ಮಗಳಿಗೆ ತಾಳಿ ಕಟ್ಟಿದ್ದು, ಎಲ್ಲವನ್ನೂ ಹೇಳಿಕೊಂಡ.  ಅವತ್ತು ಚಂದ್ರಿಯ ಕಂಗಳು ನಿಗಿನಿಗಿ ಕೆಂಡವಾಗಿದ್ದನ್ನ ನೆನಸ್ಕೊಂಡ.

ಎಲ್ಲ ಸರಿ ಹೋಯ್ತಲ್ಲ? ಮತ್ಯಾಕ್ ನೋವು? ಅಂದಿದ್ದಕ್ಕೆ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ.

ಮೊದಲ ರಾತ್ರಿ ದಿವ್ಯ ರಾತ್ರಿ. ಆಸೆ- ಆಶೋತ್ತರಗಳ ಕಲಸುಮೇಲೋಗರ ಅದು. ಎಷ್ಟೋ ದಿನ ಅಮುಕಿಕೊಂಡಿದ್ದ ಕನಸು ಪೂರ್ಣವಾಗೋ ದಿನ. ಪೂರ್ ಮಹೇಶ! ಹಾಸಿಗೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತ ಕೂತ ಹೆಂಡತಿ…. ಮುಟ್ಟಿದರೆ ಚೀರುತಿದ್ದವಳು.  ಮಹೇಶ ಹೈರಾಣಾದ. ಮೊದಲ ರಾತ್ರಿ, ನೆಲದ ರಾತ್ರಿಯಾಯ್ತು. ಹಾಲು, ಸೇಬು, ಚೆಲ್ಲಾಪಿಲ್ಲಿಯಾದ ಹೂವಿನ ಹಾಸಿಗೆ, ಬೆಳಗಿನ ಜಾವದ ಮೈಮುರಿತ, ಎಲ್ಲವೂ ಕನಸಾಗಿಯೇ ಉಳಿಯಿತು.

ಅವನೂ ಕಾರಣ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ವಾಪಸು ಬರತಿದ್ದ. ‘ ನೀರು ಕಾಯಿಸ್ಲಾ? ಆಕೆ ಕೇಳ್ತಿದ್ದಳು. ಆಕಾಶ ನೋಡುತ್ತ ಹುಂ ಗುಟ್ಟುತ್ತಿದ್ದ.

ಊಟ? ಕೇಳಿದರೆ, ‘ಊಹೂಂ’ ಅಂತಿದ್ದ. ಎಣಿಸಿಟ್ಟರೆ ನಾಲ್ಕೇ ಮಾತು.

ಕಾರಿನ ಮಿರರಿನಲ್ಲಿ ಕೈಕೈ ಹಿಡಿದು ಪಿಸುಗುಟ್ಟುವ ಜೋಡಿಗಳು! ಕಂಡಾಗೆಲ್ಲ ಮಹೇಶನ ಜೀವ ಝಲ್ಲೆನ್ನುತ್ತಿತ್ತು. ತನ್ನ ರೋಮ ನಿಮಿರಿ ನಿಲ್ಲಿಸುವ ಅವಳಿಲ್ಲದೇ ಖಿನ್ನನಾಗುತ್ತಿದ್ದ. ಬರೀ ಪ್ರಶ್ನೆಗಳು. ನಿದ್ರೆಗೆ ಜಾರುವುದೊಂದೇ ಉತ್ತರವೆನಿಸಿತು.

ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ, ಅಸ್ಪಷ್ಟವಾಗಿ ಕೇಳ್ತಿತ್ತು. ಒಟ್ಟು ಮೂವತ್ತೆಂಟು ಮಾತ್ರೆಗಳು. ಬದುಕಿದ್ದೇ ಪುಣ್ಯ!

ಮನೇಲಿ ರಾದ್ಧಾಂತ. ನಾನು ಮೊದ್ಲೇ ಹೇಳಿರಲಿಲ್ವಾ? ಅಂದ ತಮ್ಮ.  ಅತ್ತೆ- ಮಾವ ಮಗಳಿಗೆ ಬುದ್ಧಿವಾದ ಹೇಳಿದರು.

ಇವಳನ್ನ ಮದುವೆಯಾಗಿ ನಾನು ಷಂಡನಾದೆ. ನಾಲ್ಕು ವರ್ಷವಾದ್ರೂ ಒಂದು ಮಗುವಿಲ್ಲ. ಎಲ್ರೂ ಛೇಡಿಸ್ತಿದ್ದಾರೆ ಅಂದ. ಅವಳು ಎದ್ದಳು. ಅಷ್ಟೇ ತಾನೆ? ಬಾ ಮಲಗ್ತೀನಿ. ಮಗು ಕೊಟ್ ಬಿಡು ಅಂದ್ಲು. ಯಾರಿಗೆಷ್ಟು ಅರ್ಥವಾಯ್ತೋ? ಸಮಸ್ಯೆ ತೀರ್ತು ಅಂತ ಚೆನ್ನಾಗಿ ಉಂಡು ಹೊರಟ್ರು.

ಅವತ್ತು ರಾತ್ರಿ… ಅದೇನು ಮೊದಲ ರಾತ್ರಿಯಲ್ಲ. ಅವನು ಮೊದಲೇ ಹಾಸಿಗೆ ಮೇಲೆ ಬಿದ್ದುಕೊಂಡ. ಅರ್ಧ ಮಂಚ ಆಕ್ರಮಿಸಿ. ಅವಳು, ಅವನ ಪಕ್ಕದಲ್ಲೇ ಬಿದ್ದುಕೊಂಡಳು. ಅವನಾಗಿಯೇ ಮುಟ್ಟಲಿಲ್ಲ. ಅವಳೇ ಕೆಣಕಿದಳು. ಮಗು ಬೇಕಂದ್ಯಲ್ಲಾ! ಕೊಡು ಬಾ!!

ಅದಕ್ಕೇ ಕಾಯ್ತಿದ್ದೋನಂತೆ, ಭೋರ್ಗರೆದ, ಬಸವಳಿದು ಬಿದ್ದ.

ನಾನು ಗಾಬರಿಯಾಗಿ ನಿಂತಿದ್ದೆ. ” ಸಾರ್… ಹೆಣವನ್ನೂ ಸಂಭೋಗಿಸಬಹುದು ಗೊತ್ತಾ? ” ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೆ. ” ನಾನು ಅವತ್ತು ಅದನ್ನೇ ಮಾಡಿದ್ದು.” ” ಯಾವ ಜನ್ಮದ ಪುಣ್ಯವೋ? ನನ್ನ ಶ್ರಮದ ಒಂದು ಕಣ ಅವಳ ಗರ್ಭ ಸೇರ್ತು. ನಾನೂ ಅಪ್ಪನಾದೆ! ಹೆರಿಗೆಯಾಗಿ ಈವತ್ತಿಗೆ ಹದಿನೈದು ದಿನ. ಏನಾದ್ರೂ ಬೇಕಿದ್ರೆ ಫೋನ್ ಮಾಡು ಕಳಿಸಿಕೊಡ್ತೀನಿ ಅಂದಿದ್ದೆ. ಒಣ ಜಂಭ ಬೇರೆ. ಯಾರೂ ಇಲ್ಲದ ಹೊತ್ನಲ್ಲಿ ಹೀಗೆ ಕಾಲ್ ಮಾಡ್ತಾಳೆ.”

“ಎಲ್ಲಾ ಚಂದ್ರಿಯ ಶಾಪ ಸಾರ್”.

