ಕೂಗು
ಹೇಗೆ ಹೇಳಲಿ?
ಅಲ್ಲಿ ಯಾರೂ ಇರುವುದಿಲ್ಲ
ಇಲ್ಲಿ ಯಾರೂ ಇರುವುದಿಲ್ಲ
ಯಾರಿಗೆ ಯಾರೂ ಇಲ್ಲ
ಯಾರೂ ಅನಿವಾರ್ಯವಲ್ಲ
ಬೆಳಕಿಗೆ ಬೆಳಕೆಂದರೆ ಸಾಕು
ಕತ್ತಲಿಗೆ ಕತ್ತಲೆಂದರೆ ಸಾಕು
ಎರಡು ಬೆರೆತಿರಲು ಸಾಧ್ಯವಿಲ್ಲ
ಏಕಾಂಗಿ, ಅದೇ ಕಠೋರ ಸತ್ಯ
ಅದಿದ್ದಲ್ಲಿ ಇದು ಇರುವುದಿಲ್ಲ
ಇದಿದ್ದಲ್ಲಿ ಅದು ಇರುವುದಿಲ್ಲ
ಎರಡು ಒಟ್ಟಿಗಿರಲು ಸಾಧ್ಯವಿಲ್ಲ
ಅದಕೆ ಇದು, ಇದಕೆ ಅದು ಅಷ್ಟೆ ನಿಜ
ಜನ್ಮ, ಸ್ಥಳ, ಹೆಸರು, ಜಾತಿ ,
ಧರ್ಮ, ಸಂಸ್ಕೃತಿ, ದೇಶ
ಎಲ್ಲವೂ ಅಂಟಿಸಿಕೊಂಡಿರುವುದಷ್ಟೆ
ಹುಳ, ಉಪ್ಪಟೆಗಳಂತೆ ಕಳಚಿ ಬಿಡಬಹುದು
ಒಂದರ ನಂತರ ಇನ್ನೊಂದು
ಬರುವುದು, ಇರುವುದು, ಹೋಗುವುದು
ಜಗದ ನಿಯಮ
ಕ್ರಿಯೆ, ಪ್ರತಿಕ್ರಿಯೆಯ ಪರಿಣಾಮ
ಎಲ್ಲ ಪ್ರಶ್ನೆಗಳಿಗೆ ಉತ್ತರ ಅನಿವಾರ್ಯವಲ್ಲ
ಪ್ರಶ್ನೆಗಳ ಒಲಿತು, ಕೆಡುಕಿನ ಪರಿಜ್ಞಾನ
ಅನಗತ್ಯ ಕುತೂಹಲ ಕೆರಳಿಸಿದ
ಪಿತಾಮಹನು ಯಾರು ಬಲ್ಲಿರೇನು ?
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಂದ
ಸಾಧಿಸಿದ್ದಾದರೂ ಏನು ?
ಇವೆಲ್ಲ ಇರದುದರಿಂದ ಅವುಗಳು
ಕಳೆದುಕೊಂಡದ್ದಾದರೂ ಏನು ?
ಎಲ್ಲವು ಎಲ್ಲದರಂತೆ ಇರಲು ಬಿಡಿ
ಎಲ್ಲರಲಿ ಒಬ್ಬರಂತೆ ಜೊತೆಗಿರುವುದ ಕಲಿ
ಕಡಿದು ಹಾಕುವ ಕಾತುರ ಬೇಡ
ಈಗಲಾದರೂ ಮೂರ್ಖ ಪಾಠ ಕಲಿ
ಇಲ್ಲಿ ಯಾರೂ ಇರುವುದಿಲ್ಲ
ಯಾರಿಗೆ ಯಾರೂ ಇಲ್ಲ
ಯಾರೂ ಅನಿವಾರ್ಯವಲ್ಲ
ಬೆಳಕಿಗೆ ಬೆಳಕೆಂದರೆ ಸಾಕು
ಕತ್ತಲಿಗೆ ಕತ್ತಲೆಂದರೆ ಸಾಕು
ಎರಡು ಬೆರೆತಿರಲು ಸಾಧ್ಯವಿಲ್ಲ
ಏಕಾಂಗಿ, ಅದೇ ಕಠೋರ ಸತ್ಯ
ಅದಿದ್ದಲ್ಲಿ ಇದು ಇರುವುದಿಲ್ಲ
ಇದಿದ್ದಲ್ಲಿ ಅದು ಇರುವುದಿಲ್ಲ
ಎರಡು ಒಟ್ಟಿಗಿರಲು ಸಾಧ್ಯವಿಲ್ಲ
ಅದಕೆ ಇದು, ಇದಕೆ ಅದು ಅಷ್ಟೆ ನಿಜ
ಜನ್ಮ, ಸ್ಥಳ, ಹೆಸರು, ಜಾತಿ ,
ಧರ್ಮ, ಸಂಸ್ಕೃತಿ, ದೇಶ
ಎಲ್ಲವೂ ಅಂಟಿಸಿಕೊಂಡಿರುವುದಷ್ಟೆ
ಹುಳ, ಉಪ್ಪಟೆಗಳಂತೆ ಕಳಚಿ ಬಿಡಬಹುದು
ಒಂದರ ನಂತರ ಇನ್ನೊಂದು
ಬರುವುದು, ಇರುವುದು, ಹೋಗುವುದು
ಜಗದ ನಿಯಮ
ಕ್ರಿಯೆ, ಪ್ರತಿಕ್ರಿಯೆಯ ಪರಿಣಾಮ
ಎಲ್ಲ ಪ್ರಶ್ನೆಗಳಿಗೆ ಉತ್ತರ ಅನಿವಾರ್ಯವಲ್ಲ
ಪ್ರಶ್ನೆಗಳ ಒಲಿತು, ಕೆಡುಕಿನ ಪರಿಜ್ಞಾನ
ಅನಗತ್ಯ ಕುತೂಹಲ ಕೆರಳಿಸಿದ
ಪಿತಾಮಹನು ಯಾರು ಬಲ್ಲಿರೇನು ?
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಂದ
ಸಾಧಿಸಿದ್ದಾದರೂ ಏನು ?
ಇವೆಲ್ಲ ಇರದುದರಿಂದ ಅವುಗಳು
ಕಳೆದುಕೊಂಡದ್ದಾದರೂ ಏನು ?
ಎಲ್ಲವು ಎಲ್ಲದರಂತೆ ಇರಲು ಬಿಡಿ
ಎಲ್ಲರಲಿ ಒಬ್ಬರಂತೆ ಜೊತೆಗಿರುವುದ ಕಲಿ
ಕಡಿದು ಹಾಕುವ ಕಾತುರ ಬೇಡ
ಈಗಲಾದರೂ ಮೂರ್ಖ ಪಾಠ ಕಲಿ
Categories: ಕನ್ನಡ ಪುಟಗಳು
ಮತ್ತೆ ಬರುವನು ಚಂದಿರ - 3
ಅಸಹಾಯ ಅಪ್ರತಿಮ ಶೂರ
ದಾರಿ ಇರಲು ಬಹಳ ದೂರ
ಇರುವುದೆಲ್ಲವ ತೊರೆದು ಬಾರ
ನೀನಾಗುವೆ ಆಗ ಚಂದಿರ
ಕಾಲಗರ್ಭ ಖಾಲಿ ಕಾಗದವಲ್ಲ
ಬರೆದುದೆಲ್ಲವು ಅರ್ಥವಾಗಬೇಕಿಲ್ಲ
ಸಿಕ್ಕಿದಷ್ಟು ಸಾಕು ಸವಿದು
ಮುನ್ನಡೆಯಬೇಕೊ ಚಂದಿರ
ತಿಳುವು, ತಿರುಳು, ತಿರುವುಗಳು
ಹಿಡಿತಕೆ ಎಂದೂ ಸಿಗದವುಗಳು
ಅರಿವಿರುವವರ ಆಂತರ್ಯದಲ್ಲಿ
ಅಡಗಿರುವವೊ ಚಂದಿರ
ಅಸಿವಿಗೆ ಅನ್ನ, ದಾಹಕೆ ನೀರು
ಬಿಸಿಲು, ಗಾಳಿ, ಮಳೆಗೆ ಸೂರು
ಕತ್ತಲು ಕವಿದೆಡೆ ಇರಲು ಬೆಳಕು
ಸಾಕು ಬಾಳಿಗೆ ಚಂದಿರ
ಬೇಕುಗಳ ಬೆನ್ನಟ್ಟಿ ಹೊರಟಿರುವೆ
ಇತಿಹಾಸ ಪುಟಗಳ ಮರೆತಿರುವೆ
ಮತ್ತದೇ ಜಾಗಕ್ಕೆ ಮರಳಿ ಬರುವ
ಬಯಕೆ ಬಿತ್ತಿರುವೆ ಚಂದಿರ
ಮೂರ್ತ, ಅಮೂರ್ತಗಳ ಜೊತೆಗೂಡಿ
ಶಾಂತಿ, ನೆಮ್ಮದಿಗಾಗಿ ತಡಕಾಡಿ
ಬೆಟ್ಟ ಗುಡ್ಡಗಳೆಲ್ಲ ಅಲೆದಾಡಿ
ನಿನ್ನೊಳಗಿರುವವನವ ಚಂದಿರ
ಇರುವ ಪ್ರಶ್ನೆಗಳ ಎಸೆದು ಬಿಡು
ಚಿಂತೆ ಕಂತೆಗಳೊರಗೆ ತೂರಿಬಿಡು
ನಿರಾಳವಾದ ಪುಟ್ಟ ಹೃದಯವು
ನಲಿದಾಡುವುದಾಗ ಚಂದಿರ
ಪಡೆದುದೆಲ್ಲ ಪ್ರದರ್ಶಿಸುವ ಕಾತುರ
ಇರದುದನು ಪಡೆಯುವ ಅತ್ಯವಸರ
ಇರುವ, ಇರದವುಗಳ ಬಲೆಯಲ್ಲಿ
ನಗುವ ಮರೆತೆಯಲ್ಲೊ ಚಂದಿರ
ತನು ಮನ ತಣಿಸುತಲೇ ಅಭ್ಯಾಸ
ಕಲಿತು, ಕಲಿಸು ಕಾಣುವೆ ಕೈಲಾಸ
ವಿಳಾಸಿ ಜೀವನಕೆ ತೀಳಾಂಜಲಿಯಿಡುತ
ಸರಳ ಬದುಕು ಲೇಸೆಂದ ಚಂದಿರ