ಸಿಗರೇಟು ಮುಗಿದು ತುಟಿ ಸುಟ್ಟಿತು. 

ಮದುವೆ ಆಗ್ಬೇಕು ಸಾರ್. ಆಗ ಒಳಗಿನ ದುಃಖ ಕರಗಿಹೋಗತ್ತೆ. ನಗದೇ ಬೇರೆ  ದಾರಿಯೇ ಇರೋಲ್ಲ! ಅಂದವನು ನಗು ನಗುತ್ತಲೇ ಗಾಡಿ ಹತ್ತಿದ. ನಾನೂ ಕೂಡಾ. ಆದ್ರೆ ಈಗ, ಮಲಗ್ಬೇಕಂದ್ರೂ ನಿದ್ದೆಯೇ ಬರಲಿಲ್ಲ. . . . .

- ಚಂದಿರ 

      
Categories: ಕನ್ನಡ ಪುಟಗಳು

ಮತೀಯ ದುರಂತಗಳ ಬಗ್ಗೆ - ನನ್ನದೊಂದು ಸತ್ತ ದನಿ

Fri, 2008-09-19 13:29

ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ.
ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ… ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ, ಚೆಂಡಿನಂತೆ…

ಇಷ್ಟಕ್ಕೂ ಧರ್ಮವನ್ನು ಮುಂದಿಟ್ಟುಕೊಂಡು ಜಗದಾದ್ಯಂತ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಎಷ್ಟೂಂತ ಬರೀಬಹುದು ಹೇಳಿ? ಓದಿಯೇ ಸಾಕಾಗಿಹೋಗಿದೆ. ಇವತ್ತು ಒಬ್ಬ ಸಾಮಾನ್ಯ ಹಿಂದೂ ಕೂಡ ಸಿಡಿಮಿಡಿಗುಟ್ಟುವ ಹಾಗಾಗಿರುವುದರ ಹಿಂದಿನ ಕಾರಣವನ್ನ ಯಾರಾದರೂ ಯೋಚಿಸಿದ್ದೀರಾ? ಖಂಡಿತ ಯೋಚಿಸಿಯೇ ಇರುತ್ತೀರಿ. ನಾನೂ ಯೋಚಿಸಿದ್ದೇನೆ. ಜಾತಿ ಗೀತಿಗಳ ತಂಟೆಗೇ ಹೋಗದ, ತೀರಾ ಅಮ್ಮ ಬಯ್ತಾಳೆ ಅಂತ ಊರಿಗೆ ಹೋಗುವಾಗ ಎರೆಡೆಳೆ ಜನಿವಾರ ಹಾಕ್ಕೊಳ್ಳುವ ತಮ್ಮ ಕೂಡ ‘ಬಡೀಬೇಕು ನನ್ ಮಕ್ಳಿಗೆ… ನಮ್ ಪಾಡಿಗೆ ನಮ್ಮನ್ನ ಇರೋಕೇ ಬಿಡಲ್ಲ ಅವ್ರು….” ಅಂದಾಗ ಹೌಹಾರಿಹೋಗಿದ್ದೆ.  ಕ್ರಿಸ್ ಮಸ್ಸಿಗೆ ಕೇಕು ತಂದು ಹಂಚುವ, ರಂಜಾನಿಗೆ ಶಾವಿಗೆ ಪಾಯಸ ಮಾಡುವ, ಕತ್ತೆ ನಿಂತರೂ ಕಾಂಗ್ರೆಸ್ಸಿಗೇ ಓಟು ಹಾಕುವ ಅಮ್ಮ ಕೂಡ ‘ಅತಿ ಆಯ್ತು ಕಣೇ ಇವ್ರದ್ದು, ಆ ಬೊಬ್ಬಿ ಹುಡುಗನ್ನ ಕೊಂದೇ ಬಿಟ್ರಲ್ಲ, ಅವ್ರ ಹುಡುಗೀನ ಲವ್ ಮಾಡ್ತಿದ್ದ ಅನ್ನೋ ಒಂದೇ ಕಾರಣಕ್ಕೆ… ಎಷ್ಟ್ ದಿನ ಸಹಿಸ್ಬೇಕೋ ಇವ್ರ ಕರ್ಮಾನ ನಾವಿನ್ನೂ! ಬೇರೆ ದೇಶ ಕೊಟ್ಟಾಗ ಬಾಯ್ಮುಚ್ಕೊಂಡ್ ತೊಲಗ್ ಬೇಕಿತ್ತು’ ಅನ್ನುತ್ತ ಅವಡುಗಚ್ಚಿದಳು.
ಬೇರೆ ಯಾರೋ ದೂರದವರನ್ನ ಎಳೆದು ತರೋದು ಬೇಡ ಅಂತಲೇ ನಾನು ನನ್ನ ಹತ್ತಿರದ ಉದಾಹರಣೆಗಳನ್ನ ಕೊಟ್ಟಿದೇನೆ. ಇಂತಹ ಹಲವಾರು ಜನರ ಒಳಗುದಿಯನ್ನು ನೋಡುತ್ತ ನೋಡುತ್ತ ಮಧ್ಯಮವರ್ಗದ ಹಿಂದೂ ಮಾನಸಿಕತೆಯನ್ನ ಅರಗಿಸ್ಕೊಳ್ಳುವ ಯತ್ನ ಮಾಡ್ತಿದೇನೆ.

ಈಶಾನ್ಯ ರಾಜ್ಯಗಳಲ್ಲಿ ಸ್ವಯಂಸೇವಾ ಕಾರ್ಯಕರ್ತರೊಂದಷ್ಟು ಜನ ಕೆಲಸ ಮಾಡ್ತಿದಾರೆ. ಸಾವರ್ಕರ್, ‘ಮತಾಂತರದಿಂದ ರಾಷ್ಟ್ರ್‍ಆಂತರವಾಗತ್ತೆ’ ಎಂದು ಮುನ್ನುಡಿದಿದ್ದು ಅಲ್ಲಿ ನಿಜವಾಗ್ತಿದೆ. ನಾಗಾಲ್ಯಾಂಡಿನಲ್ಲಿ ‘ಇಂಡಿಯನ್ ಡಾಗ್ಸ್ ನಾಟ್ ಅಲೋವ್ಡ್’ ಅಂತ ಬೋರ್ಡು ಹಾಕ್ಕೊಂಡಿದಾರೆ. ನಮ್ಮ ನಾಡು ಕ್ರಿಸ್ತನಿಗೆ ಸೇರಿದ್ದು ಅಂತಿದಾರೆ.
ನಮ್ಮ ಪರಿಚಿತರೊಬ್ಬರು ಅಲ್ಲಿ ಕೆಲಸ ಮಾಡಿ ವಾಪಸು ಬಂದರು. ಜೊತೆಗಿಬ್ಬರು ಹುಡುಗರನ್ನ ಕರೆತಂದರು. ಒಬ್ಬನ ಹೆಸರು ‘ಚಿ ಮುಂಗ್’ ಅಂತ ನೆನಪು. ಅವರನ್ನಿಲ್ಲಿ ಕಾಲೇಜಿಗೂ ಸೇರಿಸಿದರು. ಒಬ್ಬ ಹೇಗೋ ಅಡ್ಜಸ್ಟ್ ಆದ. ಮತ್ತೊಬ್ಬ ಮಾತ್ರ, ‘ನಾನು ವಾಪಸು ಹೋಗಿ ಮತಾಂತರವಾಗ್ತೇನೆ. ಇಲ್ಲಿ ಓದೋಲ್ಲ’ ಅಂತ ಹಟ ಹಿಡಿದ. ಕಾರಣ ಕೇಳಿದರೆ, ‘ಹಿಂದೂಗಳಲ್ಲಿ ಒಗ್ಗಟ್ಟಿಲ್ಲ, ಜಾತೀಯತೆ ಇದೆ, ಮೇಲು ಕೀಳಿದೆ, ಈ ಧರ್ಮದ ದೇವತೆಗಳೆಲ್ಲ ಕ್ರೂರಿಗಳು, ಲಂಪಟರು…’ ಇತ್ಯಾದಿ ಪಾಠ ಒಪ್ಪಿಸಿದ.
ಖಂಡಿತ ಅಂವ ಹಿಂದೂ ಶಾಸ್ತ್ರ ಗ್ರಂಥಗಳನ್ನ ಓದಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೈಬಲ್ ಪರಿಚಯವೇ ಅವನಿಗಿರಲಿಲ್ಲ ಅನ್ನೋದು ಸ್ಪಷ್ಟವಾಯ್ತು. ಇದನ್ನ ವಿವರವಾಗಿ ಹೇಳುವ ಅಗತ್ಯವಿಲ್ಲ ಅಲ್ಲವೆ?

ಮಾತೆತ್ತಿದರೆ ಭಜರಂಗಿಗಳು (ಸಮಜಾಯಿಷಿ- ಐ ಹೇಟ್ ದೆಮ್), ವಿಹಿಂಪ, ಸಂಘ ಪರಿವಾರವನ್ನು ದೂರುವ ಮಂದಿಗೆ ಒರಿಸ್ಸಾ ಘಟನೆ ಪಾಠ ಕಲಿಸಿರಬೇಕು(ಈ ಸಂದರ್ಭದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪವಿದೆ). ಅಲ್ಲಂತೂ ಸಂಘಿಗಳ ಗಂಧ ಗಾಳಿಯೂ ಇಲ್ಲ. ಅಲ್ಲಿ ಕ್ರೈಸ್ತರ ವಿರುದ್ಧ ಸೆಟೆದು ನಿಂತಿದ್ದು ಬುಡಕಟ್ಟು ಜನಂಗದ, ಗುಡ್ಡಗಾಡು ಪ್ರದೇಶದ ಜನ ಸಾಮಾನ್ಯರು! ಅವರ ಪಾಲಿಗೆ ಹಿಂದುತ್ವ ಒಂದು ಅಮಲಲ್ಲ. ಅದು ಶ್ರದ್ಧೆ, ನಂಬಿಕೆ.

ಅನಂತ ಮೂರ್ತಿಯವರ ಅರ್ಟಿಕಲ್ ಗಳನ್ನ ನೋಡಿದೆ. ಕೆಂಡಸಂಪಿಗೆಯಲ್ಲಿ, ಸಂಪದದಲ್ಲಿ, ಋಜುವಾತುವಿನಲ್ಲಿ. ದೊಡ್ಡವರು. ಅವರಿಗೆ ನಾವೇನೂ ಕಮೆಂಟ್ ಮಾಡಬಾರದು. ಪಾಪ. ಅವರಿನ್ನೂ ಗುಜರಾತ್ ಕನವರಿಕೆಯನ್ನೇ ಬಿಟ್ಟಿಲ್ಲ. ಅವರಿಗೆ (ಬಹುಶಃ) ಗ್ರೀನ್ ಕಾರಿಡರ್ ಸಂಗತಿ ಗೊತ್ತಿಲ್ಲ. ಯಾವುದೇ ವ್ಯಕ್ತಿ ಕ್ಷಣಿಕ ಆಮಿಷಕ್ಕೆ ಬಿದ್ದು ಮತಾಂತರಗೊಂಡರೆ ಅದರಿಂದಾಗುವ ವೈಯಕ್ತಿಕ- ಸಾಮಾಜಿಕ ನಷ್ಟದ ಬಗ್ಗೆ ಅರಿವಿಲ್ಲ. ಇವತ್ತು ನೆನ್ನೆ ಕಣ್ ಬಿಡುತ್ತಿರುವ ನಾವು ಹಾಗೆ ಅಪವಾದ ಮಾಡಿದರೆ ದೊಡ್ಡವರೆಲ್ಲ ಏನನ್ನುತ್ತಾರೋ?

ಅದಕ್ಕೇ,
ಏನೂ ಬರೆಯೋದು ಬೇಡವೆಂದು ಸುಮ್ಮನಾಗ್ತಿದೇನೆ. ಯಾರೇನು ಅಂದುಕೊಳ್ತಾರೋ ಅಂತ ಹಿಂಜರಿದು ಮುಖವಾಡ ಹಾಕ್ಕೊಳ್ತಿದೇನೆ.  ಬಚಾವಾಗಲು ಹೆಣಗುವ ಮತ್ತದೇ ಆಮೆಯಂತೆ.

      
Categories: ಕನ್ನಡ ಪುಟಗಳು

ಕೌಲೇದುರ್ಗದ ಕಥೆ

Tue, 2008-09-16 10:34

ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ ಇರೋದ್ರಿಂದ ಪ್ರವಾಸ ಕೂಡ ಸುಲಭವಲ್ಲ.

ಇರಲಿ. ಕವಲೇದುರ್ಗ ಓದಿ, ಹೇಗನಿಸಿತು ಹೇಳಿ. ಪ್ರವಾಸ ಕಥನ ಹಳೆ ನೆನಪಿನ ಆಧಾರದ ಮೇಲೆ ಬರೀಬಹುದಾ? ಹೇಳಿ. ನನಗೆ ನಿಮ್ಮ ಸಲಹೆ ಬೇಕು.

ಅಣ್ಣ ಸೈಕಲ್ಲೊರೆಸಿಟ್ಟುಕೊಂಡು ಬ್ಯಾಟು ಬಾಲು ಕ್ಯಾರಿಯರ್ರಿಗೆ ಸೆಕ್ಕಿಸಿ ತಯಾರಾಗಿ ನಿಂತಿದ್ದ. ಐದಲ್ಲ, ಹತ್ತಲ್ಲ, ಬರೋಬ್ಬರಿ ಇಪ್ಪತ್ತು ಕಿಲೋಮೀಟರು ದೂರ ಅಂವ ಸೈಕಲ್ಲಲ್ಲಿ ಹೊರಟಿದ್ದಕ್ಕೆ ಅಪ್ಪ ರೇಗಾಡಲು ಶುರುವಿಟ್ಟಿದ್ದರು.

‘ಹೆಣಾ ಹೊರಲಿಕ್ಕೆ ಹೋಗ್ತಾನಂತೇನು ಅಂವ ನಗರಕ್ಕೆ?’

‘ಇಲ್ಲ, ಕ್ರಿಕೆಟ್ ಆಡಕ್ಕೆ’ಅಪ್ಪನ ಕೂಗಿಗೆ ಅಣ್ಣ ಹೊಸಿಲ ಮೇಲೆ ನಿಂತು ತಣ್ಣಗೆ ಉತ್ತರಿಸಿದ್ದ.