ಸ್ಪರ್ಧೆಯ ಜಗದಲ್ಲಿ ಸಹನೆಗೆ ಸ್ಥಳವೆಲ್ಲಿ
ಸಾಮರ್ಥ್ಯವೊಂದೆ ಇಲ್ಲಿ ಮಾನದಂಡ
ಇದ್ದವನು ಈಜುವ, ಇರದವನು ಸಾಯುವ
ಮನಃಶಾಂತಿ ಇನ್ನೆಲ್ಲಿ ಚಂದಿರ
ದಾರಿ ಇರಲು ಬಹಳ ದೂರ
ಇರುವುದೆಲ್ಲವ ತೊರೆದು ಬಾರ
ನೀನಾಗುವೆ ಆಗ ಚಂದಿರ
ಕಾಲಗರ್ಭ ಖಾಲಿ ಕಾಗದವಲ್ಲ
ಬರೆದುದೆಲ್ಲವು ಅರ್ಥವಾಗಬೇಕಿಲ್ಲ
ಸಿಕ್ಕಿದಷ್ಟು ಸಾಕು ಸವಿದು
ಮುನ್ನಡೆಯಬೇಕೊ ಚಂದಿರ
ತಿಳುವು, ತಿರುಳು, ತಿರುವುಗಳು
ಹಿಡಿತಕೆ ಎಂದೂ ಸಿಗದವುಗಳು
ಅರಿವಿರುವವರ ಆಂತರ್ಯದಲ್ಲಿ
ಅಡಗಿರುವವೊ ಚಂದಿರ
ಅಸಿವಿಗೆ ಅನ್ನ, ದಾಹಕೆ ನೀರು
ಬಿಸಿಲು, ಗಾಳಿ, ಮಳೆಗೆ ಸೂರು
ಕತ್ತಲು ಕವಿದೆಡೆ ಇರಲು ಬೆಳಕು
ಸಾಕು ಬಾಳಿಗೆ ಚಂದಿರ
ಬೇಕುಗಳ ಬೆನ್ನಟ್ಟಿ ಹೊರಟಿರುವೆ
ಇತಿಹಾಸ ಪುಟಗಳ ಮರೆತಿರುವೆ
ಮತ್ತದೇ ಜಾಗಕ್ಕೆ ಮರಳಿ ಬರುವ
ಬಯಕೆ ಬಿತ್ತಿರುವೆ ಚಂದಿರ
ಮೂರ್ತ, ಅಮೂರ್ತಗಳ ಜೊತೆಗೂಡಿ
ಶಾಂತಿ, ನೆಮ್ಮದಿಗಾಗಿ ತಡಕಾಡಿ
ಬೆಟ್ಟ ಗುಡ್ಡಗಳೆಲ್ಲ ಅಲೆದಾಡಿ
ನಿನ್ನೊಳಗಿರುವವನವ ಚಂದಿರ
ಇರುವ ಪ್ರಶ್ನೆಗಳ ಎಸೆದು ಬಿಡು
ಚಿಂತೆ ಕಂತೆಗಳೊರಗೆ ತೂರಿಬಿಡು
ನಿರಾಳವಾದ ಪುಟ್ಟ ಹೃದಯವು
ನಲಿದಾಡುವುದಾಗ ಚಂದಿರ
ಪಡೆದುದೆಲ್ಲ ಪ್ರದರ್ಶಿಸುವ ಕಾತುರ
ಇರದುದನು ಪಡೆಯುವ ಅತ್ಯವಸರ
ಇರುವ, ಇರದವುಗಳ ಬಲೆಯಲ್ಲಿ
ನಗುವ ಮರೆತೆಯಲ್ಲೊ ಚಂದಿರ
ತನು ಮನ ತಣಿಸುತಲೇ ಅಭ್ಯಾಸ
ಕಲಿತು, ಕಲಿಸು ಕಾಣುವೆ ಕೈಲಾಸ
ವಿಳಾಸಿ ಜೀವನಕೆ ತೀಳಾಂಜಲಿಯಿಡುತ
ಸರಳ ಬದುಕು ಲೇಸೆಂದ ಚಂದಿರ
ಸ್ಪರ್ಧೆಯ ಜಗದಲ್ಲಿ ಸಹನೆಗೆ ಸ್ಥಳವೆಲ್ಲಿ
ಸಾಮರ್ಥ್ಯವೊಂದೆ ಇಲ್ಲಿ ಮಾನದಂಡ
ಇದ್ದವನು ಈಜುವ, ಇರದವನು ಸಾಯುವ
ಮನಃಶಾಂತಿ ಇನ್ನೆಲ್ಲಿ ಚಂದಿರ
Categories: ಕನ್ನಡ ಪುಟಗಳು
ಅರಳಿಕಟ್ಟೆ
ಮೋಟು ಬೀಡಿ ಹಚ್ಚಿ
ಅರಳಿಕಟ್ಟೆ ಮೇಲೆ ಕುಳಿತು
ಗೆಳೆಯರ ಮಿತಿಯಿಲ್ಲದ ಹರಟೆಗೆ
ದಿನದ ದಣಿವು ಮಾಯ
ಮುಸ್ಸಂಜೆಯ ಹೊತ್ತಲ್ಲಿ
ಕುರಿ ಮೇಕೆಗಳ ಹಿಂಡು ಧೂಳೆಬ್ಬಿಸಿ, ಕೂಗಿ
ಮರಿಗಳ ಜೊತೆಸೇರೊ ಕಾತುರವ
ಕಾಣುವುದೇ ಅಚ್ಚರಿ
ಬಿಸಿ ಬಿಸಿ ರಾಗಿ ಮುದ್ದೆ ,
ಹಸಿ ಅವರೆಕಾಳು ಸಾರುಂಡು
ಗಂಗಿಯ ಬೆವರಿನ ಘಮ ಸೆಳೆದಾಗ
ಅವಳ ಕೂಡುವುದೇ ಸಂಭ್ರಮ
ಮುಂಜಾನೆ ಮುಸುಕಿನಲಿ
ಬೆಚ್ಚನ ಕಂಬಳಿ ಸರಿಸಿ, ಮೈಮುರಿದು ,
ತೆಳುವಾದ ಮೈ ಮನಕೆ
ಕೇಳಿಸುವುದೆಲ್ಲವು ಸಂಗೀತ
ಅರಳಿಕಟ್ಟೆ ಮೇಲೆ ಕುಳಿತು
ಗೆಳೆಯರ ಮಿತಿಯಿಲ್ಲದ ಹರಟೆಗೆ
ದಿನದ ದಣಿವು ಮಾಯ
ಮುಸ್ಸಂಜೆಯ ಹೊತ್ತಲ್ಲಿ
ಕುರಿ ಮೇಕೆಗಳ ಹಿಂಡು ಧೂಳೆಬ್ಬಿಸಿ, ಕೂಗಿ
ಮರಿಗಳ ಜೊತೆಸೇರೊ ಕಾತುರವ
ಕಾಣುವುದೇ ಅಚ್ಚರಿ
ಬಿಸಿ ಬಿಸಿ ರಾಗಿ ಮುದ್ದೆ ,
ಹಸಿ ಅವರೆಕಾಳು ಸಾರುಂಡು
ಗಂಗಿಯ ಬೆವರಿನ ಘಮ ಸೆಳೆದಾಗ
ಅವಳ ಕೂಡುವುದೇ ಸಂಭ್ರಮ
ಮುಂಜಾನೆ ಮುಸುಕಿನಲಿ
ಬೆಚ್ಚನ ಕಂಬಳಿ ಸರಿಸಿ, ಮೈಮುರಿದು ,
ತೆಳುವಾದ ಮೈ ಮನಕೆ
ಕೇಳಿಸುವುದೆಲ್ಲವು ಸಂಗೀತ
Categories: ಕನ್ನಡ ಪುಟಗಳು
ಕಲಕಿದೆ
ಹೃದಯವ ಆರ್ದ್ರಗೊಳಿಸಿ
ಕಣ್ಣು ಒದ್ದೆಯಾಗಿಸಿ
ಮೃದುವಾಗಿ ಗಾಯ ಸವರಿ
ಆತ್ಮರತಿ ಮೂಡಿಸಿದೆ
ಚದುರಿದ್ದ ಬಿಂಬಗಳ
ಒಟ್ಟುಗೂಡಿಸಿ
ಹಲವು ಪ್ರತಿಬಿಂಬಗಳ
ಒಂದಾಗಿಸುವ ತರ್ಕ
ಭಾವಗಳ ವಿವರ
ಬಿಡಿಸಿಡುವ ಹಂಬಲ
ಭಾವ ಸಂವೇದನೆಗೆ
ಸ್ಪಂದಿಸುವ ಛಲ
ಆಳದಲಿ ಅದುಮಿಟ್ಟ
ಆಪ್ತ ಸ್ವರಗಳ ಕಲಕಿ
ಸುಪ್ತ ಆಸೆಗಳ ಅಲ್ಲಾಡಿಸಿ
ಹಿತವಾದ ಚಲನೆ ನೀಡಿದೆ
ಹತ್ತು ಛಾಯೆಗಳ ಗುರುತು
ಹಲವು ಸ್ತರಗಳಲಿ ಅವಿತು
ಮರೆತ ಚಿತ್ರಗಳ ನೆನಪು
ಮತ್ತೆ ಕಣ್ಣುಗಳು ಒದ್ದೆ ಒದ್ದೆ
ಕಣ್ಣು ಒದ್ದೆಯಾಗಿಸಿ
ಮೃದುವಾಗಿ ಗಾಯ ಸವರಿ
ಆತ್ಮರತಿ ಮೂಡಿಸಿದೆ
ಚದುರಿದ್ದ ಬಿಂಬಗಳ
ಒಟ್ಟುಗೂಡಿಸಿ
ಹಲವು ಪ್ರತಿಬಿಂಬಗಳ
ಒಂದಾಗಿಸುವ ತರ್ಕ
ಭಾವಗಳ ವಿವರ
ಬಿಡಿಸಿಡುವ ಹಂಬಲ
ಭಾವ ಸಂವೇದನೆಗೆ
ಸ್ಪಂದಿಸುವ ಛಲ
ಆಳದಲಿ ಅದುಮಿಟ್ಟ
ಆಪ್ತ ಸ್ವರಗಳ ಕಲಕಿ
ಸುಪ್ತ ಆಸೆಗಳ ಅಲ್ಲಾಡಿಸಿ
ಹಿತವಾದ ಚಲನೆ ನೀಡಿದೆ
ಹತ್ತು ಛಾಯೆಗಳ ಗುರುತು
ಹಲವು ಸ್ತರಗಳಲಿ ಅವಿತು
ಮರೆತ ಚಿತ್ರಗಳ ನೆನಪು
ಮತ್ತೆ ಕಣ್ಣುಗಳು ಒದ್ದೆ ಒದ್ದೆ
Categories: ಕನ್ನಡ ಪುಟಗಳು
ಸೂತ್ರಗಳು
ಬೇರೊಬ್ಬರೊಂದಿಗೆ
ಹೋಲಿಕೆ ಏಕೆ ?