‘ಹೈದರಾಲಿ ಧೋಕಾ ಮಾಡಿ ನಗರ ಸಂಸ್ಥಾನದ ಮ್ಯಾಲ ಏರಿ ಬಂದಾಗ, ಭಾಳ ದೊಡ್ ಯುದ್ಧ ಆತು. ಮನೆ ಮನೆ, ಕೇರಿಕೇರಿಯಿಂದ ಯುವಕ್ರು, ಮುದುಕ್ರು ಅನ್ದೆ ಎಲ್ರೂ ದಂಡಿಗೆದ್ರು. ಯುದ್ಧದಾಗ್ ಎಷ್ಟ್ ಮಂದಿ ಸತ್ರು ಅಂದ್ರ… ಸತ್ ಸೈನಿಕರ ಹೆಣಾ ಹೊರ್ಲಿಕ್ಕೂ ಹೊರಗಿಂದ ಜನಾನ್ ಕರೆಸ್ಬೇಕಾತು!’ಮಲೆನಾಡಿಗರದಲ್ಲದ ಭಾಷೆಯಲ್ಲಿ ಮಹತ್ತಿನ ಮಠದ ಬಳಿ ಇದ್ದೊಬ್ಬ ಅಯ್ಯ, ಸಂಜಯನ ಕಣ್ಣು ಮಾಡ್ಕೊಂಡು ಏನನ್ನೋ ಕಾಣ್ತಿರೋರ ಹಾಗೆ ಹೇಳ್ತಲೇ ಹೋದರು.durga1.jpg

‘ಕಾವಲು ದುರ್ಗ.’ ಅದು ಹೈದರಾಲಿ ಇಟ್ಟ ಹೆಸರು. ಹೆಣಾ ಹೊರಲಿಕ್ಕೂ ದಿಕ್ಕಿಲ್ಲದ ಹಾಗೆ ನಗರದ ಗಂಡಸರು ವೀರ ಮರಣ ಕಂಡಾಗ ಆತ ತನ್ನ ಸೈನ್ಯವನ್ನು ಅಲ್ಲಿಗೆ ತಂದು, ದುರ್ಗದ ಕೋಟೆಯಲ್ಲಿ ಕಾವಲಿಗಿರಿಸಿದ್ದ. ಕೌಲೇದುರ್ಗ ಅಂತಲೇ ಕರೆಸ್ಕೊಳ್ತಿದ್ದ ಕೋಟೆಯನ್ನ ಕಾವಲು ದುರ್ಗ ಅಂತ ಕರೆದ. ಆದರೇನಂತೆ? ಇವತ್ತಿಗೂ ಜನರ ಬಾಯಿಗೆ ಅದು, ಕೌಲೇದುರ್ಗವೇ. 

 ಆದರೆ ದುರ್ಗಕ್ಕೆ ಹೊಂದಿಕೊಂಡಿದ್ದ ನಗರ ಮಾತ್ರ ಇತ್ತೀಚಿನ ಎಲ್ಲ ಮಲೆನಾಡಿನ ಹಳ್ಳಿಗಳ ಹಾಗೆ ಯುವಕರನ್ನ ಪಟ್ಟಣಗಳಿಗೆ ಅಟ್ಟುತ್ತ, ಬಿದ್ದುಹೋದ ಅಡಿಕೆ ರೇಟಿಗೆ ಹಲುಬುತ್ತ, ಕೈಕೊಟ್ಟ ಶುಂಠಿ, ಉರುಳಾದ ವೆನಿಲ್ಲಾಗಳನ್ನ ಶಪಿಸ್ತಾ, ಮುಟ್ಟುನಿಂತ ಹೆಂಗಸಿನ ಹಾಗೆ ವಟಗುಟ್ಟುತ್ತ ನಿಂತಿದೆ. ಇಂಥಾ ನಗರವಲ್ಲದ ನಗರಕ್ಕೆ ಸೈಕಲ್ಲು ತುಳ್ಕೊಂಡು ಹೋದ ಅಣ್ಣ, ನೆಟ್ಟಾನೇರ ಮನೆಗೆ ಬಂದನಾ? ಇಲ್ಲ. ಅಂವ ಸುತ್ತಾಡಿ ಬಂದು ಬಾಗಿಲು ತಟ್ಟೋ ಹೊತ್ತಿಗೆ ಒಂದೂವರೆ ದಶಕದ ಹಿಂದಿನ ರಾತ್ರಿ ಒಂಭತ್ತು ಗಂಟೆ! ಹಾಗೆ ಬಂದವನ ಮೈ-ಕೈ ಎಲ್ಲ ಕೆಸರು ಕೆಸರು. ಮುಖ-ಮೂತಿ ತರಚು. ‘ತೆಗ್ದಾ ನನ್ ಮಗ ಮರ್ಯಾದೆಯ. ಯಾರ್ ಹತ್ರವೋ ಕಿತ್ತಾಡ್ಕಂಡು ಬಂದಾನ್ನೋಡು…’ ಅಣ್ಣನ ಗಾಯಕ್ಕೆ ಅಪ್ಪನ ಉಪ್ಪು. ತಗೋ! ಶುರುವಾಯ್ತು ಹೈದರಾಲಿ ಯುದ್ಧ!! ಅಮ್ಮ, ವೀರಮ್ಮಾಜಿಯ ಹಾಗೆ ನಡುವೆ ನುಗ್ಗಿ, ಅಪ್ಪನ ಬಲಕ್ಕೆ ಸೋತು ಹೈರಾಣಾದಳು.

ವೀರಮ್ಮಾಜಿ, ಕೆಳದಿ ಸಂಸ್ಥಾನದ ಕೊನೆಯ ರಾಣಿ. ಹೈದರಾಲಿಯನ್ನ ಧೈರ್ಯದಿಂದ ಎದುರಿಸಿ, ಕೊನೆಗೆ ಕೌಲೇದುರ್ಗದ ಕೋಟೆಯಲ್ಲಿ ರಕ್ಷಣೆಯಲ್ಲಿ ಆಶ್ರಯ ಪಡೆದಿದ್ದಳು. ಹೈದರ್ ಆ ಕೋಟೆಯನ್ನ ವಶಪಡಿಸಿಕೊಂಡಿದ್ದು ಅವಳಿಂದ್ಲೇ. ಇವಳಿಗೂ ಹಿಂದೆ, ಕೆಳದಿಯರಾಣಿ ಚೆನ್ನಮ್ಮಾಜಿ ಇದೇ ಕೋಟೆಯಲ್ಲಿಯೇ ಪಟ್ಟಾಭಿಷಿಕ್ತಳಾಗಿದ್ದಳು. ಉಧೋ ಅಂತ ನಡೆದೂ ನಡೆದೂ ದುರ್ಗ ಹತ್ತುತ್ತ ಎಂಥದೋ ಸಾಹಸ ಮಾಡುತ್ತಿದ್ದೇವನ್ನೋ ಹಮ್ಮಿಗೆ ಬಿದ್ದಿದ್ದ ನಮಗೆ, ಇದೇ ಕಾಡುಕೋಟೆಯೊಳಗೆ ಖಡ್ಗ ಹಿಡಿದು ಕಾದಾಡಿದ ಹೆಣ್ಣುಮಕ್ಕಳ ಕಥೆ ಕೇಳಿ ಮುಖ ಮುಚ್ಚಿಕೊಳ್ಳುವಷ್ಟು ನಾಚಿಕೆಯಾಯ್ತು. ಇದರಿಂದ ಇನ್ನೂ ಬೀಗಿದ ಅಯ್ಯ, ಅವರ ಹೋರಾಟದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಟ್ಟರು.