ಅವರ ಹಾದಿಯ ಬಗ್ಗೆ
ನಮಗರಿವಿಲ್ಲದಿದ್ದಾಗ
ನಮ್ಮ ಸಂತೋಷಕ್ಕೆ ಯಾರೋ
ನಾಯಕರಲ್ಲ ?
ನಮ್ಮ ಹೊರತು
ನಮ್ಮ ಬಗ್ಗೆ ಬೇರೆಯವರ
ಅಭಿಪ್ರಾಯ, ಅನಿಸಿಕೆಗಳು
ಆರೋಗ್ಯವಾಗಿ, ಸರಿಯಾಗಿದ್ದಲ್ಲಿ ಸ್ವೀಕರಿಸಿ ,
ಇಲ್ಲವಾದರೆ ನಿರಾಕರಿಸಿ
ಪರಿಸ್ಥಿತಿ ಎಷ್ಟೇ ಚೆನ್ನಾಗಿ
ಅಥವ ಕೆಟ್ಟದಾಗಿದ್ದರು
ಅದು ಖಂಡಿತ ಬದಲಾಗುತ್ತದೆ
ಉಪಯೋಗಕ್ಕೆ ಬಾರದ ,
ಹಿತವೆನಿಸದ ಅಥವ
ಸಂತಸ ತರದವುಗಳಿಂದ ಆದಷ್ಟು
ದೂರವಿರಲು ಯತ್ನಿಸಿ
ಮನಸು ಹೇಗೇ ಇರಲಿ ,
ಎಲ್ಲೇ ಇರಲಿ, ನಮ್ಮ ಹತೋಟಿಯಲ್ಲಿರಲಿ
ಏಳಿ, ಎದ್ದೇಳಿ ಸಮಸ್ಯೆಗಳ
ಎದೆಗುಂದದೆ ಎದುರಿಸಿ
ಹತ್ತರಿಂದ ಮೂವತ್ತು ನಿಮಿಷವಾದರು
ಉಮ್ಮಸ್ಸಿನಿಂದ ದಿನ ನಡೆಯುವುದು
ಅಭ್ಯಾಸ ಮಾಡಿಕೊಳ್ಳಿ
ಪ್ರತಿ ಮುಂಜಾನೆ ಏಳುವಾಗ
ಅಂದಿನ ಉದ್ದೇಶ ಸಂತೋಷವಾಗಿರಬೇಕು
ಎಂಬ ವಾಕ್ಯವನ್ನು ಮರೆಯದೆ ಪಠಿಸಿ
ನಮ್ಮ ಸಾಕಷ್ಟು ಸಮಯ
ಎಪ್ಪತ್ತು ವರ್ಷ ಮೇಲ್ಪಟ್ಟು
ಆರು ವರ್ಷದೊಳಗಿನವರೊಂದಿಗೆ
ಕಳೆದರೆ, ಹೆಚ್ಚು ನಗುವಿರುತ್ತದೆ
ಪ್ರತಿದಿನ ಕನಿಷ್ಟ ಮೂವರನ್ನಾದರು
ನಗಿಸುವ ಪ್ರಯತ್ನ ಆರೋಗ್ಯಕರ
ಸದಾ ಉತ್ಸಾಹ, ಉಮ್ಮಸ್ಸು ಹಾಗು
ನಗುವಿನಿಂದಿರಲು ಯತ್ನಿಸಿದಾಗ
ನಕಾರಾತ್ಮಕ ವಿಷಯಗಳು
ತಾನಾಗಿಯೇ ದೂರವಿರುತ್ತವೆ
ಬದುಕು ಅತ್ಯಲ್ಪ ಅವಧಿ ಮಾತ್ರ
ದ್ವೇಷಿಸುವುದಕ್ಕೆ ಕಾಲಹರಣ ಬೇಡ
ಎಲ್ಲ ವಾದಗಳು ಗೆಲ್ಲಬೇಕೆಂದಿಲ್ಲ
ಒಪ್ಪಿಗೆಯಿಲ್ಲವೆಂದು ಒಪ್ಪಿಕೊಳ್ಳುವುದು ಸೂಕ್ತ
ಸಂಸಾರದೊಂದಿಗೆ ಹೆಚ್ಚು ಸಂಪರ್ಕ
ಹಾಗು ಸಮಯ ಕೊಡುವುದು ಅಗತ್ಯ
ನೆನಪಿರಲಿ ಮನುಜರು ತುಂಬಾ
ಅದೃಷ್ಟವಂತರು, ಸಮಸ್ಯೆಗಳಿಂದ
ಕಲಿಯಲು ಅವರಿಗೆ ಮಾತ್ರ ಸಾಧ್ಯ
ಪಯಣ ಸಂತಸಕರ, ಸುಖಕರವಾಗಿರಲಿ
ಅತಿಯಾದ ಅವಸರ, ವೇಗಕ್ಕೆ ಆಧ್ಯತೆ ಬೇಡ
ವೇಗ, ಉದ್ವೇಗ ಕೊನೆಯಾಗುವವು ಬೇಗ
ಸುಖಕರ ಪಯಣವೆ ಏಕೈಕ ಗುರಿಯಾಗಿರಲಿ
ಪ್ರತಿರಾತ್ರಿ ಮಲಗುವ ಮುನ್ನ
ದಿನದ ಸಂತಸ, ಸಾಧನೆ ಸ್ಮರಿಸಿ
ಸರಿಯಾದ ಮಾರ್ಗ
ಸರಿಯಾದ ಮಾತು
ಸರಿಯಾದ ಮನಸು
ಸರಿಯಾದ ಕ್ರಿಯೆಯಲ್ಲಿ
ವಿಶ್ವಾಸವಿರಲಿ
ಅತ್ಯುತ್ತಮವಾದುದು
ಇನ್ನೂ ಬರಬೇಕಿದೆ
ನಂಬಿಕೆಯಿರಲಿ
ಅನಾರೋಗ್ಯದಲ್ಲಿ ನಮ್ಮ ಉದ್ಯೋಗ
ನಮ್ಮನ್ನು ರಕ್ಷಿಸುವುದಿಲ್ಲ
ಸ್ನೇಹಿತರು ನೆರವಾಗುತ್ತಾರೆ
ಸ್ನೇಹಿತರಿರಲಿ ,
ಮುಖ್ಯವಾಗಿ ಅವರೊಂದಿಗೆ ಸಂಪರ್ಕವಿರಲಿ
ಕಾಲ ಎಲ್ಲವನ್ನು ವಾಸಿ ಮಾಡುತ್ತದೆ ,
ಮರೆಸುತ್ತದೆ ಅದಕ್ಕೆ ಅವಕಾಶ ಕೊಡಿ
ಎಲ್ಲರನ್ನು ಎಲ್ಲ ತಪ್ಪುಗಳಿಗಾಗಿ ಕ್ಷಮಿಸುವುದರಿಂದ
ಮನಸು ಹಗುರ, ಆರೋಗ್ಯಕರವಾಗಿರುವುದು
ಹಣತೆ ಬೆಳಗಿ ಕತ್ತಲೋಡಿಸಿ
ಒಳ್ಳೆಯದು, ಇಷ್ಟವಾಗುವುದು ತಪ್ಪದೆ ಬಳಸಿ
ಯಾವುದನ್ನೂ ಶುಭಕಾರ್ಯ ,
ಶುಭಘಳಿಗೆಗಾಗಿ ಮೀಸಲಿಡಬೇಡಿ
ಇಂದು, ಈಗಲೇ ಅತ್ಯಂತ ಶುಭಕರ
ಹಿಂದಿನ ಕಹಿನೆನಪುಗಳಿಂದ ,
ಈ ದಿನವನ್ನು ಕೆಡಿಸಿಕೊಳ್ಳುವುದು
ಮೂರ್ಖತನ
ನಿಮ್ಮನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ
ಯಾರು ಅವರವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ
ಜೀವನದಲ್ಲಿ ಎಲ್ಲವೂ
ಸರಿಯಿಲ್ಲ, ಆದರೂ
ಸೊಗಸಾಗಿಯೆ ಇದೆ
ಆಸಕ್ತಿ ಇದ್ದರೆ ಮಾತ್ರ
ಬದುಕೊಂದು ಪಾಠಶಾಲೆ
ಕಲಿಯಲು ಬಂದಿದ್ದೇವೆ
ಪರೀಕ್ಷೆಯಲ್ಲಿ ಪ್ರಯತ್ನಿಸುತ್ತೇವೆ
ಸಮಸ್ಯೆಗಳು ಪಠ್ಯಕ್ರಮದ ಒಂದು ಭಾಗವಷ್ಟೆ
ಬರುತ್ತವೆ, ಹೋಗುತ್ತವೆ ಕೂಡಿ ಕಳೆವ ಲೆಕ್ಕದ ಹಾಗೆ
ಕಲಿತದ್ದು ಕೊನೆಯವರೆಗು ಉಳಿಯುತ್ತದೆ
ಎಚ್ಚರವಿದ್ದಾಗಲೇ ಹೆಚ್ಚು
ಕನಸು ಕಾಣುವುದು ಲೇಸು
ಉಲ್ಲಾಸ, ಉತ್ಸಾಹ, ಉಮ್ಮಸ್ಸು
ಹಾಗು ಸ್ನೇಹಿತರು, ಸಂಸಾರ ,
ನಂಬಿಕೆಯಿರಲು ಬಾಳು ಸುಂದರ
ನಿಶ್ಯಬ್ದ ವಾತಾವರಣದಲ್ಲಿ
ಕನಿಷ್ಟ ಹತ್ತು ನಿಮಿಷವಾದರು
ಕಳೆಯುವುದು ಆರೋಗ್ಯಕ್ಕೆ ಅಗತ್ಯ
(ಮೂಲ ಆಂಗ್ಲಭಾಷೆ )
ಹೋಲಿಕೆ ಏಕೆ ?
ಅವರ ಹಾದಿಯ ಬಗ್ಗೆ
ನಮಗರಿವಿಲ್ಲದಿದ್ದಾಗ
ನಮ್ಮ ಸಂತೋಷಕ್ಕೆ ಯಾರೋ
ನಾಯಕರಲ್ಲ ?
ನಮ್ಮ ಹೊರತು
ನಮ್ಮ ಬಗ್ಗೆ ಬೇರೆಯವರ
ಅಭಿಪ್ರಾಯ, ಅನಿಸಿಕೆಗಳು
ಆರೋಗ್ಯವಾಗಿ, ಸರಿಯಾಗಿದ್ದಲ್ಲಿ ಸ್ವೀಕರಿಸಿ ,
ಇಲ್ಲವಾದರೆ ನಿರಾಕರಿಸಿ
ಪರಿಸ್ಥಿತಿ ಎಷ್ಟೇ ಚೆನ್ನಾಗಿ
ಅಥವ ಕೆಟ್ಟದಾಗಿದ್ದರು
ಅದು ಖಂಡಿತ ಬದಲಾಗುತ್ತದೆ
ಉಪಯೋಗಕ್ಕೆ ಬಾರದ ,
ಹಿತವೆನಿಸದ ಅಥವ
ಸಂತಸ ತರದವುಗಳಿಂದ ಆದಷ್ಟು
ದೂರವಿರಲು ಯತ್ನಿಸಿ
ಮನಸು ಹೇಗೇ ಇರಲಿ ,
ಎಲ್ಲೇ ಇರಲಿ, ನಮ್ಮ ಹತೋಟಿಯಲ್ಲಿರಲಿ
ಏಳಿ, ಎದ್ದೇಳಿ ಸಮಸ್ಯೆಗಳ
ಎದೆಗುಂದದೆ ಎದುರಿಸಿ
ಹತ್ತರಿಂದ ಮೂವತ್ತು ನಿಮಿಷವಾದರು
ಉಮ್ಮಸ್ಸಿನಿಂದ ದಿನ ನಡೆಯುವುದು
ಅಭ್ಯಾಸ ಮಾಡಿಕೊಳ್ಳಿ
ಪ್ರತಿ ಮುಂಜಾನೆ ಏಳುವಾಗ
ಅಂದಿನ ಉದ್ದೇಶ ಸಂತೋಷವಾಗಿರಬೇಕು
ಎಂಬ ವಾಕ್ಯವನ್ನು ಮರೆಯದೆ ಪಠಿಸಿ
ನಮ್ಮ ಸಾಕಷ್ಟು ಸಮಯ
ಎಪ್ಪತ್ತು ವರ್ಷ ಮೇಲ್ಪಟ್ಟು
ಆರು ವರ್ಷದೊಳಗಿನವರೊಂದಿಗೆ
ಕಳೆದರೆ, ಹೆಚ್ಚು ನಗುವಿರುತ್ತದೆ
ಪ್ರತಿದಿನ ಕನಿಷ್ಟ ಮೂವರನ್ನಾದರು
ನಗಿಸುವ ಪ್ರಯತ್ನ ಆರೋಗ್ಯಕರ
ಸದಾ ಉತ್ಸಾಹ, ಉಮ್ಮಸ್ಸು ಹಾಗು
ನಗುವಿನಿಂದಿರಲು ಯತ್ನಿಸಿದಾಗ
ನಕಾರಾತ್ಮಕ ವಿಷಯಗಳು
ತಾನಾಗಿಯೇ ದೂರವಿರುತ್ತವೆ
ಬದುಕು ಅತ್ಯಲ್ಪ ಅವಧಿ ಮಾತ್ರ
ದ್ವೇಷಿಸುವುದಕ್ಕೆ ಕಾಲಹರಣ ಬೇಡ
ಎಲ್ಲ ವಾದಗಳು ಗೆಲ್ಲಬೇಕೆಂದಿಲ್ಲ
ಒಪ್ಪಿಗೆಯಿಲ್ಲವೆಂದು ಒಪ್ಪಿಕೊಳ್ಳುವುದು ಸೂಕ್ತ
ಸಂಸಾರದೊಂದಿಗೆ ಹೆಚ್ಚು ಸಂಪರ್ಕ
ಹಾಗು ಸಮಯ ಕೊಡುವುದು ಅಗತ್ಯ
ನೆನಪಿರಲಿ ಮನುಜರು ತುಂಬಾ
ಅದೃಷ್ಟವಂತರು, ಸಮಸ್ಯೆಗಳಿಂದ
ಕಲಿಯಲು ಅವರಿಗೆ ಮಾತ್ರ ಸಾಧ್ಯ
ಪಯಣ ಸಂತಸಕರ, ಸುಖಕರವಾಗಿರಲಿ
ಅತಿಯಾದ ಅವಸರ, ವೇಗಕ್ಕೆ ಆಧ್ಯತೆ ಬೇಡ
ವೇಗ, ಉದ್ವೇಗ ಕೊನೆಯಾಗುವವು ಬೇಗ
ಸುಖಕರ ಪಯಣವೆ ಏಕೈಕ ಗುರಿಯಾಗಿರಲಿ
ಪ್ರತಿರಾತ್ರಿ ಮಲಗುವ ಮುನ್ನ
ದಿನದ ಸಂತಸ, ಸಾಧನೆ ಸ್ಮರಿಸಿ
ಸರಿಯಾದ ಮಾರ್ಗ
ಸರಿಯಾದ ಮಾತು
ಸರಿಯಾದ ಮನಸು
ಸರಿಯಾದ ಕ್ರಿಯೆಯಲ್ಲಿ
ವಿಶ್ವಾಸವಿರಲಿ
ಅತ್ಯುತ್ತಮವಾದುದು
ಇನ್ನೂ ಬರಬೇಕಿದೆ
ನಂಬಿಕೆಯಿರಲಿ
ಅನಾರೋಗ್ಯದಲ್ಲಿ ನಮ್ಮ ಉದ್ಯೋಗ
ನಮ್ಮನ್ನು ರಕ್ಷಿಸುವುದಿಲ್ಲ
ಸ್ನೇಹಿತರು ನೆರವಾಗುತ್ತಾರೆ
ಸ್ನೇಹಿತರಿರಲಿ ,
ಮುಖ್ಯವಾಗಿ ಅವರೊಂದಿಗೆ ಸಂಪರ್ಕವಿರಲಿ
ಕಾಲ ಎಲ್ಲವನ್ನು ವಾಸಿ ಮಾಡುತ್ತದೆ ,
ಮರೆಸುತ್ತದೆ ಅದಕ್ಕೆ ಅವಕಾಶ ಕೊಡಿ
ಎಲ್ಲರನ್ನು ಎಲ್ಲ ತಪ್ಪುಗಳಿಗಾಗಿ ಕ್ಷಮಿಸುವುದರಿಂದ
ಮನಸು ಹಗುರ, ಆರೋಗ್ಯಕರವಾಗಿರುವುದು
ಹಣತೆ ಬೆಳಗಿ ಕತ್ತಲೋಡಿಸಿ
ಒಳ್ಳೆಯದು, ಇಷ್ಟವಾಗುವುದು ತಪ್ಪದೆ ಬಳಸಿ
ಯಾವುದನ್ನೂ ಶುಭಕಾರ್ಯ ,
ಶುಭಘಳಿಗೆಗಾಗಿ ಮೀಸಲಿಡಬೇಡಿ
ಇಂದು, ಈಗಲೇ ಅತ್ಯಂತ ಶುಭಕರ
ಹಿಂದಿನ ಕಹಿನೆನಪುಗಳಿಂದ ,
ಈ ದಿನವನ್ನು ಕೆಡಿಸಿಕೊಳ್ಳುವುದು
ಮೂರ್ಖತನ
ನಿಮ್ಮನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ
ಯಾರು ಅವರವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ
ಜೀವನದಲ್ಲಿ ಎಲ್ಲವೂ
ಸರಿಯಿಲ್ಲ, ಆದರೂ
ಸೊಗಸಾಗಿಯೆ ಇದೆ
ಆಸಕ್ತಿ ಇದ್ದರೆ ಮಾತ್ರ
ಬದುಕೊಂದು ಪಾಠಶಾಲೆ
ಕಲಿಯಲು ಬಂದಿದ್ದೇವೆ
ಪರೀಕ್ಷೆಯಲ್ಲಿ ಪ್ರಯತ್ನಿಸುತ್ತೇವೆ
ಸಮಸ್ಯೆಗಳು ಪಠ್ಯಕ್ರಮದ ಒಂದು ಭಾಗವಷ್ಟೆ
ಬರುತ್ತವೆ, ಹೋಗುತ್ತವೆ ಕೂಡಿ ಕಳೆವ ಲೆಕ್ಕದ ಹಾಗೆ
ಕಲಿತದ್ದು ಕೊನೆಯವರೆಗು ಉಳಿಯುತ್ತದೆ
ಎಚ್ಚರವಿದ್ದಾಗಲೇ ಹೆಚ್ಚು
ಕನಸು ಕಾಣುವುದು ಲೇಸು
ಉಲ್ಲಾಸ, ಉತ್ಸಾಹ, ಉಮ್ಮಸ್ಸು
ಹಾಗು ಸ್ನೇಹಿತರು, ಸಂಸಾರ ,
ನಂಬಿಕೆಯಿರಲು ಬಾಳು ಸುಂದರ
ನಿಶ್ಯಬ್ದ ವಾತಾವರಣದಲ್ಲಿ
ಕನಿಷ್ಟ ಹತ್ತು ನಿಮಿಷವಾದರು
ಕಳೆಯುವುದು ಆರೋಗ್ಯಕ್ಕೆ ಅಗತ್ಯ
(ಮೂಲ ಆಂಗ್ಲಭಾಷೆ )
Categories: ಕನ್ನಡ ಪುಟಗಳು
ಆಕೆ