ಹಾಗೆ ಅವತ್ತು ಅಣ್ಣ ರಗಳೆ ಎಬ್ಬಿಸಿ ಹೋಗಿಬಂದಿದ್ದನಲ್ಲ, ಬಂದು ಬಯ್ಸಿಕೊಂಡವ ಹಾಸಿಗೆ ಮೇಲೆ ಕುಂತು ಉಡಾಫೆ ಕಣ್ಣು ಎಸೀತಾ ಹೇಳಿದ್ದ. ಹೆಂಗೆ ಛಾಕಾಛಕಾ ಹತ್ತಿಳಿದ್ವಿ ಗೊತ್ತಾ ದುರ್ಗಾನ? ಕ್ರಿಕೆಟ್ಟಿನ ನೆವದಲ್ಲಿ ಹಾಳು ಹುಡುಗರು ನಿಧಿ ಹುಡುಕಲಿಕ್ಕೆ ಹೋಗಿದ್ದರು!

ಇವತ್ತಿಗೂ ನಗರದಲ್ಲಿ ಮನೆ ಕಟ್ಟುವಾಗ, ಬಾವಿ ತೋಡುವಾಗ ಬಂಗಾರ ಸಿಗುತ್ತಲೇ ಇರತ್ತಂತೆ. ಹಳೆ ಮನೆ ಗೋಡೇಲಿ, ಫೌಂಡೇಷನ್ನಲ್ಲಿ ಚಿನ್ನದ ನಾಣ್ಯ ಮುಚ್ಚಿಡ್ತಿದ್ದರಂತೆ! ಕೇಳಿದ್ದಕ್ಕೆ ಅಯ್ಯ ನಕ್ಕರು. ಅಷ್ಟೇ.

ಈ ಕೌಲೇ ದುರ್ಗ ಇರೋದು ತೀರ್ಥಹಳ್ಳಿಯಿಂದ ೨೦ ಕಿಲೋಮೀಟರು ದೂರದಲ್ಲಿ. ಸಹಜವಾಗೇ ದುರ್ಗಮವಾದ, ಕಡಿದಾದ ಬೆಟ್ಟಗುಡ್ಡಗಳ ಸ್ಥಳ ಇದು. ಈ ದುರ್ಗದ ಕೆಳಗಿರೋ ’ಕೌಲೆ’ ಅನ್ನುವ ಹಳ್ಳಿಯಿಂದಾಗಿಯೇ ಅದಕ್ಕೆ ಕೌಲೇದುರ್ಗ ಅನ್ನೋ ಹೆಸರು ಬಂದಿದ್ದು. ಪುರಾಣೇತಿಹಾಸದ ಕಾಲದಲ್ಲಿ ಇಲ್ಲಿನ ಅರಣ್ಯಗಳನ್ನ ’ಕಾಮ್ಯಕ ವನ’ ಅಂತ ಕರೆಯಲಾಗ್ತಿತ್ತಂತೆ. ಅಂದಹಾಗೆ, ಕೌಲೇದುರ್ಗವನ್ನ ಕೆಲವು ಶಾಸನಗಳಲ್ಲಿ ’ಭುವನಗಿರಿದುರ್ಗ’ ಅಂತಲೂ ಕರೆಯಲಾಗಿದೆ.  ಇದು, ಕೆಳದಿಯ ಅರಸರು ಇಟ್ಟ ಹೆಸರು.

ಅಂದ ಹಾಗೆ, ಮೊದಲ ಬಾರಿಗೆ ಕೌಲೇದುರ್ಗದ ಮೇಲೊಂದು ಕೋಟೆ ಕಟ್ಟಿಸಿದ್ದು ಬೆಳಗುತ್ತಿ ನಾಡಿನ ಪಾಳೇಗಾರರು. ನಂತರ ಅದು ಕೌಲೆ ಗ್ರಾಮಾಧಿಕಾರಿಗಳಾದ ತೊಲೆತಮ್ಮ-ಮುಂಡಿಗೆ ತಮ್ಮ ಅನ್ನುವ ಸಹೋದರ ಸ್ವಾಧೀನಕ್ಕೆ ಬಂದು, ಅವರು ಕೋಟೆಯನ್ನ ಮತ್ತಷ್ಟು ಭದ್ರಪಡಿಸಿದರು. ಇದು, ಪಾಳೇಗಾರರಿಂದ ವಿಜಯನಗರದ ಕೈಗೆ, ಅವರ ನಂತರದ ಅರಾಜಕತೆಯ ಕಾಲದಲ್ಲಿ ಕೆಳದಿ ಅರಸರ ಕೈಗೆ, ಅವರಿಂದ ಹೈದರನ ವಶಕ್ಕೆ, ಅವನ ಮಗ ಟಿಪ್ಪುವಿನಿಂದ ಆಂಗ್ಲರ ತೆಕ್ಕೆಗೆ ದಾಟಿ ದಾಟಿ, ಭಾರತದೊಡನೆ ತಾನೂ ಸ್ವತಂತ್ರವಾಯ್ತು.

ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು. ಸುರಕ್ಷತೆ ಮಾತ್ರವಲ್ಲ ನಿರ್ಮಾಣದ ದೃಷ್ಟಿಯಿಂದಲೂ ಭರ್ಜರಿಯಾಗಿ ಕಾಣುತ್ತದೆ ಇದು. ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ. ದುರ್ಗದ ಬೆಟ್ಟಕ್ಕೆ ಹೋಗುವಾಗ ನಮಗೆ ಮೊದಲು ಸಿಗೋದು ಮಹಾಮಹತ್ತಿನ ಮಠ. ಕೌಲೇದುರ್ಗದ ಇತಿಹಾಸಕ್ಕೂ, ಮಠಕ್ಕೂ , ಕೆಳದಿ ಸಂಸ್ಥಾನಕ್ಕೂ ಬಹಳ ಹಿಂದಿನ ನಂಟು. 

ದುರ್ಗದ ಕಥೆ ಹೇಳೋದೆಂದರೆ, ಮಹತ್ತಿನ ಮಠದವರಿಗೆ ಎಲ್ಲಿಲ್ಲದ ಹುರುಪು. ಅಲ್ಲಿನ ಸ್ವಾಮೀಜಿ, ಕೌಲೇದುರ್ಗದ ಇತಿಹಾಸದ ಮೇಲೆ ಬೆಳಕುಚೆಲ್ಲುವಂಥ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ತಿರ್ತಾರೆ.ಈ ಮಠ ದಾಟಿ ಮುಂದೆ ಬಂದರೆ, ಗ್ರಾಮದ ಸುತ್ತ ಇರೋ ರಕ್ಷಣಾಗೋಡೆಗಳನ್ನ ನೋಡಬಹುದು. ಇವು ಕೂಡ ಈಗಲೋ ಆಗಲೋ ಅಂತ ಮೃತ್ಯುಂಜಯ ಜಪ ಮಾಡ್ತಾ ತಮ್ಮ ಪಾಳಿಗೆ ಕಾದು ಕುಂತಿವೆ. ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆಮಳೆಗೆ ಸವಾಲು ಹಾಕೋಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ.shikharesvarada-hebbagilu.jpgಇಲ್ಲಿಂದ ಮುಂದೆ, ಉರುಟು ಕಲ್ಲುಗಳ ಏರುದಾರಿ. ಹೀಗೇ ಹತ್ತುತ್ತ ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಬಂದರೆ, ಕೋಟೆಯ ಮೊದಲ ಸುತ್ತಿನ ಹೆಬ್ಬಾಗಿಲು ಬಾಯಿ ಕಳ್ಕೊಂಡು ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತೆ.