ಮೋಹಕ ಕಣ್ಣಿನ ಕವಿತೆಗೆ
ಮೋಸ ಹೋಗದಿರು ಓ ಮನಸೆ
ಮತ್ತೆ ಕಾಣುವ ಹಂಬಲಕೆ
ಮತ್ತೆ ಸೋಲದಿರು ನೀ ಕೂಸೆ
ಕನಿಕರವಿಲ್ಲದ ಆ ನೋಟ
ಕಟ್ಟುತ ಕನಸಿನ ತೋಟ
ಎಲ್ಲೆಡೆ ಹಸಿರನು ತುಂಬುತ
ಹಸಿವಿನ ಮೂಲಕ ಸೆಳೆತ
ಚಂಚಲ ಮನಸಿನ ಓ ಚೆಲುವೆ
ಮಿಂಚುಳ್ಳಿಯಂತೆ ಮಿನುಗುವೆ
ಕಾಮನಬಿಲ್ಲು ಬಿಡಿಸುತ ನೀನು
ಮೊನಚಾದ ಕೊಕ್ಕಿಂದ ಕುಕ್ಕುವೆ
ಒಮ್ಮೆಗೆ ಪ್ರಳಯದ ಅನುಭೂತಿ
ಒಳಗಡಗಿದೆ ಹಿಡಿಸುವ ಭೀತಿ
ಹೇಳಲಾಗದ ಮನಮಿಡಿತ
ಹಿಡಿತಕೆ ಸಿಗದಿಹ ಈ ತುಡಿತ
ಮೋಸ ಹೋಗದಿರು ಓ ಮನಸೆ
ಮತ್ತೆ ಕಾಣುವ ಹಂಬಲಕೆ
ಮತ್ತೆ ಸೋಲದಿರು ನೀ ಕೂಸೆ
ಕನಿಕರವಿಲ್ಲದ ಆ ನೋಟ
ಕಟ್ಟುತ ಕನಸಿನ ತೋಟ
ಎಲ್ಲೆಡೆ ಹಸಿರನು ತುಂಬುತ
ಹಸಿವಿನ ಮೂಲಕ ಸೆಳೆತ
ಚಂಚಲ ಮನಸಿನ ಓ ಚೆಲುವೆ
ಮಿಂಚುಳ್ಳಿಯಂತೆ ಮಿನುಗುವೆ
ಕಾಮನಬಿಲ್ಲು ಬಿಡಿಸುತ ನೀನು
ಮೊನಚಾದ ಕೊಕ್ಕಿಂದ ಕುಕ್ಕುವೆ
ಒಮ್ಮೆಗೆ ಪ್ರಳಯದ ಅನುಭೂತಿ
ಒಳಗಡಗಿದೆ ಹಿಡಿಸುವ ಭೀತಿ
ಹೇಳಲಾಗದ ಮನಮಿಡಿತ
ಹಿಡಿತಕೆ ಸಿಗದಿಹ ಈ ತುಡಿತ
Categories: ಕನ್ನಡ ಪುಟಗಳು
ಏನು ಸಮಾಚಾರ?
ಪಶ್ಚಿಮದಲ್ಲಿ ದೊಡ್ಡಾನೆಗಳಿಗೆ
ದೊಡ್ಡ ಪೆಟ್ಟು
ಏಳಲಾಗದ ಕುಸಿತ
ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ
ನೌಕರರ ಕೆಲಸಕ್ಕೆ ಕುತ್ತು
ಕಚ್ಛಾತೈಲ ಬೆಲೆ ಇಳಿಕೆ
ಇತ್ತ ಷೇರುಪೇಟೆ ಸೂಶ್ಚ್ಯಂಕ ದಕ್ಷಿಣದತ್ತ
ಮರಿ ಆನೆಗಳ ಮೊಗದಲ್ಲಿ ಕಳವಳ
ನಲ್ವತ್ತಾರು ದಾಟಿದ ರುಪಾಯಿ
ತೈಲ ಇಳಿಕೆ, ರುಪಾಯಿ ಏರಿಕೆ
ಪ್ರಯೋಜನವಿಲ್ಲ
ಬೆಕ್ಕಿಗೆ ಸಂಕಟ ,
ಇಲಿಗೆ ಪ್ರಾಣ ಸಂಕಟ
ಮತ್ತೊಂದು ಕಡೆ ಸರಣಿ
ಬಾಂಬ್ ಬ್ಲಾಸ್ಟ್ಸ್
ಮೂವತ್ತು ಮರಣ ,
ಅದೇ ಸಮಾಧಾನ
ಬಿ ಎಮ್ ಡಬ್ಲ್ಯೂ ಆರೋಪಿಗೆ ಶಿಕ್ಷೆ
ಆರುಷಿ ಕೊಲೆ ಆರೋಪಿಗಳಿಗೆ
ಬಂಧನ ಬಿಡುಗಡೆ
ಅಣು ಒಪ್ಪಂದ ಆಲ್ಮೋಸ್ಟ್ ಕ್ಲಿಯರ್
ಆಪರೇಶನ್ ಕಮಲ ಸಿಕ್ಸರ್
ಶಾಲಾ ವಿದ್ಯಾರ್ಥಿಗಳಿಗೆ
ಉಚಿತ ಬಸ್ ಪಾಸ್
ಜೊತೆಗೆ ಬೈಸಿಕಲ್
ಮತಾಂತರದ ವಿರುದ್ಧ
ಗಲಬೆ, ಗೊಂದಲ, ಇರಿತ
ಅವರು ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ನಕಾರ
ಇದೇ ಸುದ್ದಿ ಪೇಪರ್ನಲ್ಲಿ ,
ಟೀವಿಗಳಲ್ಲಿ, ಇಂಟರ್ನೆಟ್ಟಲ್ಲಿ ,
ಬಸ್ಸಲ್ಲಿ, ಟ್ರೈನಲ್ಲಿ, ಶಾಪಿಂಗ್
ಮಾಲ್ನಲ್ಲಿ, ಗೆಳೆಯರ ಹರಟೆಯಲ್ಲಿ
ಹ್ಹೆ...ತ್ತೇರಿ ತಲೆ ಎಕ್ಕುಟ್ಟೋಗಿದೆ
ಮಗಳೆ, ತೇಜಸ್ವಿ ಕರ್ವಾಲೋ
ಪುಸ್ತಕ ಕೊಡಮ್ಮ ಓದ್ಕೊಡ್ತೀನಿ
ದೊಡ್ಡ ಪೆಟ್ಟು
ಏಳಲಾಗದ ಕುಸಿತ
ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ
ನೌಕರರ ಕೆಲಸಕ್ಕೆ ಕುತ್ತು
ಕಚ್ಛಾತೈಲ ಬೆಲೆ ಇಳಿಕೆ
ಇತ್ತ ಷೇರುಪೇಟೆ ಸೂಶ್ಚ್ಯಂಕ ದಕ್ಷಿಣದತ್ತ
ಮರಿ ಆನೆಗಳ ಮೊಗದಲ್ಲಿ ಕಳವಳ
ನಲ್ವತ್ತಾರು ದಾಟಿದ ರುಪಾಯಿ
ತೈಲ ಇಳಿಕೆ, ರುಪಾಯಿ ಏರಿಕೆ
ಪ್ರಯೋಜನವಿಲ್ಲ
ಬೆಕ್ಕಿಗೆ ಸಂಕಟ ,
ಇಲಿಗೆ ಪ್ರಾಣ ಸಂಕಟ
ಮತ್ತೊಂದು ಕಡೆ ಸರಣಿ
ಬಾಂಬ್ ಬ್ಲಾಸ್ಟ್ಸ್
ಮೂವತ್ತು ಮರಣ ,
ಅದೇ ಸಮಾಧಾನ
ಬಿ ಎಮ್ ಡಬ್ಲ್ಯೂ ಆರೋಪಿಗೆ ಶಿಕ್ಷೆ
ಆರುಷಿ ಕೊಲೆ ಆರೋಪಿಗಳಿಗೆ
ಬಂಧನ ಬಿಡುಗಡೆ
ಅಣು ಒಪ್ಪಂದ ಆಲ್ಮೋಸ್ಟ್ ಕ್ಲಿಯರ್
ಆಪರೇಶನ್ ಕಮಲ ಸಿಕ್ಸರ್
ಶಾಲಾ ವಿದ್ಯಾರ್ಥಿಗಳಿಗೆ
ಉಚಿತ ಬಸ್ ಪಾಸ್
ಜೊತೆಗೆ ಬೈಸಿಕಲ್
ಮತಾಂತರದ ವಿರುದ್ಧ
ಗಲಬೆ, ಗೊಂದಲ, ಇರಿತ
ಅವರು ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ನಕಾರ
ಇದೇ ಸುದ್ದಿ ಪೇಪರ್ನಲ್ಲಿ ,
ಟೀವಿಗಳಲ್ಲಿ, ಇಂಟರ್ನೆಟ್ಟಲ್ಲಿ ,
ಬಸ್ಸಲ್ಲಿ, ಟ್ರೈನಲ್ಲಿ, ಶಾಪಿಂಗ್
ಮಾಲ್ನಲ್ಲಿ, ಗೆಳೆಯರ ಹರಟೆಯಲ್ಲಿ
ಹ್ಹೆ...ತ್ತೇರಿ ತಲೆ ಎಕ್ಕುಟ್ಟೋಗಿದೆ
ಮಗಳೆ, ತೇಜಸ್ವಿ ಕರ್ವಾಲೋ
ಪುಸ್ತಕ ಕೊಡಮ್ಮ ಓದ್ಕೊಡ್ತೀನಿ
Categories: ಕನ್ನಡ ಪುಟಗಳು
ಕನ್ನಡಪ್ರಭದಲ್ಲಿ - ಕೂಗು...ಎನ್ನ ಮನುಕುಲಕೆ!!!
ಕನ್ನಡ ಪ್ರಭ - ಸೆಪ್ಟಂಬರ್ 16, 2008,
ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....
ಬ್ಲಾಗಾಯಣ ಅಂಕಣದಲ್ಲಿ ನನ್ನ ಕೂಗು ಬ್ಲಾಗನ್ನು 'ದಡ' ಕವನದೊಂದಿಗೆ ಓದುಗರಿಗೆ ಪರಿಚಯಿಸಿದ ನಿಮಗೆ ವಿನಮ್ರ ವಂದನೆಗಳು.
-ಚಂದಿನ
ಎನ್ನ ಕೂಗಿನಲ್ಲಿ ದಡದ ನೆನಪು
ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ
ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ
ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ
ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು
ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ
ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....
ಬ್ಲಾಗಾಯಣ ಅಂಕಣದಲ್ಲಿ ನನ್ನ ಕೂಗು ಬ್ಲಾಗನ್ನು 'ದಡ' ಕವನದೊಂದಿಗೆ ಓದುಗರಿಗೆ ಪರಿಚಯಿಸಿದ ನಿಮಗೆ ವಿನಮ್ರ ವಂದನೆಗಳು.
-ಚಂದಿನ
ಎನ್ನ ಕೂಗಿನಲ್ಲಿ ದಡದ ನೆನಪು
ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ
ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ
ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ
ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು
ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ
Categories: ಕನ್ನಡ ಪುಟಗಳು
ಮಳೆ
ಮಳೆ ಬಂತು ಮಳೆ, ಧೋ ಅಂತ ಮಳೆ
ನಿಲ್ಲದ, ಲಯ ಬಿಡಲೊಲ್ಲದ ಮಳೆ
ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
ಹುಚ್ಚಾಪಟ್ಟೆ ಚಚ್ಚುವ ಮಳೆ
ಅರ್ಧ ತಾಸಿನ ಬರಗಾಲದ ನಂತರ
ತನು ಮನ ತಣಿಸುವ ಮೋಹಕ ಮಳೆ
ಕುತೂಹಲ ಕೆರಳಿಸಿ, ಕಲರವ ಮೂಡಿಸಿ
ಸುರಿಯುತ ಸುರಿಯುವ ಸೋನೆಮಳೆ
ಮಾರನೆ ದಿನಕೆ ಅಲ್ಪವಿರಾಮ
ಆಗಸಕಾಗ ತುಸು ಆರಾಮ
ಗೆಳೆಯರೊಂದಿಗೆ ಹರಟೆಗೆ ಕೂತರೆ
ತರಾಟೆಗೆ ಶುರುವಿಟ್ಟ ಜೋರು ಮಳೆ
( ಮೂಲ ಆಂಗ್ಲ ಭಾಷೆ – ಮೊದಲ ಪ್ರಯತ್ನ ಕ್ಷಮೆಯಿರಲಿ )
ನಿಲ್ಲದ, ಲಯ ಬಿಡಲೊಲ್ಲದ ಮಳೆ
ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
ಹುಚ್ಚಾಪಟ್ಟೆ ಚಚ್ಚುವ ಮಳೆ
ಅರ್ಧ ತಾಸಿನ ಬರಗಾಲದ ನಂತರ
ತನು ಮನ ತಣಿಸುವ ಮೋಹಕ ಮಳೆ
ಕುತೂಹಲ ಕೆರಳಿಸಿ, ಕಲರವ ಮೂಡಿಸಿ
ಸುರಿಯುತ ಸುರಿಯುವ ಸೋನೆಮಳೆ
ಮಾರನೆ ದಿನಕೆ ಅಲ್ಪವಿರಾಮ
ಆಗಸಕಾಗ ತುಸು ಆರಾಮ
ಗೆಳೆಯರೊಂದಿಗೆ ಹರಟೆಗೆ ಕೂತರೆ
ತರಾಟೆಗೆ ಶುರುವಿಟ್ಟ ಜೋರು ಮಳೆ
( ಮೂಲ ಆಂಗ್ಲ ಭಾಷೆ – ಮೊದಲ ಪ್ರಯತ್ನ ಕ್ಷಮೆಯಿರಲಿ )
Categories: ಕನ್ನಡ ಪುಟಗಳು
ಸಾಕಾಗಿದೆ
ಸಾಕಾಗಿದೆ
ಉದ್ಯೋಗ
ಉದ್ವೇಗ
ಉದ್ರೇಕ
ಸಾಕಾಗಿದೆ
ಮಡದಿ
ಮಗು
ಮನೆ
ಸಾಕಾಗಿದೆ
ಸ್ನೇಹ
ಬಂಧು
ಬಳಗ
ಸಾಕಾಗಿದೆ
ಗುದ್ದಾಟ
ಒದ್ದಾಟ
ಹುಡುಕಾಟ
ಸಾಕಾಗಿದೆ
ಸ್ಪರ್ಧೆ
ವೇಗ
ಒತ್ತಡ
ಸಾಕಾಗಿದೆ
ಸೋಲು
ಸೆಳೆತ
ಸವಾಲು
ಸಾಕಾಗಿದೆ
ನಿರಾಸೆ
ನೀರಸ
ನಿರುತ್ಸಾಹ
ಸಾಕಾಗಿದೆ
ನಗರ
ಸದ್ದು
ಗದ್ದಲ
ಬೇಕಾಗಿದೆ
ಮೌನ
ಮೌನ
ಮೌನ
ಉದ್ಯೋಗ
ಉದ್ವೇಗ
ಉದ್ರೇಕ
ಸಾಕಾಗಿದೆ
ಮಡದಿ
ಮಗು
ಮನೆ
ಸಾಕಾಗಿದೆ
ಸ್ನೇಹ
ಬಂಧು
ಬಳಗ
ಸಾಕಾಗಿದೆ
ಗುದ್ದಾಟ
ಒದ್ದಾಟ
ಹುಡುಕಾಟ
ಸಾಕಾಗಿದೆ
ಸ್ಪರ್ಧೆ
ವೇಗ
ಒತ್ತಡ
ಸಾಕಾಗಿದೆ
ಸೋಲು
ಸೆಳೆತ
ಸವಾಲು
ಸಾಕಾಗಿದೆ
ನಿರಾಸೆ
ನೀರಸ
ನಿರುತ್ಸಾಹ
ಸಾಕಾಗಿದೆ
ನಗರ
ಸದ್ದು
ಗದ್ದಲ
ಬೇಕಾಗಿದೆ
ಮೌನ
ಮೌನ
ಮೌನ
Categories: ಕನ್ನಡ ಪುಟಗಳು
ಮತ್ತೆ ಬರುವನು ಚಂದಿರ - 2
ರವಿಯ ಜೊತೆಗೆ ನಿತ್ಯ ಪಯಣ
ಉರಿವ ಬಿಸಿಲು ಸುರಿದು ಸ್ನಾನ
ಬಿಸಿಲು ಹೀರಿ ಬೆಳಕು ಚೆಲ್ಲಿ
ಚದುರಂಗವಾಡೊ ಚಂದಿರ
ರಾಗ, ದ್ವೇಷ ಬಾಣ ಬೀಸಿ
ಚಾಕು ಚೂರಿ ಬೆನ್ನಿಗಿರಿಸಿ
ಮದ್ದುಗುಂಡು ಸಿಡಿಸಿದಾತ
ಸುಖಪಡುವನೆ ಚಂದಿರ
ಜಾತಿ, ಮತವ ಬಿತ್ತಿ ಬೆಳೆದು
ಶಾಂತಿ, ಸಹನೆ ಕೊಚ್ಚಿ ಕಡಿದು
ಸಾಧು, ಸಂತ, ಸಜ್ಜನನೆಂದರೆ
ಸಹಿಸುವನೆ ಚಂದಿರ
ಹಗಲು ಇರುಳು ದಿನದ ಸಾಲು
ಮುಗಿದ ಮೇಲೆ ಹೊಸತು ಬಾಳು
ತಿಳಿದು ತಿಳಿಯದೇಳು ಬೀಳು
ಸಹಜವೆಲ್ಲ ಚಂದಿರ
ದಿನಕೆ ನೂರು ಜನನ ಮರಣ
ಬೇಕೆ ಇದಕೆ ಕಾಲಹರಣ
ಇರುವ ಮೂರು ದಿನವು ಗೆಳೆಯ
ನಗುತ ನಗಿಸು ಚಂದಿರ
ಹಸಿರೆ ಉಸಿರು ಉಳಿಸು ಹೆಸರು
ಉಳಿಸು ಮಳೆ ಹನಿಯ ನೀರು
ಬೆಳೆಸಿ ಹಸಿರು, ಉಳಿಸಿ ನೀರು
ಉಸಿರು ನೀಡೊ ಚಂದಿರ
ನೆಟ್ಟು ನೋಟ ನೆರಳಿನಲ್ಲಿ
ಬೆಳಕು ಬಿಟ್ಟು ಇರುಳಿನಲ್ಲಿ
ಸತತ ಪಯಣ ನಿಲ್ಲದಿರಲಿ
ಜಯವು ನಿನದೆ ಚಂದಿರ
ಗೊಂದಲಗಳ ಗೂಡು ಕಟ್ಟಿ
ದ್ವಂದ್ವ ಮನದ ರೆಕ್ಕೆಬಿಚ್ಚಿ
ಹಾರಿ ಹೋದ ಹಕ್ಕಿ ನಿನ್ನ
ನೋಡಿ ನಗುವ ಚಂದಿರ
ಇಂಗುತಿಂದ ಮಂಗನಂತೆ
ರೆಂಬೆ ಕೊಂಬೆ ಜಿಗಿಯುತ
ಜಾರಿ ಬಿದ್ದು ಮುರಿದ ಕೈಗೆ
ಯಾರ ಜರಿವೆ ಚಂದಿರ
ಕಣ್ಣ ಮುಚ್ಚಿ ಕತ್ತಲೆಂದು
ಕುಣಿಯಲೇಕೆ ಆತುರ
ಕಳೆದುಕೊಂಡು ಕೊರಗಲೇಕೆ
ಕಣ್ಣ ತೆರೆಯೋ ಚಂದಿರ
ಉರಿವ ಬಿಸಿಲು ಸುರಿದು ಸ್ನಾನ
ಬಿಸಿಲು ಹೀರಿ ಬೆಳಕು ಚೆಲ್ಲಿ
ಚದುರಂಗವಾಡೊ ಚಂದಿರ
ರಾಗ, ದ್ವೇಷ ಬಾಣ ಬೀಸಿ
ಚಾಕು ಚೂರಿ ಬೆನ್ನಿಗಿರಿಸಿ
ಮದ್ದುಗುಂಡು ಸಿಡಿಸಿದಾತ