ಈ ಹೆಬ್ಬಾಗಿಲ ಮುಂದೊಂದು ಜಗಲಿ, ಕಾವಲುಗಾರರ ಗೂಡು. ಹೀಗೇ… ಒಂದು, ಎರಡು, ಮೂರು, ನಾಲ್ಕು, ಐದನೇ ಸುತ್ತಿನವರೆಗೂ ತಲೆ ಎತ್ತಿ ನಿಂತಿರುವ ಹೆಬ್ಬಾಗಿಲುಗಳು. ಈ ಕೋಟೆ ಕೈಚಾಚಿ ನಿಂತ ಹಾದಿಯುದ್ದಕ್ಕೂ ದಟ್ಟ ಕಾಡು, ಹಚ್ಚ ಹಸಿರು. ಇದರ ನಡುವಲ್ಲಿ ಕುದುರೆ, ಆನೆ, ಪದಾತಿದಳಗಳಿಗೆ ಸಾಗಲು ಸುಲಭವಾಗುವಂತೆ ದುಂಡುಕಲ್ಲಿನ ಏರು ರಸ್ತೆ.

ಮೂರನೇ ಸುತ್ತಿನ ಹೆಬ್ಬಾಗಿಲ ಮುಂದೊಂದು ನಗಾರಿ ಕಟ್ಟೆ. ಆಗೆಲ್ಲ ಯುದ್ಧಕ್ಕೆ ಮುಂಚೆ, ಅಥವಾ ಅಪಾಯ ಸೂಚನೆ ನೀಡಲಿಕ್ಕಾಗಿ ನಗಾರಿ ಬಡಿತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು, ನಾಲ್ಕನೇ ಸುತ್ತಿನ ನಂತರ ಕೊಂಚ ಸುಗಮ ಹಾದಿ. ಮೂರು ಮತ್ತು ನಾಲ್ಕನೇ ಸುತ್ತುಗಳ ನಡುವೆ ಒಂದಷ್ಟು ದೂರ ಮೆಟ್ಟಿಲುಗಳೂ ಇವೆ.ಐದನೇ ಸುತ್ತಿನ ಹೆಬ್ಬಾಗಿಲು ದಾಟಿ ಬಂದ್ರೆ, ಸೀದಾ ಅರಮನೆ ಅಂಗಳದಲ್ಲಿ ಬಂದು ನಿಲ್ತೀವಿ. ಈ ಅರಮನೆಯ ಹತ್ತಿರವೇ ಒಂದು ತೋಪುಖಾನೆ ಇದೆ. ಬಲ ಭಾಗದಲ್ಲಿ ಸ್ವಲ್ಪ ಮೇಲೇರಿ ಹೋದ್ರೆ,  ಶಿಖರೇಶ್ವರ ದೇವಸ್ಥಾನ ಸಿಗುತ್ತೆ. ಇಲ್ಲಿಂದ ಸೂರ್ಯಾಸ್ತ ನೋಡಲಿಕ್ಕೆ ಬಲು ಸೊಗಸು. ಹೀಗೇ ಇನ್ನಷ್ಟು ದೇವಾಲಯಗಳನ್ನ ನಾವು ಕೋಟೆಯುದ್ದಕ್ಕೂ  ನೋಡಬಹುದು.

 ಆದ್ರೆ, ಇಷ್ಟೆಲ್ಲ ನಿರ್ಮಾಣಗಳಾಗಿದ್ದು ಮೂಲ ನಿರ್ಮಾಣಕಾರರಿಂದಲ್ಲ, ಕೆಳದಿಯ ಅರಸರಿಂದ. ಅದರಲ್ಲೂ ಹದಿನಾರನೆಯ ಶತಮಾನದಲ್ಲಿ ಆಳಿದ ವೆಂಕಟಪ್ಪ ನಾಯಕನಿಂದ. ಈತ, ಪಾಳೆಯಗಾರರಿಂದ ಈ ಕೋಟೆಯನ್ನು ಗೆದ್ದುಕೊಂಡಿದ್ದ. ಅಂದಿನ ಆಳರಸರಿಗೆ ಈ ದುರ್ಗಮ ಸುಂದರಿಯೊಂದು ವೀರಪಣ! ವೆಂಕಟಪ್ಪ ನಾಯಕ ಬಹಳ ಬುದ್ಧಿವಂತ ಅರಸ. ಬೆಟ್ಟದ ಮೇಲೆ ನೀರು ಸಂಗ್ರಹಿಸೋ ತೊಟ್ಟಿಗಳನ್ನ ಕಟ್ಟಿಸಿ, ಅಲ್ಲಿಂದ ಕಾಲುವೆ ಮೂಲಕ ಅದು ದೇವಸ್ಥಾನಕ್ಕೆ, ಅರಮನೆಗೆ ಹರಿದು ಬರುವಂತೆ ಏರ್ಪಾಟು ಮಾಡಿಸಿದ್ದ. ಕೋಟೆಯ ಹೊರಗೆ ಅಗ್ರಹಾರ ಕಟ್ಟಿಸಿ, ಅಲ್ಲೊಂದು ಸಮುದಾಯ ಭವನ ಕಟ್ಟಿಸಿದ್ದ. ಅದೇ ಕಲ್ಯಾಣ ಮಹಲ್. ಇದೊಂದು ಅತಿ ಸುಂದರವಾದ ಕಟ್ಟಡವಾಗಿದ್ದು, ಇಂದು ಅದರ ಅವಶೇಷಗಳನ್ನಷ್ಟೆ ನೋಡಬಹುದು.

ಇವಷ್ಟೇ ಅಲ್ಲದೆ, ಈ ದುರ್ಗದ ಒಡಲಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳು, ಶಾಸನಗಳು, ಸಮಾಧಿಗಳು ಇವೆ. ಕೋಟೆಯ ಹೊರಗೆ, ಅಂದಿನ ಅರಸರು, ಕಿಲ್ಲೇದಾರರು ಕಟ್ಟಿಸಿದ ಕೆರೆಗಳಿದ್ದು, ಅವು ಇಂದಿಗೂ ಉಪಯುಕ್ತವಾಗಿವೆ. ಹೀಗೇ ದುರ್ಗದ ಅಚ್ಚರಿಗಳನ್ನ ನಮ್ಮೆದುರು ಕಾಣಿಸುತ್ತ ನಡೆದ ಅಯ್ಯ, ಅದು ಕೆಳದಿ ಅರಸರ ಟಂಕಸಾಲೆಗೂ ಜಾಗ ನೀಡಿತ್ತೆಂದು ಹೇಳಿದರು. ಆದರೆ, ಅದು ಇಂಥದ್ದೇ ಜಾಗದಲ್ಲಿ ಎಂದೇನೂ ನಿರ್ದಿಷ್ಟವಾಗಿ ತೋರಿಸದೇ, ಆ ಬಗ್ಗೆ ಶಾಸನಗಳಲ್ಲಿ ಹೇಳಲಾಗಿದೆ ಅಂತ ಮಾತಿನ ದಾಖಲೆ ಒದಗಿಸಿದಾಗ, ನಮಗೂ ಇದ್ದಿರಬಹುದು ಅನಿಸಿತು.

 ಇಳಿ ಸಂಜೆಯಾಗಿತ್ತು. ನಾವೀಗ ದುರ್ಗದ ತುತ್ತ ತುದಿಯಲ್ಲಿ. ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲ್ಯಾಜಿನಂತೆ ಕಂಡಿತು.ಎಡಕ್ಕೆ ತಿರುಗಿದರೆ, ಉರಿದು, ಉರಿಸಿ, ಬೇಯಿಸಿ ಸಾಕಾದ ಸೂರ್ಯ, ತಣ್ಣಗಾಗಲು ಹವಣಿಸ್ತ ಸಮುದ್ರಕ್ಕೆ ಜಾರಲು ಸಜ್ಜಾಗುತ್ತಿದ್ದ. ಇನ್ನೂ ಅಳಿದುಳಿದ ಕೆಂಪು ಕಕ್ಕುತ್ತಲೇ ಇದ್ದ.