ಸುಖಪಡುವನೆ ಚಂದಿರ
ಜಾತಿ, ಮತವ ಬಿತ್ತಿ ಬೆಳೆದು
ಶಾಂತಿ, ಸಹನೆ ಕೊಚ್ಚಿ ಕಡಿದು
ಸಾಧು, ಸಂತ, ಸಜ್ಜನನೆಂದರೆ
ಸಹಿಸುವನೆ ಚಂದಿರ
ಹಗಲು ಇರುಳು ದಿನದ ಸಾಲು
ಮುಗಿದ ಮೇಲೆ ಹೊಸತು ಬಾಳು
ತಿಳಿದು ತಿಳಿಯದೇಳು ಬೀಳು
ಸಹಜವೆಲ್ಲ ಚಂದಿರ
ದಿನಕೆ ನೂರು ಜನನ ಮರಣ
ಬೇಕೆ ಇದಕೆ ಕಾಲಹರಣ
ಇರುವ ಮೂರು ದಿನವು ಗೆಳೆಯ
ನಗುತ ನಗಿಸು ಚಂದಿರ
ಹಸಿರೆ ಉಸಿರು ಉಳಿಸು ಹೆಸರು
ಉಳಿಸು ಮಳೆ ಹನಿಯ ನೀರು
ಬೆಳೆಸಿ ಹಸಿರು, ಉಳಿಸಿ ನೀರು
ಉಸಿರು ನೀಡೊ ಚಂದಿರ
ನೆಟ್ಟು ನೋಟ ನೆರಳಿನಲ್ಲಿ
ಬೆಳಕು ಬಿಟ್ಟು ಇರುಳಿನಲ್ಲಿ
ಸತತ ಪಯಣ ನಿಲ್ಲದಿರಲಿ
ಜಯವು ನಿನದೆ ಚಂದಿರ
ಗೊಂದಲಗಳ ಗೂಡು ಕಟ್ಟಿ
ದ್ವಂದ್ವ ಮನದ ರೆಕ್ಕೆಬಿಚ್ಚಿ
ಹಾರಿ ಹೋದ ಹಕ್ಕಿ ನಿನ್ನ
ನೋಡಿ ನಗುವ ಚಂದಿರ
ಇಂಗುತಿಂದ ಮಂಗನಂತೆ
ರೆಂಬೆ ಕೊಂಬೆ ಜಿಗಿಯುತ
ಜಾರಿ ಬಿದ್ದು ಮುರಿದ ಕೈಗೆ
ಯಾರ ಜರಿವೆ ಚಂದಿರ
ಕಣ್ಣ ಮುಚ್ಚಿ ಕತ್ತಲೆಂದು
ಕುಣಿಯಲೇಕೆ ಆತುರ
ಕಳೆದುಕೊಂಡು ಕೊರಗಲೇಕೆ
ಕಣ್ಣ ತೆರೆಯೋ ಚಂದಿರ
Categories: ಕನ್ನಡ ಪುಟಗಳು
ದಡ
ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ
ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ
ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ
ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು
ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ
ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ
ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ
ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು
ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ
Categories: ಕನ್ನಡ ಪುಟಗಳು
ಮತ್ತೆ ಬರುವನು ಚಂದಿರ - 1
ಕೂಡಿ, ಕಳೆವ ಆಟ ತರವೆ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ
ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ
ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ
ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ
ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ
ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ
ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ
ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ
ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ
ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ
ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ
ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ
ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ
ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ
ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ
ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ
ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ
ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ
ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ
Categories: ಕನ್ನಡ ಪುಟಗಳು
ಗದ್ದಲ
ಅದುಮಿಟ್ಟ ಹಂಬಲಗಳೊಟ್ಟಾಗಿ
ತತ್ತರಿಸಿದ ಚಿತ್ತ
ಸಿಡಿದ ಸದ್ದಿನ ಗದ್ದಲ
ಸುತ್ತ ಗಡಿಬಿಡಿ ಕೋಲಾಹಲ
ಘಟಿಸಿದ ಅನಾಹುತ
ತಟಸ್ಥ ಒಮ್ಮೆಗೆ
ನೀರವ ಮೌನ
ಅಲೆ ಅಲೆಯಾಗಿ ಪಯಣ
ಸ್ಧಿತ್ಯಂತರ ಕ್ಷಣದಲಿ
ದಿಗ್ಭ್ರಮೆ, ರೋದನ
ಸಾಂತ್ವನ ಸಾಲು ಸಾಲು
ಸಂದಿಗ್ಧ ಪರಿಸ್ಥಿತಿ
ಅಸಹಾಯ ಸನ್ನಿವೇಶ
ಸತ್ಯದ ದಿಗ್ದರ್ಶನ
ಆಧ್ಯಾತ್ಮ ಅಂತರಂಗ
ಹೊಸ ಅಧ್ಯಾಯದಾರಂಭ
ತತ್ತರಿಸಿದ ಚಿತ್ತ
ಸಿಡಿದ ಸದ್ದಿನ ಗದ್ದಲ
ಸುತ್ತ ಗಡಿಬಿಡಿ ಕೋಲಾಹಲ
ಘಟಿಸಿದ ಅನಾಹುತ
ತಟಸ್ಥ ಒಮ್ಮೆಗೆ
ನೀರವ ಮೌನ
ಅಲೆ ಅಲೆಯಾಗಿ ಪಯಣ
ಸ್ಧಿತ್ಯಂತರ ಕ್ಷಣದಲಿ
ದಿಗ್ಭ್ರಮೆ, ರೋದನ
ಸಾಂತ್ವನ ಸಾಲು ಸಾಲು
ಸಂದಿಗ್ಧ ಪರಿಸ್ಥಿತಿ
ಅಸಹಾಯ ಸನ್ನಿವೇಶ
ಸತ್ಯದ ದಿಗ್ದರ್ಶನ
ಆಧ್ಯಾತ್ಮ ಅಂತರಂಗ
ಹೊಸ ಅಧ್ಯಾಯದಾರಂಭ
Categories: ಕನ್ನಡ ಪುಟಗಳು
ಆಗ
ವೇಗದ ಮನವಿಡಿದು
ಜೋರು ಉಸಿರೆಳೆದು
ನಿಧಾನಗತಿಯಲ್ಲಿ ಹೊರಬಿಡಲು
ನಿರಾಳ ಅಂತರಾಳ
ಮನೆತುಂಬ ನೆಂಟರು
ಜೋರು ಗಲಾಟೆ, ಮಂಡೆ ಬಿಸಿ ,
ಹೋದ ನಂತರ
ಮನಸು ಹಗುರ - ಭಾರ
ಒಂದೇ ಸಮನೆ ಟೀವಿ ಹಚ್ಚಿ
ಧಾರಾವಾಹಿ ನೋಡುವ ಛಟ
ಕೃತಕ ಭಾವೋದ್ರೇಕ
ನಿಂತರೆ ಮನಃಶಾಂತಿ
ನಿಮಿಷಗಟ್ಟಲೆ ಕಾಯಿಸುವ
ಟ್ರಾಫಿಕ್ ಸಿಗ್ನಲ್ಸ್
ಕ್ಷಣ ಕ್ಷಣ ರಕ್ತದೊತ್ತಡ ಏರುಪೇರು
ಗ್ರೀನ್ ಲೈಟಿಂದ ಬದುಕಿದ ತೃಪ್ತಿ
ಬಂಪರ್- ಟು - ಬಂಪರ್
ಟ್ರಾಫಿಕ್ ಜಾ...ಮ್ !
ಶೃತಿ, ಲಯ ತಪ್ಪಿದರೆ ಧರ್ಮದೇಟು, ದಂಡ
ಗೆದ್ದರೆ ದೊಡ್ಡ ನಿಟ್ಟುಸಿರು
ಜೋರು ಉಸಿರೆಳೆದು
ನಿಧಾನಗತಿಯಲ್ಲಿ ಹೊರಬಿಡಲು
ನಿರಾಳ ಅಂತರಾಳ
ಮನೆತುಂಬ ನೆಂಟರು
ಜೋರು ಗಲಾಟೆ, ಮಂಡೆ ಬಿಸಿ ,
ಹೋದ ನಂತರ
ಮನಸು ಹಗುರ - ಭಾರ
ಒಂದೇ ಸಮನೆ ಟೀವಿ ಹಚ್ಚಿ
ಧಾರಾವಾಹಿ ನೋಡುವ ಛಟ
ಕೃತಕ ಭಾವೋದ್ರೇಕ
ನಿಂತರೆ ಮನಃಶಾಂತಿ
ನಿಮಿಷಗಟ್ಟಲೆ ಕಾಯಿಸುವ
ಟ್ರಾಫಿಕ್ ಸಿಗ್ನಲ್ಸ್
ಕ್ಷಣ ಕ್ಷಣ ರಕ್ತದೊತ್ತಡ ಏರುಪೇರು
ಗ್ರೀನ್ ಲೈಟಿಂದ ಬದುಕಿದ ತೃಪ್ತಿ
ಬಂಪರ್- ಟು - ಬಂಪರ್
ಟ್ರಾಫಿಕ್ ಜಾ...ಮ್ !
ಶೃತಿ, ಲಯ ತಪ್ಪಿದರೆ ಧರ್ಮದೇಟು, ದಂಡ
ಗೆದ್ದರೆ ದೊಡ್ಡ ನಿಟ್ಟುಸಿರು
Categories: ಕನ್ನಡ ಪುಟಗಳು
ದಿನಚರಿ
ಪ್ರತಿದಿನ ಮೂರೊತ್ತು ಊಟ
ಹಗಲೆಲ್ಲ ಕೆಲಸ ,
ಗೆಳೆಯರೊಂದಿಗೆ ಹರಟೆ
ದಿನದ ವಿಶೇಷವೆ?
ಮಡದಿಯೊಂದಿಗೆ ಜಗಳ, ಮುನಿಸು ,
ಪಿಸುಮಾತು, ಸಿಹಿಮುತ್ತು ,
ಎದುಸಿರು, ನಿಟ್ಟುಸಿರು
ಸಮರ್ಥ ನಿರ್ವಹಣೆಯೆ?
ಮಗುವೆಬ್ಬಿಸಿ, ಹಲ್ಲುಜ್ಜಿ
ಹಾಲುಣಿಸಿ, ಸ್ನಾನ ,
ಶಾಲೆಯ ತಯಾರಿಯೊಂದಿಗೆ
ದಿನದ ಜವಾಬ್ದಾರಿ ಮುಗಿಯಿತೆ?
ಹೇಗಿತ್ತು ದಿನ, ಊಟವಾಯಿತೆ ,
ಆರೋಗ್ಯವೇಗಿದೆ, ಇನ್ನೇನು ಸಮಾಚಾರ ,
ಪ್ರಶ್ನೆಗಳೊಂದಿಗೆ ,
ಅಮ್ಮನ ಆರೈಕೆ ಸಾಕೆ?
ದಿನಸಿ, ತರಕಾರಿ, ಕರೆಂಟು ಬಿಲ್ಲು
ಸಂಜೆ ಮಡದಿ ಮಗುವೊಂದಿಗೆ
ಸಿನಿಮಾ, ತಿಂಡಿ, ತಿರುಗಾಟ
ಬದುಕಿಷ್ಟು ಸರಳವೆ?
ಹಗಲೆಲ್ಲ ಕೆಲಸ ,
ಗೆಳೆಯರೊಂದಿಗೆ ಹರಟೆ
ದಿನದ ವಿಶೇಷವೆ?
ಮಡದಿಯೊಂದಿಗೆ ಜಗಳ, ಮುನಿಸು ,
ಪಿಸುಮಾತು, ಸಿಹಿಮುತ್ತು ,
ಎದುಸಿರು, ನಿಟ್ಟುಸಿರು
ಸಮರ್ಥ ನಿರ್ವಹಣೆಯೆ?
ಮಗುವೆಬ್ಬಿಸಿ, ಹಲ್ಲುಜ್ಜಿ
ಹಾಲುಣಿಸಿ, ಸ್ನಾನ ,
ಶಾಲೆಯ ತಯಾರಿಯೊಂದಿಗೆ
ದಿನದ ಜವಾಬ್ದಾರಿ ಮುಗಿಯಿತೆ?
ಹೇಗಿತ್ತು ದಿನ, ಊಟವಾಯಿತೆ ,
ಆರೋಗ್ಯವೇಗಿದೆ, ಇನ್ನೇನು ಸಮಾಚಾರ ,
ಪ್ರಶ್ನೆಗಳೊಂದಿಗೆ ,
ಅಮ್ಮನ ಆರೈಕೆ ಸಾಕೆ?
ದಿನಸಿ, ತರಕಾರಿ, ಕರೆಂಟು ಬಿಲ್ಲು
ಸಂಜೆ ಮಡದಿ ಮಗುವೊಂದಿಗೆ
ಸಿನಿಮಾ, ತಿಂಡಿ, ತಿರುಗಾಟ
ಬದುಕಿಷ್ಟು ಸರಳವೆ?
Categories: ಕನ್ನಡ ಪುಟಗಳು
ಮತ್ತೆ ಬರುವನು ಚಂದಿರ
ಆರೋಹ, ಅವರೋಹವದ್ಭುತ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ
ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ
ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ
ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ
ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ
ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ
ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ
ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ
ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ
ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ
ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ
ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ
ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ
ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ
ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ
ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ
ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ
ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ
ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ
Categories: ಕನ್ನಡ ಪುಟಗಳು
ಅಳುತ್ತಿದೆ
ಮಗು ಅಳುತ್ತಿದೆ ಆಗಿನಿಂದ
ರೆಪ್ಪೆ ಒತ್ತಿದಷ್ಟೂ ಹೊಮ್ಮುವ
ಕಣ್ಣೀರ ಕಾಲುವೆ ಕೆನ್ನೆಮೇಲೆ
ಕಾಲ್ದಾರಿಯಂತೆ
ಮಿತಿಮೀರಿದ ಮುಗ್ಧತೆ
ಅಳುವಾಗಲೂ ಅಣಕಿಸುವುದೇ
ಅರಿವಿರದ ಮಗುವು
ಅಳುವಿಂದ ಎಲ್ಲ ತಿಳಿಸುವುದೆ
ಸಜ್ಜನರ ಚಿತ್ತ
ಅವರವರ ಹಾದಿಯತ್ತ
ನೋಡಿಯು ನೋಡದಂತೆ
ನಿರ್ಲಿಪ್ತ ನೋಟ ಮಗುವತ್ತ
ವಿರಾಮವಿಲ್ಲದ ಅಳು
ಬೆಲೆಯಿಲ್ಲ ಕಂದ ಬೇಡಿದರು
ಹಸಿವೋ, ನೋವೋ
ಇಲ್ಲವೇ ಆಲಿಸುವ ಆಪ್ತರು
ಇದ್ದರು ಇಲ್ಲದ ಬದುಕು
ಆದರೂ ಬದುಕುವಾಸೆ ಆಗಸದಷ್ಟು
ಕಂದ ಅಳುತ್ತಲೇ ಇರು ಅರಿಯುವವರೆಗೆ
ಸಂತೈಸಲು ಇಲ್ಲಿ ಯಾರಿಲ್ಲ
ರೆಪ್ಪೆ ಒತ್ತಿದಷ್ಟೂ ಹೊಮ್ಮುವ
ಕಣ್ಣೀರ ಕಾಲುವೆ ಕೆನ್ನೆಮೇಲೆ
ಕಾಲ್ದಾರಿಯಂತೆ
ಮಿತಿಮೀರಿದ ಮುಗ್ಧತೆ
ಅಳುವಾಗಲೂ ಅಣಕಿಸುವುದೇ
ಅರಿವಿರದ ಮಗುವು
ಅಳುವಿಂದ ಎಲ್ಲ ತಿಳಿಸುವುದೆ
ಸಜ್ಜನರ ಚಿತ್ತ
ಅವರವರ ಹಾದಿಯತ್ತ
ನೋಡಿಯು ನೋಡದಂತೆ
ನಿರ್ಲಿಪ್ತ ನೋಟ ಮಗುವತ್ತ
ವಿರಾಮವಿಲ್ಲದ ಅಳು
ಬೆಲೆಯಿಲ್ಲ ಕಂದ ಬೇಡಿದರು
ಹಸಿವೋ, ನೋವೋ
ಇಲ್ಲವೇ ಆಲಿಸುವ ಆಪ್ತರು
ಇದ್ದರು ಇಲ್ಲದ ಬದುಕು
ಆದರೂ ಬದುಕುವಾಸೆ ಆಗಸದಷ್ಟು
ಕಂದ ಅಳುತ್ತಲೇ ಇರು ಅರಿಯುವವರೆಗೆ
ಸಂತೈಸಲು ಇಲ್ಲಿ ಯಾರಿಲ್ಲ
Categories: ಕನ್ನಡ ಪುಟಗಳು