 ಆಗುಂಬೆಯಲ್ಲಿ ನಿಂತಾಗ ಖುಶಿ ಕೊಡುವ, ಕವನ ಹುಟ್ಟಿಸುವ ಸೂರ್ಯಾಸ್ತ, ಇಲ್ಲಿ ನೆತ್ತರುಗುಳುತ್ತಿರೋ ಹಾಗೆ ಕಾಣಿಸ್ತಿತ್ತು. ಸೂತಕದ ವಾಸನೆ ಗವ್ವನೆ ಅಡರತೊಡಗಿತು. ಯಾರೋ ಕಳ್ಳು ಕಾಯಿಸಲು ಶುರುವಿಟ್ಟಿದ್ದರು. ಕಥೆ ಹೇಳುತ್ತ ಗಕ್ಕನೆ ನಿಂತ ಅಯ್ಯ, ಸೇವಕರ ವಂಚನೆಯಿಂದ ಸತ್ತ ಕೆಳದಿಯ ಸೋಮಶೇಖರನಾಯಕನ ಪುನರವತಾರದ ಹಾಗೆ, ಏನನ್ನೋ ನೆನೆಯುತ್ತ, ಕಲ್ಲುಕಲ್ಲನ್ನೂ ತಬ್ಬಿಕೊಳ್ಳುತ್ತ, ಗೊಣಗುತ್ತ ಉಳಿದುಬಿಟ್ಟರು.

ಅರೆ! ಅಪ್ಪ ಇವತ್ತು ನಗರಕ್ಕೆ ಹೋಗ್ತೀವಿ ಅಂದಾಗ ಹೆಣಾ ಹೊರಲಿಕ್ಕಾ? ಅಂತ ಕೇಳಲೇ ಇಲ್ಲ! ಆದರೂ ಮನಸ್ಸು ಹೆಣಭಾರವಾಗಿತ್ತು. ದುರ್ಗದ ಭವ್ಯತೆಯ ಹಿಂದಿನ ನರಳುವಿಕೆಗಳು ಕಥೆಯಾಗಿ ಅಲ್ಲಿ ಕುಂತುಬಿಟ್ಟಿತ್ತು. 

ಕೌಲೇ ದುರ್ಗಕ್ಕೆ ಹೋಗುವವರಿಗೆ ಸೂಚನೆ-ಈ ಕವಲೇ ದುರ್ಗಕ್ಕೆ ಹೋಗೋದು ಬಹಳ ಸುಲಭ. ರಾಜ್ಯದ ಬಹುತೇಕ ಪ್ರಮುಖ ನಗರಗಳಿಂದ ಶಿವಮೊಗ್ಗೆಗೆ ಬಸ್ ಸೌಕರ್ಯವಿದ್ದೇ ಇದೆ. ಅಲ್ಲಿಂದ ತೀರ್ಥಹಳ್ಳಿಗೆ ಕೇವಲ ೬೦ ಕಿಲೋಮೀಟರು. ಅಲ್ಲಿಂದ ಕವಲೇದುರ್ಗಕ್ಕೆ ಕೇವಲ ೧೬ ಕಿಲೋಮೀಟರು. ಹದಿನೈದಿಪ್ಪತ್ತು ನಿಮಿಷದ ಪ್ರಯಾಣವಷ್ಟೆ. ತೀರ್ಥಹಳ್ಳಿಯಿಂದ ಗಂಟೆಗೊಂದರಂತೆ ಬಸ್ಸುಗಳೂ ದೊರೆಯುತ್ತವೆ.ಸಮುದ್ರ ಮಟ್ಟದಿಂದ ೫೦೫೬ ಅಡಿ ಎತ್ತರವಿರುವ ದುರ್ಗಕ್ಕೆ ಚಳಿಗಾಲದಲ್ಲಿ ಭೇಟಿಕೊಡುವವರು ಸೂಕ್ತ ವ್ಯವಸ್ಥೆಯೊಂದಿಗೆ ಹೊರಡುವುದೊಳಿತು. ಮಳೆಗಾಲದಲ್ಲಿ ಚಾರಣದ ಸಾಹಸ ಬೇಡ ಅನ್ನೋದು ಸಲಹೆ. ಅದನ್ನ ಮೀರೋದು ಚಾರಣಿಗರ ಹುಮ್ಮಸ್ಸು! ಅಂದಹಾಗೆ, ಕವಲೇದುರ್ಗ ಒಂದು ರುದ್ರ ರಮಣೀಯ ಸ್ಥಳ. ಗುಂಪಾಗಿ ಹೋಗುವುದು ಉಚಿತ. ದಯವಿಟ್ಟು ತಿಂಡಿ ತೀರ್ಥ (ಎಲ್ಲ ಬಗೆಯ) ಕೊಂಡೊಯ್ದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಅಲ್ಲೇ ಬಿಸುಟು ತಣ್ಣಗೆ ಮಲಗಿರುವ ನಿಸರ್ಗಕ್ಕೆ ಧಕ್ಕೆ ತರಬಾರದಾಗಿ ವಿನಂತಿ.

(ಚಿತ್ರಗಳು-ವಿನಾಯಕ ಗುಜ್ಜಾರ್, ತೀರ್ಥಹಳ್ಳಿ)

Categories: ಕನ್ನಡ ಪುಟಗಳು

ನೆಲದಡಿಯ ನದಿಯೆಡೆಗೆ…

Mon, 2008-09-15 11:38

ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ.

“ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!

~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು ನೀವೇ ನೋಡುವಿರಿ.

ಸದ್ಯಕ್ಕೆ ಈ ಬ್ಲಾಗಿನಲ್ಲಿ ಎರಡು ಕವಿತೆಗಳಿವೆ. ಚೆಂದದೊಂದು ಲೇಖನವಿದೆ. (ಸ್ನೇಹದ ಅಭಿಮಾನಕ್ಕೆ ನನ್ನದೊಂದು ಲೇಖನ ಕೂಡ ಹಾಕಿರುವರು)

ನಿಜಕ್ಕೂ ಇನ್ನು ಮುಂದೆ ನೀವು ರೆಗ್ಯುಲರ್ರಾಗಿ ನೋಡಬಹುದಾದ ಬ್ಲಾಗ್ ಇದು ಅನ್ನುವುದು ನನ್ನ ಭರವಸೆ! ಆಸಕ್ತಿಯಿದ್ದರೆ ಭೇಟಿ ಕೊಡಿ:

http://enigmaa.wordpress.com

- ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

Categories: ಕನ್ನಡ ಪುಟಗಳು

‘ಬಸ್ಸಿನ ಹೆಂಗಸು’- ಒಂದು ಗಟ್ಟಿ ಚರ್ಚೆ

Thu, 2008-09-11 10:44

ನಿಮಗೆ ಗೊತ್ತು. ‘ಬಸ್ಸಿನ ಹೆಂಗಸು ಮತ್ತು ಬಿಳಿ ಬಿಳೀ ಸೀರೆಯ ಹುಡುಗಿಯರು’ ಲೇಖನದ ಪ್ರತಿಕ್ರಿಯೆಗಳು ಚರ್ಚೆಯಾಗಿ, ‘ಪೊರಕೆ ಎಲ್ಲಿದೆ?- ಮತ್ತೊಂದು ಚರ್ಚೆ’ ಎಂಬ ಶಿರೋನಾಮೆಯೊಂದಿಗೆ ಮುಂದುವರೆದಿದ್ದು. ಅಲ್ಲಿಂದಲೂ ಮುಂದುವರೆದು ಇದೀಗ ಚರ್ಚೆ ಬಹಳ ಸತ್ವಶಾಲಿಯಾಗಿ, ಗಟ್ಟಿಯಾಗಿ ಬೆಳೆದುನಿಂತಿದೆ ಸುಪ್ರೀತ್, ಹೇಮ ಶ್ರೀ, ಶ್ರೀಪ್ರಿಯೆ, ಸಂದೀಪ್ ಮತ್ತು ವಿಕೆ ಅವರು ಸಾಕಷ್ಟು ಸಂಗತಿಗಳನ್ನೊಳಗೊಂಡ ಸುದೀರ್ಘ ಪ್ರತಿಕ್ರಿಯೆಗಳನ್ನು ಬರೆದು ಚರ್ಚೆ ಮುಂದುವರೆಸಿದ್ದಾರೆ. ಅವೆಲ್ಲವನ್ನೂ ನಿಮ್ಮ ಅವಗಾಹನೆಗಾಗಿ ಪ್ರತ್ಯೇಕ ಪೋಸ್ಟ್ ಮೂಲಕ ಪೋಸ್ಟ್ ಮಾಡಿರುವೆ.

ನಿಮ್ಮ ಪ್ರತಿಕ್ರಿಯೆಗೆ, ಪಾಲ್ಗೊಳ್ಳುವಿಕೆಗೆ ನಾನು ಆಭಾರಿ. ನಿಮ್ಮೊಡನೆ ಈ ಸಂಗತಿ ಹಂಚಿಕೊಂಡ ನನಗೆ ಸಾಕಷ್ಟು ಸಮಾಧಾನ ದೊರಕಿದೆ.

- ಚೇತನಾ ತಿರ್ಥಹಳ್ಳಿ

‘ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ’ ಅನ್ನೋ ಆರೋಪ ವಿಕಾಸ್ ಮೇಲೆ ಹಾಕಿದ್ದು ಸರಿ ಅನ್ನಿಸಿಲ್ಲ.
ಒಂದು ಮಾತು ನಾವು ಮನದಟ್ಟು ಮಾಡಿಕೊಳ್ಳಲೇ ಬೇಕು - ಸ್ತ್ರೀ ಸಂವೇದನೆಗಳು ಯಾವತ್ತಿದ್ರೂನೀವು ಸ್ತ್ರೀಯರಿಗೇ ಅರ್ಥ ಆಗ್ಬೇಕು .ನಾವು ಗಂಡಸರು ಎಷ್ಟು ಜನ್ಮ ಎತ್ತಿದರೂ ನಮಗೆ ಅದು ಅರ್ಥ ಆಗಲ್ಲ.
ಹೆರಿಗೆ ನೋವಿನ ಬಗ್ಗೆ ನೀವು ನೂರು ಪುಟಗಳಷ್ಟು ಪ್ರಭಂದ ಬರೆದರೂ ನಾವು ಪುರುಷರು ಅದನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ;ಅಷ್ಟೇ ಯಾಕೆ ಹೆರಿಗೆ ನೋವು ಏನೆಂದು ಕಾಲೇಜು ಹುಡುಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ನಾ?
We can only sympathise not empathise!
ಋತುಚಕ್ರ ,ಋತುಭಂದಗಳನ್ನು ನಾವು ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಬಹುದಷ್ಟೆ ,ಅನುಭವಿಸೋದು ಸಾಧ್ಯ ಇಲ್ಲ.(ಗಂಡು ಗೈನೊಕಾಲಜಿಸ್ಟ್ ಆಗಿದ್ರೂ!).
ಸ್ತ್ರೀ ಸಂವೇದನೆಗಳು ಚೆನ್ನಾಗಿ ಅರ್ಥ ಆಗುತ್ತೆ ಅಂತ ಯಾರಾದ್ರೂ ಗಂಡಸು ನಿಮ್ಮ ಹತ್ರ ಹೇಳಿದ್ರೆ ಅವರಿಂದ ಹುಷಾರಾಗಿರಿ -ನಿಮ್ಮನ್ನು ಯಾಮಾರಿಸ್ತಿರಬಹುದು ಅವರು!
ಸ್ತ್ರೀ ಸಂವೇದನೆಗಳ ಬಗ್ಗೆ ಬರೆದು Phd ಪಡೆದವರು,ಅದರ ಬಗ್ಗೆ ಕಥೆ ,ಕಾದಂಬರಿ ಬರೆದವ್ರಿಗೂ ನಿಜವಾಗಿಯೂ ಅಂಥ ಕಾಳಜಿ ಇರೋದು ಸಂಶಯ.
ನನ್ನ ಪ್ರಕಾರ ಅನ್ಯಾಯ ಯಾರಿಗೇ ನಡೆದರೂ ಅದು ಅನ್ಯಾಯ -ಅದನ್ನು ’ಸಾಧ್ಯವಾದಲ್ಲಿ’ ಪ್ರತಿಭಟಿಸಲೇ ಬೇಕು.ಇದಕ್ಕೆ ಜಾತಿ,ಮತ,ಲಿಂಗ ಭೇದ ಇರಲೇ ಕೂಡದು.
ನನಗಂತೂ ಸ್ತ್ರೀ ಸಂವೇದನೆಗಳು ಅರ್ಥ ಆಗೋದೇ ಇಲ್ಲ! ನನ್ಗೆ ಅರ್ಥ ಆಗೋದು ಒಂದೇ ಭಾಷೆ ಅದು ಮಾನವೀಯತೆ! ಅದಕ್ಕೆ ಜಾತಿ,ಲಿಂಗಗಳ ಭೇದವಿಲ್ಲ.
ಹೆಂಗಸರಿಗಾಗುವ ಅನ್ಯಾಯಗಳ ಬಗ್ಗೆ ದನಿ ಎತ್ತುವವರನ್ನು ಕಂಡ್ರೆ ನಾನು ಯಾವತ್ತೂ ನಗಲ್ಲ .ಆದ್ರೆ ’ಬರೀ ಹೆಂಗಸ’ರ ಪರವಷ್ಟೇ ಅವನು ದನಿ ಎತ್ತುತ್ತಾ ಇದ್ರೆ ಅನುಮಾನ ಪಡಬೇಕಷ್ಟೆ.
ಬಸ್ಸಿನಲ್ಲಿ ಆ ಹೆಣ್ಣಿಗಾದ ಕಿರುಕಳದ ಬಗ್ಗೆ ನನಗೂ ಕಾಳಜಿ ಇದೆ .ಆದ್ರೆ ದುಡ್ಡು ಮಡಗಿ ಹೋಗ್ಲಾ ಅನ್ನೋದು ಅಸಹಾಯಕತೆ ಖಂಡಿತ ಅಲ್ಲ .ಅದು ನಿಮ್ಮ ’ಮುಗ್ಧತೆ’ ! ಆ ಹೆಂಗಸು ಅಷ್ಟೆಲ್ಲಾ ಕಿರುಕುಳ ಸಹಿಸಿಕೊಂಡು ಇಳಿದು ಹೋಗಿದ್ರೆ ಅದು ಇತಿಹಾಸದಲ್ಲಿ ’ಇನ್ನೊಂದು ಲೈಂಗಿಕ ಕಿರುಕುಳದ ಸಾಲಿಗೆ ಸೇರಿ ಹೋಗ್ತಾ ಇತ್ತ